ಬ್ರೇಕಿಂಗ್ ನ್ಯೂಸ್
21-11-21 09:54 pm HK News Desk ಕ್ರೈಂ
ತಿರುಚ್ಚಿ, ನ.21: ಆಡು ಕಳ್ಳರನ್ನು ಬೆನ್ನಟ್ಟಿ ಹೋಗಿದ್ದ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಕಳ್ಳರು ಮಚ್ಚಿನಲ್ಲಿ ಕಡಿದು ಕೊಲೆಗೈದ ಘಟನೆ ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಕಿರಾನೂರು ಎಂಬಲ್ಲಿ ನಡೆದಿದೆ.
ನವಲಪಟ್ಟು ಠಾಣೆಯ ಎಸ್ಐ ಭೂಮಿನಾಥನ್ (55) ಕೊಲೆಯಾದವರು. ಭೂಮಿನಾಥನ್ ಶನಿವಾರ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಭಾನುವಾರ ನಸುಕಿನ ವೇಳೆ ಗಸ್ತಿನಲ್ಲಿದ್ದಾಗ, ಬೈಕಿನಲ್ಲಿ ಸರದಿಯಂತೆ ಯುವಕರು ಆಡುಗಳನ್ನು ಹಿಡಿದು ಒಯ್ಯುತ್ತಿದ್ದುದು ಕಂಡುಬಂದಿದೆ. ಕೂಡಲೇ ಅವರನ್ನು ನಿಲ್ಲಿಸಲು ಸೂಚಿಸಿದ್ದು, ಕಳ್ಳರು ನಿಲ್ಲಿಸದೆ ಪರಾರಿಯಾಗಿದ್ದಾರೆ.
ಕರ್ತವ್ಯದಲ್ಲಿದ್ದ ಎಸ್ಐ ಭೂಮಿನಾಥನ್ ತನ್ನ ಬೈಕಿನಲ್ಲಿ ಅವರನ್ನು ಹಿಂಬಾಲಿಸಿದ್ದು, ಕಳ್ಳರು ಕಿರಾನೂರಿನ ಕಳಮಾವೂರು ಗ್ರಾಮದತ್ತ ನುಗ್ಗಿದ್ದಾರೆ. ಅಲ್ಲಿವರೆಗೂ ಹಿಂಬಾಲಿಸಿ ಹೋಗಿದ್ದ ಎಸ್ಐ, ಇಬ್ಬರನ್ನು ಅಡ್ಡಗಟ್ಟಿ ಹಿಡಿದಿದ್ದಾರೆ. ಆದರೆ, ಅವರು ತಮ್ಮ ಕೈಯಲ್ಲಿದ್ದ ಮಚ್ಚಿನಲ್ಲಿ ಎಸ್ಐ ತಲೆಗೆ ಕಡಿದಿದ್ದು, ಎಸ್ಐ ಭೂಮಿನಾಥನ್ ಸ್ಥಳದಲ್ಲೇ ನೆಲಕ್ಕುರುಳಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂತರ ವಿಷಯ ತಿಳಿದು ಕಿರಾನೂರು ಪೊಲೀಸರು ಸ್ಥಳಕ್ಕೆ ಬಂದಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಭೂಮಿನಾಥನ್ ತಿರುಚ್ಚಿ ಜಿಲ್ಲೆಯ ನವಲಪಟ್ಟು ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿದ್ದರು. ಆದರೆ, ಕೊಲೆ ಘಟನೆ ನಡೆದಿರುವುದು ಪಕ್ಕದ ಪುದುಕೋಟೈ ಜಿಲ್ಲೆಯ ಕಿರಾನೂರು ಠಾಣೆ ವ್ಯಾಪ್ತಿಯಲ್ಲಿ. ನವಲಪಟ್ಟು ಠಾಣೆಯ ವ್ಯಾಪ್ತಿಯಿಂದ ಕಳ್ಳರು ಅತ್ತ ಕಡೆಗೆ ಪರಾರಿಯಾಗಿದ್ದು, ಎಸ್ಐ ಒಬ್ಬಂಟಿಯಾಗೇ ಕಳ್ಳರನ್ನು ಹಿಂಬಾಲಿಸಿ ಹೋಗಿದ್ದು ದುರಂತಕ್ಕೆ ಕಾರಣವಾಗಿತ್ತು. ಸ್ಥಳೀಯವಾಗಿ ಆಡು ಕಳ್ಳತನ ಹೆಚ್ಚಿದ್ದರಿಂದ ಪೊಲೀಸರು ನಿಗಾ ವಹಿಸಿದ್ದರು.
A 55-year-old sub-inspector from Navalpattu in Tiruchy district was found brutally murdered near Kalamavur village near Keeranur in Pudukottai district in the wee hours of Sunday. Police sources said that during night patrol he went chasing a goat thief gang who have reportedly killed the cop.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm