ಬ್ರೇಕಿಂಗ್ ನ್ಯೂಸ್
21-11-21 09:54 pm HK News Desk ಕ್ರೈಂ
ತಿರುಚ್ಚಿ, ನ.21: ಆಡು ಕಳ್ಳರನ್ನು ಬೆನ್ನಟ್ಟಿ ಹೋಗಿದ್ದ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಕಳ್ಳರು ಮಚ್ಚಿನಲ್ಲಿ ಕಡಿದು ಕೊಲೆಗೈದ ಘಟನೆ ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಕಿರಾನೂರು ಎಂಬಲ್ಲಿ ನಡೆದಿದೆ.
ನವಲಪಟ್ಟು ಠಾಣೆಯ ಎಸ್ಐ ಭೂಮಿನಾಥನ್ (55) ಕೊಲೆಯಾದವರು. ಭೂಮಿನಾಥನ್ ಶನಿವಾರ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಭಾನುವಾರ ನಸುಕಿನ ವೇಳೆ ಗಸ್ತಿನಲ್ಲಿದ್ದಾಗ, ಬೈಕಿನಲ್ಲಿ ಸರದಿಯಂತೆ ಯುವಕರು ಆಡುಗಳನ್ನು ಹಿಡಿದು ಒಯ್ಯುತ್ತಿದ್ದುದು ಕಂಡುಬಂದಿದೆ. ಕೂಡಲೇ ಅವರನ್ನು ನಿಲ್ಲಿಸಲು ಸೂಚಿಸಿದ್ದು, ಕಳ್ಳರು ನಿಲ್ಲಿಸದೆ ಪರಾರಿಯಾಗಿದ್ದಾರೆ.
ಕರ್ತವ್ಯದಲ್ಲಿದ್ದ ಎಸ್ಐ ಭೂಮಿನಾಥನ್ ತನ್ನ ಬೈಕಿನಲ್ಲಿ ಅವರನ್ನು ಹಿಂಬಾಲಿಸಿದ್ದು, ಕಳ್ಳರು ಕಿರಾನೂರಿನ ಕಳಮಾವೂರು ಗ್ರಾಮದತ್ತ ನುಗ್ಗಿದ್ದಾರೆ. ಅಲ್ಲಿವರೆಗೂ ಹಿಂಬಾಲಿಸಿ ಹೋಗಿದ್ದ ಎಸ್ಐ, ಇಬ್ಬರನ್ನು ಅಡ್ಡಗಟ್ಟಿ ಹಿಡಿದಿದ್ದಾರೆ. ಆದರೆ, ಅವರು ತಮ್ಮ ಕೈಯಲ್ಲಿದ್ದ ಮಚ್ಚಿನಲ್ಲಿ ಎಸ್ಐ ತಲೆಗೆ ಕಡಿದಿದ್ದು, ಎಸ್ಐ ಭೂಮಿನಾಥನ್ ಸ್ಥಳದಲ್ಲೇ ನೆಲಕ್ಕುರುಳಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂತರ ವಿಷಯ ತಿಳಿದು ಕಿರಾನೂರು ಪೊಲೀಸರು ಸ್ಥಳಕ್ಕೆ ಬಂದಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಭೂಮಿನಾಥನ್ ತಿರುಚ್ಚಿ ಜಿಲ್ಲೆಯ ನವಲಪಟ್ಟು ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿದ್ದರು. ಆದರೆ, ಕೊಲೆ ಘಟನೆ ನಡೆದಿರುವುದು ಪಕ್ಕದ ಪುದುಕೋಟೈ ಜಿಲ್ಲೆಯ ಕಿರಾನೂರು ಠಾಣೆ ವ್ಯಾಪ್ತಿಯಲ್ಲಿ. ನವಲಪಟ್ಟು ಠಾಣೆಯ ವ್ಯಾಪ್ತಿಯಿಂದ ಕಳ್ಳರು ಅತ್ತ ಕಡೆಗೆ ಪರಾರಿಯಾಗಿದ್ದು, ಎಸ್ಐ ಒಬ್ಬಂಟಿಯಾಗೇ ಕಳ್ಳರನ್ನು ಹಿಂಬಾಲಿಸಿ ಹೋಗಿದ್ದು ದುರಂತಕ್ಕೆ ಕಾರಣವಾಗಿತ್ತು. ಸ್ಥಳೀಯವಾಗಿ ಆಡು ಕಳ್ಳತನ ಹೆಚ್ಚಿದ್ದರಿಂದ ಪೊಲೀಸರು ನಿಗಾ ವಹಿಸಿದ್ದರು.
A 55-year-old sub-inspector from Navalpattu in Tiruchy district was found brutally murdered near Kalamavur village near Keeranur in Pudukottai district in the wee hours of Sunday. Police sources said that during night patrol he went chasing a goat thief gang who have reportedly killed the cop.
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
24-10-25 05:43 pm
HK News Desk
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
24-10-25 07:57 pm
Mangalore Correspondent
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
24-10-25 08:20 pm
Mangalore Correspondent
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am