ಬ್ರೇಕಿಂಗ್ ನ್ಯೂಸ್
30-11-21 02:28 pm HK Desk news ಕ್ರೈಂ
ಬೆಂಗಳೂರು, ನ.30: ಓಮಿಕ್ರಾನ್ ರೂಪಾಂತರಿ ವೈರಸ್ ಬರದಂತೆ ಲಸಿಕೆ ನೀಡಲು ಬಂದಿರುವುದಾಗಿ ವೈದ್ಯರ ಸೋಗಿನಲ್ಲಿ ಬಂದಿದ್ದ ತಂಡವೊಂದು ಮನೆಯವರಿಗೆ ಪಿಸ್ತೂಲ್ ತೋರಿಸಿ ದರೋಡೆ ನಡೆಸಿರುವ ಘಟನೆ ಯಶವಂತಪುರದ ಎಸ್ ಬಿಎಂ ಕಾಲನಿಯಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಒಂದು ಕಾರು ಮತ್ತು ಇನ್ನೊಂದು ಬೈಕಿನಲ್ಲಿ ನಾಲ್ವರು ಬಂದಿದ್ದರು. ಉತ್ತರ ಭಾರತ ಮೂಲದ ಸಂಪತ್ ಸಿಂಗ್ ಎಂಬವರ ಮನೆಗೆ ಬಂದಿದ್ದ ತಂಡ, ನಿಮಗೆ ಕೊರೊನಾ ಲಸಿಕೆ ಆಗಿದೆಯೇ ಎಂದು ಕೇಳಿದ್ದಾರೆ. ಲಸಿಕೆ ತಗೊಂಡಿದ್ದೇವೆ ಎಂದಿದ್ದಕ್ಕೆ ಈಗ, ಹೊಸ ವೈರಸ್ ಬಂದಿರುವುದಕ್ಕೆ ಮತ್ತೊಂದು ಲಸಿಕೆ ನೀಡಲು ಬಂದಿದ್ದೇವೆ ಎಂದು ಹೇಳಿ ಮನೆಯ ಒಳಗೆ ಬಂದಿದ್ದಾರೆ.
ಮನೆಯಲ್ಲಿ ಸಂಪತ್ ಸಿಂಗ್ ಪತ್ನಿ ಪಿಸ್ತಾ ದೇವಿ ಮತ್ತು ಸೊಸೆ ರಕ್ಷಾ ಮಾತ್ರ ಇದ್ದರು. ಪಿಸ್ತಾ ದೇವಿ ಗಂಡನಿಗೆ ಕರೆ ಮಾಡಲೆಂದು ಮೊಬೈಲ್ ತೆಗೆಯುವಷ್ಟರಲ್ಲಿ ಅವರಲ್ಲಿ ಒಬ್ಬಾತ ಆಕೆಯ ಹಣೆಗೆ ರಿವಾಲ್ವರ್ ಇಟ್ಟಿದ್ದಾನೆ. ಕೂಡಲೇ ಅವರಿಬ್ಬರನ್ನೂ ಮನೆಯ ಕೋಣೆಯೊಳಗೆ ಕೂಡಿ ಹಾಕಿದ್ದಾರೆ. ಬಳಿಕ ಮನೆಯ ಕಪಾಟಿನಲ್ಲಿದ್ದ 50 ಗ್ರಾಮ್ ಚಿನ್ನವನ್ನು ಲೂಟಿ ಮಾಡಿದ್ದಾರೆ. ಇದೇ ವೇಳೆ, ಪಿಸ್ತಾ ದೇವಿಯವರ ಇನ್ನೊಬ್ಬ ಮಗ ವಿಕ್ರಂ ಸಿಂಗ್ ಎಂಬಾತ ಈ ವಿಚಾರ ತಿಳಿಯದೆ ನೇರವಾಗಿ ಮನೆಗೆ ಬಂದಿದ್ದಾನೆ.
ಮನೆಯಲ್ಲಿ ನೋಡಿದರೆ, ನಾಲ್ಕು ಮಂದಿ ವೈದ್ಯರ ಸೋಗಿನಲ್ಲಿದ್ದರು. ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿದ್ದವರು, ನಿನಗೆ ಲಸಿಕೆ ಆಗಿದೆಯಾ ಎಂದು ಕೇಳಿದ್ದಾರೆ. ನನಗೆ ಲಸಿಕೆ ಆಗಿದೆ ಎನ್ನುತ್ತಲೇ ತಾಯಿಯನ್ನು ಕರೆಯುತ್ತಾ ಮನೆಯ ಕೋಣೆಯೊಳಗೆ ಹೋಗಿದ್ದಾನೆ. ಅಷ್ಟರಲ್ಲಿ ಆಗಂತುಕರು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾರೆ.
ಈ ಬಗ್ಗೆ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ಪರಿಶೀಲಿಸಿ ಆರೋಪಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.
Burglars come as Doctors stating to give Omicron Virus vaccine, show guns and flee with costly items. A case has been registered at Yeshwantpur Police Station.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 07:06 pm
Mangaluru Staffer
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm