ಬ್ರೇಕಿಂಗ್ ನ್ಯೂಸ್
01-12-21 11:18 am HK Desk news ಕ್ರೈಂ
ಉಳ್ಳಾಲ, ಡಿ.1: ತಲಪಾಡಿ ಚೆಕ್ ಪೋಸ್ಟ್ ಕಡೆಯಿಂದ ತಂಗಿಯೊಂದಿಗೆ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನ ಸ್ಕೂಟರ್ ಸವಾರನೋರ್ವ ಕೈಹಿಡಿದೆಳೆದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು ಸಿಸಿಟಿವಿ ಆಧಾರದಲ್ಲಿ ಪೊಲೀಸರು ಆರೋಪಿಯ ಶೋಧ ಕಾರ್ಯ ನಡೆಸುತ್ತಿದ್ದಾರೆ.
ತಲಪಾಡಿ ಅಲಂಕಾರ ಗುಡ್ಡೆಯಿಂದ ಸಂತ್ರಸ್ತೆ 14 ವರ್ಷದ ಬಾಲಕಿ ತನ್ನ ತಂಗಿಯೊಂದಿಗೆ ಇಂದು ಬೆಳಗ್ಗೆ ತಲಪಾಡಿ ಚೆಕ್ ಪೋಸ್ಟ್ ದಾರಿಯಾಗಿ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಸ್ಕೂಟರಲ್ಲಿ ಬಂದಿದ್ದ ಬರ್ಮುಡಾ ಧರಿಸಿದ ಯುಬಕನೊಬ್ಬ ಬಾಲಕಿಯ ಕೈಯನ್ನ ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಅಕ್ಕ, ತಂಗಿ ಜೊತೆಯಾಗಿ ಆರೋಪಿಯನ್ನ ತಲ್ಲಿದ್ದು, ಆಗಂತುಕನು ಅಲ್ಲಿಂದ ಸ್ಕೂಟರ್ ಸಮೇತ ಪರಾರಿಯಾಗಿದ್ದಾನೆ. ಘಟನೆಯಿಂದ ಹೆದರಿದ ಬಾಲಕಿ ಸ್ಥಳೀಯರಲ್ಲಿ ವಿಚಾರ ತಿಳಿಸಿದ್ದಾಳೆ. ರಸ್ತೆಯಲ್ಲಿದ್ದ ಸಿಸಿಟಿವಿ ಫೂಟೇಜಲ್ಲಿ ಆರೋಪಿ ಸ್ಕೂಟರಲ್ಲಿ ತೆರಳುತ್ತಿರುವ ದೃಶ್ಯ ದಾಖಲಾಗಿದೆ. ಉಳ್ಳಾಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಂದೀಪ್ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಆರೋಪಿಯ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಅಕ್ರಮ ವಲಸೆ ಕಾರ್ಮಿಕರ ಕಿರಿಕ್ಕು
ಗಡಿ ಪ್ರದೇಶ ತಲಪಾಡಿಯಲ್ಲಿ ಅಕ್ರಮ ಮರಳುಗಾರಿಕೆ ಅಲ್ಲದೆ ಅನೇಕ ಅಕ್ರಮ, ಸಕ್ರಮ ಕೈಗಾರಿಕಾ ಕಾರ್ಖಾನೆಗಳಿದ್ದು ಇಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರು ಎಲ್ಲೆಂದರಲ್ಲಿ ಬಾಡಿಗೆ ಮನೆಗಳನ್ನ ಪಡೆದು ನೆಲೆಸಿದ್ದಾರೆ. ಈ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸುತ್ತಿದ್ದಾರೆಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಯಶು ಪಕ್ಕಳ ಆರೋಪಿಸಿದ್ದಾರೆ. ಈ ಹಿಂದೆಯೂ ಕೊಂಡಾಣದ ನಡು ಕುಮೇರಿನಲ್ಲಿ ಅಪ್ರಾಪ್ತ ಬಾಲಕಿಯೋರ್ವಳನ್ನು ಅತ್ಯಾಚಾರಕ್ಕೆ ಯತ್ನಿಸಿದ್ದ ಹೊರ ರಾಜ್ಯದ ವಲಸೆ ಕಾರ್ಮಿಕನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಸ್ಥಳೀಯ ತಲಪಾಡಿ ಪಂಚಾಯತ್ ಸದಸ್ಯರೊಬ್ಬರು ಹೊರ ರಾಜ್ಯದ ವಲಸೆ ಕಾರ್ಮಿಕರಿಗೆ ಮೂರು ಮನೆಗಳನ್ನ ಕಾನೂನು ಬಾಹಿರವಾಗಿ ಬಾಡಿಗೆ ನೀಡಿರುವುದು ಸಮಾಜ ದ್ರೋಹಿ ಕೃತ್ಯಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ ಎಂದು ಯಶು ಪಕ್ಕಳ ಹೇಳಿದ್ದಾರೆ.
A mischief monger riding a scooter sexually harassed a minor girl student who was on her way to school. The incident happened near Talapady Alankarugudde in Mangalore. The police are now on search for the accused after verifying cctv footage.
28-03-24 01:44 pm
Bangalore Correspondent
Pralhad Joshi , Dharwad, Veerashaiva Lingayat...
27-03-24 11:07 pm
ಮಾಫಿ ಸಾಕ್ಷಿ ಮುಗಿಸಲು ಚೈತ್ರಾ ಗ್ಯಾಂಗ್ ಸಂಚು ; ಆರೆ...
27-03-24 10:36 pm
Govind Karjol ticket, bjp; ಕೇಂದ್ರ ಸಚಿವ ನಾರಾಯಣ...
27-03-24 08:56 pm
Kolar congress fight: ಕೋಲಾರ ಕಾಂಗ್ರೆಸಿನಲ್ಲಿ ಭಿ...
27-03-24 05:03 pm
28-03-24 01:15 pm
HK News Desk
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
IAS Ananya Singh, UPSC Exam: ಮೊದಲ ಪ್ರಯತ್ನದಲ್ಲ...
27-03-24 09:43 pm
America Ship, Baltimore bridge video; ಅಮೇರಿಕಾ...
27-03-24 04:56 pm
28-03-24 03:25 pm
Mangalore Correspondent
Harish Acharya, Mangalore: ಮಂಗಳೂರು ವಿವಿಯ ನಿವೃ...
27-03-24 10:53 pm
Bjp MLA Harish poonja, Shivaraj Tangadagi: ಹಿ...
27-03-24 09:11 pm
ಮತ್ತೆ ನಾಲ್ವರ ಮೇಲೆ ಗೂಂಡಾ ಕಾಯ್ದೆ ; ಮತ್ತೆ 13 ಮಂದ...
26-03-24 10:17 pm
Tumkur car burnt, three killed, Mangalore: ಬೆ...
26-03-24 09:57 pm
28-03-24 02:18 pm
Udupi Correspondent
Mangalore Police, CCB, Drugs; ಆಂಧ್ರಪ್ರದೇಶದಿಂದ...
27-03-24 11:12 pm
Bank vehicle robbery, ATM in Kasaragod: ಕಾಸರಗ...
27-03-24 06:20 pm
CA arrested by Bengalore police, Rs 168 crore...
27-03-24 12:48 pm
Thane Kidnap, Murder; ಮನೆ ನಿರ್ಮಾಣಕ್ಕೆ 23 ಲಕ್ಷ...
26-03-24 11:12 am