ಕುಳೂರಿನಲ್ಲಿ ದನಗಳನ್ನು ಸ್ಕಾರ್ಪಿಯೋದಲ್ಲಿ ಹೊತ್ತೊಯ್ದ ದುಷ್ಕರ್ಮಿಗಳ ಬಂಧನ ; ಪೊಲೀಸರ ಮಿಂಚಿನ ಕಾರ್ಯಾಚರಣೆ

04-12-21 01:01 pm       HK Desk news   ಕ್ರೈಂ

ಕುಳೂರಿನಲ್ಲಿ ಶುಕ್ರವಾರ ನಸುಕಿನಲ್ಲಿ ಮನಯವರಿಗೆ ತಲವಾರು ತೋರಿಸಿ, ಮೂರು ದನಗಳನ್ನು ಕದ್ದೊಯ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಒಂದೇ ದಿನದಲ್ಲಿ ಬಂಧಿಸಿದ್ದಾರೆ.

ಮಂಗಳೂರು, ಡಿ.4: ಕುಳೂರಿನಲ್ಲಿ ಶುಕ್ರವಾರ ನಸುಕಿನಲ್ಲಿ ಮನಯವರಿಗೆ ತಲವಾರು ತೋರಿಸಿ, ಮೂರು ದನಗಳನ್ನು ಕದ್ದೊಯ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಒಂದೇ ದಿನದಲ್ಲಿ ಬಂಧಿಸಿದ್ದಾರೆ.

ಉಳ್ಳಾಲ ಮಾಸ್ತಿಕಟ್ಟೆಯ ನಿವಾಸಿಗಳಾದ ಮೊಹಮ್ಮದ್ ಸಲೀಂ(32), ಮೊಹಮ್ಮದ್ ತಂಜಿಲ್(25), ಮೊಹಮ್ಮದ್ ಇಕ್ಬಾಲ್ (23) ಬಂಧಿತರು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಪ್ಪು ಬಣ್ಣದ ಸ್ಕಾರ್ಪಿಯೋ (ಕೆಎ19- ಎಂಎ 7706) ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಳೂರಿನ ಗೋಲ್ಡ್ ಫಿಂಚ್ ಮೈದಾನದ ಬಳಿಯ ಮನೆಯ ಆವರಣದಲ್ಲಿ ಕಟ್ಟಿಹಾಕಿದ್ದ ಮೂರು ದನಗಳನ್ನು ಶುಕ್ರವಾರ ನಸುಕಿನ ನಾಲ್ಕು ಗಂಟೆ ಸುಮಾರಿಗೆ ಸ್ಕಾರ್ಪಿಯೋ ವಾಹನಕ್ಕೆ ತುಂಬಿ ಕದ್ದೊಯ್ದಿದ್ದರು. ಈ ವೇಳೆ, ಪರಿಸರದ ಜನರು ಸೇರಿ ಬೊಬ್ಬೆ ಹೊಡೆದಿದ್ದು, ತಲವಾರು ಝಳಪಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಘಟನೆ ಬಗ್ಗೆ ಬಜರಂಗದಳ ನಾಯಕರು ಸ್ಥಳಕ್ಕೆ ತೆರಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.


ಅಲ್ಲದೆ, ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸದೇ ಇದ್ದರೆ ಕಾವೂರು ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಘಟನೆ ಬಗ್ಗೆ ದನಗಳನ್ನು ಕಳಕೊಂಡಿದ್ದ ಉಮೇಶ್ ಸುವರ್ಣ ಮತ್ತು ಉದಯ ಶೆಟ್ಟಿ ಎಂಬವರು ಕಾವೂರು ಠಾಣೆಯಲ್ಲಿ ದೂರನ್ನೂ ನೀಡಿದ್ದರು. ಘಟನೆಯನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಸಿಸಿಟಿವಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದು, ಮೂರು ಮಂದಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕಾವೂರು, ಮೂಡುಬಿದ್ರೆ ಮತ್ತು ಬಜ್ಪೆ ಠಾಣೆ ಪೊಲೀಸರು ಪಾಲ್ಗೊಂಡಿದ್ದರು.

ನೋಡ ನೋಡುತ್ತಲೇ ತಲವಾರು ತೋರಿಸಿ ದನಗಳನ್ನು ಸ್ಕಾರ್ಪಿಯೋ ವಾಹನದಲ್ಲಿ ಕದ್ದೊಯ್ದ ದುಷ್ಕರ್ಮಿಗಳು ; ಬಜರಂಗದಳ ಆಕ್ರೋಶ  

Cattle theft by showing sword in Kavoor three arrested by Mangalore Police, car seized. In the early hours of Friday three who came in the car threatened the house owner and stole the cattles and dumped them into car and flee.