ಬ್ರೇಕಿಂಗ್ ನ್ಯೂಸ್
04-12-21 03:42 pm HK Desk news ಕ್ರೈಂ
ಮಂಗಳೂರು, ಡಿ.4: ಕುದ್ರೋಳಿಯಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಮೂರು ತಲ್ವಾರು, ಮೂರು ದ್ವಿಚಕ್ರ ವಾಹನ ಮತ್ತು ಒಂದು ಆಟೋ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.
ನವನೀತ್ ಅಶೋಕನಗರ, ಹೇಮಂತ್ ಹೊಯ್ಗೆಬೈಲ್, ದೀಕ್ಷಿತ್ ಬೋಳೂರು ಮತ್ತು ಇವರು ತಲೆಮರೆಸಿಕೊಳ್ಳಲು ನೆರವು ನೀಡಿದ್ದ ಸಂದೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ವರ್ಷದ ಹಿಂದೆ ಅಳಕೆ ಗ್ಯಾಂಗಿನ ಇಂದ್ರಜಿತ್ ಎಂಬಾತನ ಕೊಲೆ ನಡೆದಿತ್ತು. ಬೋಳೂರು ಗ್ಯಾಂಗಿನ ಉಲ್ಲಾಸ್ ಕಾಂಚನ್, ಗೌತಮ್, ರಾಕೇಶ್, ಶರಣ್, ಕೌಶಿಕ್, ಆಶಿಕ್, ಮೋಕ್ಷಿತ್, ತಲ್ವಾರ್ ಜಗ್ಗ, ನಿತಿನ್ ಪೂಜಾರಿ ಮತ್ತು ದೇವದಾಸ ಪೂಜಾರಿ ಎಂಬವರು ಸೇರಿ ಹಳೆ ದ್ವೇಷದಲ್ಲಿ ಇಂದ್ರಜಿತ್ ಕೊಲೆ ಮಾಡಿದ್ದರು. ಪ್ರಕರಣದ ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ.
ಇಂದ್ರಜಿತ್ ಕೊಲೆಗೆ ಪ್ರತೀಕಾರ ತೀರಿಸಲು ಅಳಕೆ ಗ್ಯಾಂಗಿನ ನವನೀತ್, ಹೇಮಂತ್ ಮತ್ತು ದೀಕ್ಷಿತ್ ಬೋಳೂರು ಸೇರಿ ಸಂಚು ನಡೆಸಿದ್ದು, ಪ್ರಸ್ತುತ ಜೈಲಿನಲ್ಲಿರುವ ಕೌಶಿಕ್ ಮತ್ತು ಆಶಿಕ್ ಅವರ ಸೋದರನಾದ ಅಂಕಿತ್ ನನ್ನು ಕೊಲೆಗೈಯಲು ಪ್ಲಾನ್ ಹಾಕಿದ್ದರು. ಅದರಂತೆ, ಕುದ್ರೋಳಿಯಲ್ಲಿ ನ.27ರ ರಾತ್ರಿ ಅಂಕಿತ್ ಮೇಲೆ ಹಂತಕರ ತಂಡ ತಲವಾರು ಬೀಸಿದ್ದು, ಆತ ತಪ್ಪಿಸಿಕೊಂಡಿದ್ದ. ಈ ವೇಳೆ ಹಲ್ಲೆಯನ್ನು ತಡೆಯಲು ಬಂದಿದ್ದ ಶ್ರವಣ್ ಎಂಬಾತನ ಎಡ ಕುತ್ತಿಗೆಯ ಮೇಲೆ ಬಲವಾದ ತಲವಾರು ಏಟು ಬಿದ್ದಿದ್ದು ತೀವ್ರ ಗಾಯಗೊಂಡಿದ್ದಾನೆ.

ಹತ್ತು ವರ್ಷಗಳ ಹಿಂದೆ ಅಳಕೆ ಮತ್ತು ಬೋಳೂರು ಗ್ಯಾಂಗ್ ಮಧ್ಯೆ ಹುಲಿವೇಷ ಹಾಕುವ ವಿಚಾರದಲ್ಲಿ ವೈಷಮ್ಯ ಬೆಳೆದಿತ್ತು. ಇದೇ ದ್ವೇಷದಲ್ಲಿ 2014ರಲ್ಲಿ ಹಳೆ ರೌಡಿ ಬೋಳೂರು ಗ್ಯಾಂಗಿನ ತಲ್ವಾರ್ ಜಗ್ಗ ಯಾನೆ ಜನಾರ್ದನ್ ಎಂಬಾತನ ಮಗ ಸಂಜಯ್ ನನ್ನು ಅಳಕೆ ಗ್ಯಾಂಗ್ ಸದಸ್ಯರು ಸೇರಿ ಕೊಲೆ ಮಾಡಿದ್ದರು. ಈ ರೀತಿ ಹುಟ್ಟಿಕೊಂಡ ವೈಷಮ್ಯ ಪರಸ್ಪರ ಮುಯ್ಯಿಗೆ ಮುಯ್ಯಿ ಅನ್ನುವಷ್ಟರ ಮಟ್ಟಿಗೆ ಬೆಳೆದಿತ್ತು. 2019ರಲ್ಲಿ ಅಳಕೆ ಗ್ಯಾಂಗಿನ ರಿತೇಶ್ ಮೇಲೆ ತಲವಾರು ದಾಳಿ ನಡೆಸಿದ್ದ ಬೋಳೂರಿನ ಹುಡುಗರು, ಕೊಲೆಗೆ ಯತ್ನಿಸಿದ್ದರು. ಅದು ಗುರಿತಪ್ಪಿದ್ದರಿಂದ ರಿತೇಶ್ ಅಪಾಯದಿಂದ ಪಾರಾಗಿದ್ದ. ಆನಂತರ, ಒಂದೇ ವರ್ಷದ ಅಂತರದಲ್ಲಿ ಅಳಕೆ ಗ್ಯಾಂಗಿನ ಇಂದ್ರಜಿತ್ ನನ್ನು ತಲ್ವಾರ್ ಜಗ್ಗ ಮತ್ತಿತರರು ಸೇರಿ ಕಡಿದು ಕೊಂದು ಹಾಕಿದ್ದರು.
ಇಂದ್ರಜಿತ್ ಕೊಲೆಯಲ್ಲಿ ಆರೋಪಿಗಳು ಜೈಲಿನಲ್ಲಿದ್ದರೂ, ಅವರ ಹತ್ತಿರದ ಸಂಬಂಧಿಕರನ್ನು ಟಾರ್ಗೆಟ್ ಮಾಡಿದ ಅಳಕೆ ಗ್ಯಾಂಗ್ ಇದೀಗ ಮತ್ತೊಬ್ಬನ ಕೊಲೆಗಾಗಿ ತಲವಾರು ದಾಳಿ ನಡೆಸಿದೆ. ಅಳಕೆ ಮತ್ತು ಬೋಳೂರು ಎರಡು ಕಿಮೀ ಅಂತರದಲ್ಲಿರುವ ಪ್ರದೇಶಗಳಾಗಿದ್ದು, ಸಣ್ಣ ಪ್ರಾಯದ ಹುಡುಗರು ಹೈಸ್ಕೂಲ್, ಕಾಲೇಜು ಮುಗಿಸಿ ಗಾಂಜಾ ದಾಸರಾಗುತ್ತಲೇ ಸಹವಾಸ ದೋಷದಿಂದ ಪುಡಿ ರೌಡಿಗಳಾಗಿ ಬದಲಾಗುತ್ತಿದ್ದಾರೆ. ಗಾಂಜಾ ಅಮಲಿನಲ್ಲಿ ಎರಡೂ ಕಡೆಯ ಗುಂಪಿನಲ್ಲಿ ಸದಸ್ಯರು ಸೇರಿಕೊಂಡಿದ್ದು, ಪರಸ್ಪರ ಕತ್ತಿ ಮಸೆಯುತ್ತಾ ಜೈಲು ಸೇರುತ್ತಿದ್ದಾರೆ. ಯಾರದ್ದೋ ದ್ವೇಷದಲ್ಲಿ ಇನ್ಯಾರೋ ಅಮಾಯಕರು ಪ್ರಾಣ ಕಳಕೊಳ್ಳುತ್ತಿದ್ದರೆ, ಇದನ್ನು ಹತ್ತಿಕ್ಕಬೇಕಾದ ಪೊಲೀಸರು ಮೂಲಕ್ಕೆ ಹೋಗದೆ ಒಂದಷ್ಟು ಮಂದಿಯನ್ನು ಬಂಧಿಸಿ ಕೈತೊಳೆದುಕೊಳ್ಳುತ್ತಿರುವುದು ಇವರ ದ್ವೇಷಕ್ಕೆ ತುಪ್ಪ ಸುರಿಯುತ್ತಿದೆ.
Urwa police arrested four people in connection with the murder attempt on Ankit Boloor. The cops have also confiscated three swords, three two-wheeler and one auto-rickshaw that were used in the act. Navneet, resident of Ashoknagar in the city, Hemanth, resident of Hoigebail and Deekshith, resident of Boloor are the main accused who are arrested. Sandesh was arrested for helping the accused hide after the incident
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:24 pm
HK News Staffer
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am