ಉಪ್ಪಿನಂಗಡಿ ; ಮೂವರು ಯುವಕರ ಮೇಲೆ ಮುಸುಕುಧಾರಿಗಳಿಂದ ಚೂರಿ ಇರಿತ

06-12-21 10:26 pm       HK Desk news   ಕ್ರೈಂ

ಉಪ್ಪಿನಂಗಡಿ ಬಳಿಯ ಹಳೆಗೇಟು ಎಂಬಲ್ಲಿ ಹಿಂದು ಸಂಘಟನೆಗೆ ಸೇರಿದ ಮೂವರು ಯುವಕರಿಗೆ ಮುಸುಕುಧಾರಿಗಳ ತಂಡವೊಂದು ಚೂರಿಯಿಂದ ಇರಿದು ಪರಾರಿಯಾಗಿದೆ.

ಪುತ್ತೂರು, ಡಿ.6: ಉಪ್ಪಿನಂಗಡಿ ಬಳಿಯ ಹಳೆಗೇಟು ಎಂಬಲ್ಲಿ ಹಿಂದು ಸಂಘಟನೆಗೆ ಸೇರಿದ ಮೂವರು ಯುವಕರಿಗೆ ಮುಸುಕುಧಾರಿಗಳ ತಂಡವೊಂದು ಚೂರಿಯಿಂದ ಇರಿದು ಪರಾರಿಯಾಗಿದೆ.

ಮೀನು ಮಾರಾಟ ಮಾಡುತ್ತಿದ್ದ ಮೋಹನ್, ಮಹೇಶ್ ಮತ್ತು ಅಶೋಕ್ ಎಂಬ ಮೂವರು ಯುವಕರ ಮೇಲೆ ತಂಡ ಚೂರಿಯಿಂದ ಇರಿದು ಪರಾರಿಯಾಗಿದೆ. ಬೈಕ್ ನಲ್ಲಿ ಬಂದಿದ್ದ ಮುಸುಕುಧಾರಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.

ಅಶೋಕ್ ಶೆಟ್ಟಿಯವರಿಗೆ ಸೇರಿದ ಮೀನು ಮಾರಾಟದ ಅಂಗಡಿಗೆ ಎರಡು ತಿಂಗಳ ಹಿಂದೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಇದೀಗ ಅವರ ಮೇಲೆ ಚೂರಿಯಿಂದ ಇರಿಯಲಾಗಿದ್ದು, ಅಶೋಕ್ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ಸಂಜೆ ಇಳಂತಿಲ ಪರಿಸರದಲ್ಲಿ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿತ್ತು. ಮೂವರು ಅನ್ಯಕೋಮಿನ ವ್ಯಕ್ತಿಗಳ ಮೇಲೆ ತಂಡವೊಂದು ಹಲ್ಲೆ ನಡೆಸಿದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಘಟನೆಯ ಪ್ರತೀಕಾರಕ್ಕಾಗಿ ಇಂದಿನ ಘಟನೆ ನಡೆದಿದೆ ಎನ್ನಲಾಗುತ್ತಿದೆ.

Masked miscreants launched a lethal attack with sharp weapons on a Hindu organization activist at Halegate on Monday December 6 evening and escaped. Ashok Shetty, a resident of Kajekar was injured in the attack. It is gathered, Ashok runs a fishing business near Halegate here. He is also an activist of a Hindu organization. It is said that he is under treatment in the intensive care unit at a private hospital in Puttur.