ಬ್ರೇಕಿಂಗ್ ನ್ಯೂಸ್
10-12-21 02:42 pm HK Desk news ಕ್ರೈಂ
ಮಂಗಳೂರು, ಡಿ.10 : ಅರೆಕಾಲಿಕ ಉದ್ಯೋಗದ ಬೆನ್ನುಬಿದ್ದ ವ್ಯಕ್ತಿಯೊಬ್ಬ ಅಪರಿಚಿತ ವ್ಯಕ್ತಿಯ ಸಂದೇಶ ನಂಬಿ, ಬರೋಬ್ಬರಿ 5.31 ಲಕ್ಷ ರೂಪಾಯಿ ಕಳಕೊಂಡ ಘಟನೆ ಬಗ್ಗೆ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಯಿಂದ ನ.26ರಂದು ಪಾರ್ಟ್ ಟೈಮ್ ಉದ್ಯೋಗಕ್ಕೆ ನೀವು ಆಯ್ಕೆಯಾಗಿದ್ದೀರೆಂದು ಮೊಬೈಲಿಗೆ ಮೆಸೇಜ್ ಬಂದಿತ್ತು. ಅದರ ಜೊತೆಗೆ ಒಂದು ಲಿಂಕ್ ಕೂಡ ಇತ್ತು. ಸಂದೇಶದ ಬೆನ್ನುಹತ್ತಿದ ಮಂಗಳೂರಿನ ವ್ಯಕ್ತಿ, ಆಬಳಿಕ ಅಪರಿಚಿತನ ಜೊತೆಗೆ ವಾಟ್ಸಪ್ ನಲ್ಲಿ ಚಾಟಿಂಗ್ ಮಾಡಿದ್ದು, ಉದ್ಯೋಗದ ಬಗ್ಗೆ ಮಾಹಿತಿ ಕೇಳಿದ್ದರು.
ಉದ್ಯೋಗ ಹೇಗಿರುತ್ತದೆ, ಯಾವ ರೀತಿ ನೀವು ಮನೆಯಲ್ಲೇ ಇದ್ದು ಕೆಲಸ ಮಾಡಬಹುದು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನೀವು ವೆಬ್ ನಲ್ಲಿ ನಿಮ್ಮದೇ ಖಾತೆ ತೆರೆಯಬೇಕು ಎಂದಿದ್ದ ಅಪರಿಚಿತ. ಅದಕ್ಕಾಗಿ ಟೆಲಿಗ್ರಾಂ ಲಿಂಕ್ ಒಂದನ್ನು ಕಳುಹಿಸಿದ್ದ. ಆನಂತರ, ಆತ ಹೇಳಿದ ರೀತಿಯಲ್ಲೇ ಟೆಲಿಗ್ರಾಂ ಲಿಂಕ್ ತೆರೆದು ಅಲ್ಲಿ ಹೊಸತಾಗಿ ಐಡಿ, ಪಾಸ್ ವರ್ಡ್ ಹಾಕಿ ಖಾತೆ ಓಪನ್ ಮಾಡಿದ್ದಾರೆ.
ವೆಬ್ ಸೈಟ್ ಮೂಲಕ ಆನ್ಲೈನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿ, ಕಮಿಷನ್ ಪಡೆದುಕೊಳ್ಳಬಹುದು. ನೇರವಾಗಿ ಯಾವುದೇ ವಸ್ತುಗಳನ್ನು ಖರೀದಿಸಲು ಅವಕಾಶ ಇರುತ್ತದೆ. ಆದರೆ, ಅದಕ್ಕಾಗಿ ಮೊದಲಿಗೆ ನೀವು ನಿಮ್ಮ ಬ್ಯಾಂಕ್ ಖಾತೆಗಳ ಬಗ್ಗೆ ಲಿಂಕ್ ಮಾಡಿಕೊಳ್ಳಬೇಕು ಎಂದಿದ್ದಾನೆ. ಅದರಂತೆ, ಅಪರಿಚಿತ ಕಳುಹಿಸಿದ್ದ ಕ್ಯೂ ಆರ್ ಕೋಡ್ ಲಿಂಕ್ ಮೂಲಕ ಬ್ಯಾಂಕ್ ಖಾತೆಗಳನ್ನು ವ್ಯಕ್ತಿ ಲಿಂಕ್ ಮಾಡಿದ್ದರು. ಅದರ ನಂತರ, ಹಂತ ಹಂತವಾಗಿ ಹಣ ಖಾತೆಯಿಂದ ಹೋಗಿದ್ದು, ಬರೋಬ್ಬರಿ 5.31 ಲಕ್ಷ ರೂಪಾಯಿ ಹಣ ವರ್ಗಾವಣೆಯಾಗಿತ್ತು.
ಹಣ ಕಳೆದುಕೊಂಡ ಬಗ್ಗೆ ಅಪರಿಚಿತ ವ್ಯಕ್ತಿಯ ಬಳಿ ಕೇಳಿದರೆ, ಉತ್ತರ ಇರಲಿಲ್ಲ. ಗಾಬರಿಗೊಂಡ ಹಣ ಕಳಕೊಂಡ ವ್ಯಕ್ತಿ ಮಂಗಳೂರಿನ ಉರ್ವಾದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Man looses around 5.31 lakhs trusting fake job offer which was sent via telegram link. A case has been registered at the Cyber crime police station in Urwa.
25-10-25 09:00 pm
Bangalore Correspondent
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
25-10-25 02:28 pm
HK News Desk
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 02:14 pm
Mangaluru Correspondent
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm