ಬ್ರೇಕಿಂಗ್ ನ್ಯೂಸ್
14-09-20 04:20 pm Headline Karnataka News Network ಕ್ರೈಂ
ಚಿಕ್ಕಮಗಳೂರು, ಸೆಪ್ಟಂಬರ್ 14: ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ದನಗಳ್ಳರ ಅಟ್ಟಹಾಸವನ್ನು ಕಿರುತೆರೆ ನಟ ರವಿತೇಜ ಬಿಚ್ಚಿಟ್ಟಿದ್ದಾರೆ. ರಾತ್ರೋರಾತ್ರಿ ಪಿಕಪ್ ವಾಹನಗಳಲ್ಲಿ ಬಂದು ರಸ್ತೆಯಲ್ಲಿ ಮಲಗುತ್ತಿದ್ದ ದನಗಳನ್ನು ಹಿಡಿದು ವಾಹನಕ್ಕೆ ತುಂಬಿಸುತ್ತಿದ್ದಾಗ, ರವಿತೇಜ ಮತ್ತು ಆತನ ಗೆಳೆಯರು ತಡೆಯಲು ಹೋಗಿದ್ದು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ರೂ ಅವರು ಕ್ಯಾರ್ ಮಾಡಿಲ್ಲವೆಂದು ಅಲ್ಲಿಂದಲೇ ರವಿತೇಜ ಫೇಸ್ಬುಕ್ ಲೈವ್ ಬಂದು ನೋವು ಹೇಳಿಕೊಂಡಿದ್ದಾರೆ.
ಮೂಡಿಗೆರೆಯವರೇ ಆಗಿರುವ ಕಿರುತೆರೆ ನಟ ರವಿತೇಜ, ಶೂಟಿಂಗ್ ಸ್ಪಾಟ್ ಸ್ಥಳ ವೀಕ್ಷಣೆಗೆ ಹೋಗಿ ಹಿಂತಿರುಗುತ್ತಿದ್ದಾಗ ಕಿಡಿಗೇಡಿಗಳ ಕೃತ್ಯ ಕಂಡು ತಡೆಯಲು ಹೋಗಿದ್ದಾರೆ. ಆದರೆ, ಪಿಕಪ್ ವಾಹನ ನಿಲ್ಲಿಸದೆ ಪರಾರಿಯಗಲು ಯತ್ನಿಸಿದ್ದಲ್ಲದೆ ರವಿತೇಜ ವಾಹನಕ್ಕೆ ಡಿಕ್ಕಿಯಾಗಿದ್ದಾರೆ. ಅಲ್ಲದೆ, ತಲವಾರಿನಿಂದ ರವಿತೇಜ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ನಡುರಾತ್ರಿಯಲ್ಲಿ ಮೂಡಿಗೆರೆ ಪೇಟೆಯಿಂದಲೇ ಫೇಸ್ಬುಕ್ ಲೈವ್ ಮಾಡಿದ ರವಿತೇಜ, ಐದಾರು ಮಂದಿ ಸೇರಿ ನನಗೆ ತಲವಾರಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಕೈಗೆ ಮತ್ತು ತಲೆಗೆ ಪೆಟ್ಟಾಗಿದೆ. ಸ್ವಲ್ಪದರಲ್ಲಿ ಬಚಾವಾಗಿದ್ದೇನೆ. ಬದುಕಿ ಉಳಿದಿದ್ದೇ ಹೆಚ್ಚು. ಈ ಬಗ್ಗೆ ಮೂಡಿಗೆರೆ ಪೊಲೀಸರಿಗೆ ಹೇಳಿದ್ರೂ ಕ್ಯಾರ್ ಮಾಡಿಲ್ಲ. ಇಲ್ಲಿನ ಹಿಂದು ಸಾಮ್ರಾಟರು ಎಲ್ಲಿದ್ದಾರೆ. ಹಿಂದು ಹಿಂದು ಎಂದು ಭಾಷಣ ಮಾಡೋರಿಗೆ ಇದು ಕಾಣಿಸೋಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಪಾಪದ ದನಗಳನ್ನು ಕದ್ದು ಸಾಗಿಸುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಿ. ನಾವು ನಂಬರ್ ನೋಟ್ ಮಾಡಿದ್ದೇವೆ. ಕೆಎ 18 - 0821 ನಂಬರಿನ ಪಿಕಪ್ ವಾಹನದಲ್ಲಿ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ. ಮೂಡಿಗೆರೆಯನ್ನು ಈ ದನಗಳ್ಳರಿಂದ ರಕ್ಷಿಸಿ ಎಂದು ಮನವಿ ಮಾಡಿದ್ದಾರೆ.
Join our WhatsApp group for latest news updates
video
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm