ಬ್ರೇಕಿಂಗ್ ನ್ಯೂಸ್
14-12-21 12:20 pm HK Desk news ಕ್ರೈಂ
ಬೆಂಗಳೂರು, ಡಿ.14 : ಗಂಡ – ಹೆಂಡತಿ ನಡುವಿನ ಜಗಳದಲ್ಲಿ ಸಣ್ಣ ಮಗು ಪ್ರಾಣವನ್ನೇ ಬಿಟ್ಟಿದೆ. ಪತ್ನಿ ಮೇಲಿನ ಸಿಟ್ಟಿನಲ್ಲಿ ತಂದೆಯೇ ತನ್ನ 10 ವರ್ಷ ಪ್ರಾಯದ ಮಗುವನ್ನು ನೀರು ತುಂಬಿದ್ದ ಸಂಪ್ ಹೊಂಡಕ್ಕೆ ಎಸೆದು ನೇಣಿಗೆ ಶರಣಾಗಿರುವ ಘಟನೆ ಸಂಪಂಗಿರಾಮ ನಗರದಲ್ಲಿ ನಡೆದಿದೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಸುರೇಶ್ 15 ವರ್ಷಗಳ ಹಿಂದೆ ಲಕ್ಷ್ಮೀ ಎಂಬಾಕೆಯನ್ನು ಮದುವೆಯಾಗಿದ್ದು, ಮಗು ಕೂಡ ಆಗಿತ್ತು. ಆದರೆ ಮಗು ಬೆಳೆಯುತ್ತಿದ್ದಂತೆ ಬುದ್ಧಿಮಾಂದ್ಯ ಆಗಿದ್ದು, ಸಹಜ ಬೆಳವಣಿಗೆಯಿಂದ ವಂಚಿತವಾಗಿತ್ತು. ಆದರೆ, ಇದೇ ವೇಳೆ ಬೆನ್ನು ನೋವಿಗೆ ತುತ್ತಾದ ಸುರೇಶ್ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಗೆ ಒಳಗಾಗಿದ್ದ. ಮಗ ಉದಯ್ ಸಾಯಿರಾಂ ಚಿಕಿತ್ಸೆಗೆ ಖರ್ಚು ಮಾಡಲು ಸಾಧ್ಯವಾಗದ ಕಾರಣ, ಇದೇ ವಿಚಾರದಲ್ಲಿ ಪತಿ- ಪತ್ನಿಯ ಮಧ್ಯೆ ಜಗಳ ಆಗುತ್ತಿತ್ತು.
ಸೋಮವಾರ ಬೆಳಗ್ಗೆ ಪತ್ನಿ ಇನ್ನೂ ಎದ್ದೇಳದೇ ಇರುವಾಗಲೇ ಮಗುವನ್ನು ಎತ್ತಿಕೊಂಡು ಹೋಗಿದ್ದ ಸುರೇಶ್, ಹತ್ತು ವರ್ಷದ ಮಗುವನ್ನು ನೀರಿನ ಸಂಪ್ ಗೆ ಬಿಸಾಡಿ ತೆರಳಿದ್ದ. ಆನಂತರ ಶೇಷಾದ್ರಿಪುರಂ ರೈಲ್ವೇ ಹಳಿಯ ಬಳಿ ತೆರಳಿ, ಅಲ್ಲಿ ನೇಣಿಗೆ ಶರಣಾಗಿದ್ದ. ಪತ್ನಿ ಲಕ್ಷ್ಮಿ ಎದ್ದು ನೋಡಿದಾಗ, ಮಗು ಕಾಣಿಸದೇ ಇದ್ದುದರಿಂದ ಹುಡುಕಾಟ ನಡೆಸಿದ್ದಾಳೆ. ಪತಿಯೂ ಇರದೇ ಇದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಬಳಿಕ ಹುಡುಕಾಟ ನಡೆಸಿದಾಗ, ನೀರಿನ ಸಂಪ್ ನಲ್ಲಿ ಮಗುವಿನ ಶವ ಕಂಡುಬಂದಿದೆ. ಪೊಲೀಸರು ಶೇಷಾದ್ರಿಪುರಂ ಬಳಿ ಸುರೇಶ್ ನೇಣು ಬಿಗಿದ ರೀತಿಯಲ್ಲಿ ಕಂಡುಬಂದಿದ್ದನ್ನು ಪತ್ತೆ ಮಾಡಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
A man ended his life after killing his 10-year-old specially-abled son as a fallout of some domestic dispute in Sampangiramnagar locality of Bengaluru, police said on Tuesday. According to police, Suresh (40) an auto driver and had married Lakshmi 15 years ago. The couple was dejected as their son was specially-abled.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm