ಯುವತಿಗೆ ಲೈಂಗಿಕ ಕಿರುಕುಳ ; ತಲಪಾಡಿಯಲ್ಲಿ ಕಾಮುಕನಿಗೆ ಬಿಸಿ ಕಜ್ಜಾಯ, ಆರೋಪಿ ಪೊಲೀಸರ ವಶಕ್ಕೆ 

25-12-21 12:18 pm       Mangalore Correspondent   ಕ್ರೈಂ

ಕಳೆದ ಶನಿವಾರ ತಲಪಾಡಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಕಾಮುಕನನ್ನು ಸಾರ್ವಜನಿಕರು ಹಿಡಿದು ಆತಿಥ್ಯ ನೀಡಿದ್ದು ಆರೋಪಿಯನ್ನು ಉಳ್ಳಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ‌

ಉಳ್ಳಾಲ, ಡಿ.25 : ಕಳೆದ ಶನಿವಾರ ತಲಪಾಡಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಕಾಮುಕನನ್ನು ಸಾರ್ವಜನಿಕರು ಹಿಡಿದು ಆತಿಥ್ಯ ನೀಡಿದ್ದು ಆರೋಪಿಯನ್ನು ಉಳ್ಳಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ‌

ಬಂಧಿತ ಆರೋಪಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿ ಮುಸ್ತಾಫ(18)ಎಂದು ತಿಳಿದು ಬಂದಿದೆ. ಆರೋಪಿ ಕಳೆದ ಶನಿವಾರ ತನ್ನ ಸ್ಕೂಟರಲ್ಲಿ ತಲಪಾಡಿಯ ದೇವಿಪುರಕ್ಕೆ ತೆರಳುವ ಒಳರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ. ಸಿಸಿಟಿವಿ ಆಧಾರದಲ್ಲಿ ಆರೋಪಿಯ ಚಹರೆ ಪತ್ತೆ ಹಚ್ಚಿದ ಸ್ಥಳೀಯರು‌ ಆತನ ಮತ್ತೆ ಬರುವಿಕೆಗಾಗಿ ಕಾದು ಕುಳಿತಿದ್ದರು. ಇಂದು ಆರೋಪಿ ತನ್ನ ಸ್ಕೂಟರಲ್ಲಿ ದೇವಿಪುರ ಒಳರಸ್ತೆಯಿಂದ ಬಂದಿದ್ದು ತಲಪಾಡಿ ಶ್ರೀರಾಮ ಭಜನಾ ಮಂದಿರದ ಬಳಿ ಸ್ಥಳೀಯರು ತಡೆದಿದ್ದಾರೆ. 

ಕಾಮುಕ ಮುಸ್ತಫನಿಗೆ ಸಾರ್ವಜನಿಕರು ಆತಿಥ್ಯ ನೀಡಿ ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದಾರೆ. ತಲಪಾಡಿ ದೇವಿಪುರದ ಒಳ ರಸ್ತೆಗಳನ್ನೀಗ ಕಾಮುಕರು ತಮ್ಮ ತೀಟೆ ತೀರಿಸಲು ಬಳಸಿ ಕೊಳ್ಳುತ್ತಿದ್ದು, ಕಳೆದ ತಿಂಗಳಲ್ಲಿ ಅಪ್ರಾಪ್ತ ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಕೆ.ಸಿ. ರೋಡಿನ ಕಾಮುಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು.

 

Mangalore Sexual harrasment to girl in Public in Ullal youth 18 year old youth held and thrashed. Ullal police who arrived at the spot took the youth into custody. The accused has been identified as Mustafa.