ಬ್ರೇಕಿಂಗ್ ನ್ಯೂಸ್
15-09-20 07:39 pm Headline Karnataka News Network ಕ್ರೈಂ
ಆಲಪ್ಪುಳ, ಸೆಪ್ಟೆಂಬರ್15: ಸೆಲ್ಫಿ ಹುಚ್ಚಿನಿಂದ ಏನೆಲ್ಲ ದುರಂತ ಎದುರಾದ್ರೂ ಜನರು ಎಚ್ಚತ್ತುಕೊಂಡಿಲ್ಲ. ಇಲ್ಲೊಬ್ಬಳು ತಾಯಿ, ಬೀಚ್ ನಲ್ಲಿ ನಿಂತು ಮಗುವಿನ ಜೊತೆ ಸೆಲ್ಫೀ ಕ್ಲಿಕ್ಕಿಸಲು ಹೋಗಿ ಮಗುವನ್ನೇ ಕಳಕೊಂಡಿದ್ದಾಳೆ. ತಾಯಿಯ ಸೆಲ್ಫೀ ಹುಚ್ಚಿನಿಂದಾಗಿ ಕೈನಲ್ಲಿ ಹಿಡಿದುಕೊಂಡಿದ್ದ ಎರಡು ವರ್ಷದ ಮಗು ಸಮುದ್ರಪಾಲಾದ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ.
ಭಾನುವಾರ ಸಂಜೆ ಘಟನೆ ನಡೆದಿದ್ದು ಪೊಲೀಸರು ಮತ್ತು ಸ್ಥಳೀಯರ ಹುಡುಕಾಟದ ಬಳಿಕ ಮಗುವಿನ ಶವ ಎರಡು ದಿನಗಳ ನಂತರ ಆಲಪ್ಪುಳದ ಗೆಲಿಲಿಯೋ ಬೀಚ್ ನಲ್ಲಿ ಪತ್ತೆಯಾಗಿದೆ. ಮೃತ ಮಗುವಿನ ಹೆಸರು ಅಧಿಕೃಷ್ಣ ಎಂದು ದಿ ಹಿಂದು ಪತ್ರಿಕೆ ವರದಿ ಮಾಡಿದೆ. ತಟರಕ್ಷಣಾ ಪಡೆ ಮತ್ತು ಸ್ಥಳೀಯ ಮೀನುಗಾರರು ಪತ್ತೆ ಕಾರ್ಯಾಚರಣೆ ನಡೆಸಿದ್ದರು.
ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ತನ್ನಿಬ್ಬರು ಮಕ್ಕಳು ಮತ್ತು ಸದರನ ಇನ್ನೊಂದು ಮಗುವಿನ ಜೊತೆ ಬೀಚ್ ನೋಡಲು ಬಂದಿದ್ದರು. ಸಮುದ್ರ ಅಬ್ಬರ ಹೆಚ್ಚಿದ್ದರಿಂದ ಅಲ್ಲಿನ ಸೆಕ್ಯುರಿಟಿ ಬೀಚ್ ಹೋಗದಂತೆ ತಡೆಯುತ್ತಿದ್ದ. ಆದರೆ ತಾಯಿ, ಮಕ್ಕಳು ಸೆಕ್ಯುರಿಟಿಯ ಕಣ್ಣು ತಪ್ಪಿಸಿ ಅಲ್ಲಿನ ಇಎಸ್ಐ ಆಸ್ಪತ್ರೆಯ ಎಡೆಯಿಂದ ನುಸುಳಿಕೊಂಡು ಬೀಚ್ ನತ್ತ ಬಂದಿದ್ದರು. ಬೀಚ್ ನಲ್ಲಿ ಮಕ್ಕಳ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾಗ ಬೃಹತ್ ಅಲೆಯೊಂದು ಎದ್ದು ಬಂದಿದ್ದು ತಾಯಿ, ಮಕ್ಕಳು ಬ್ಯಾಲೆನ್ಸ್ ತಪ್ಪಿ ನೀರಿಗೆ ಬಿದ್ದಿದ್ದಾರೆ. ಈ ವೇಳೆ, ದೂರದಲ್ಲಿ ನಿಂತಿದ್ದ ಸಂಬಂಧಿಕನೊಬ್ಬ ಓಡಿ ಬಂದು ಮಹಿಳೆ ಮತ್ತು ಆರು ಮತ್ತು ಏಳು ವರ್ಷದ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಎರಡೂವರೆ ವರ್ಷದ ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಒಂದು ಕ್ಷಣದ ಮೈಮರೆವು ಮಗುವನ್ನು ಬಲಿ ತೆಗೆದುಕೊಂಡಿತ್ತು.
03-06-25 10:50 pm
Bangalore Correspondent
Shivamogga Hostel, Suicide, Medical Student:...
03-06-25 03:52 pm
ಮುಸ್ಲಿಂ ಸಮುದಾಯಕ್ಕೆ ಬೆದರಿ ಹಿಂದುಗಳ ಮೇಲೆ ಅಟ್ಟಹಾಸ...
02-06-25 10:43 pm
Shivamogga Airport, Training: ಶಿವಮೊಗ್ಗ ವಿಮಾನ...
01-06-25 10:08 pm
Tobacco Ban, Karnataka: ಸಾರ್ವಜನಿಕ ಸ್ಥಳಗಳಲ್ಲಿ...
01-06-25 09:37 pm
03-06-25 10:10 pm
HK News Desk
ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದ ಕಟ್ಟಡ ಕಾರ್ಮಿಕನನ್...
01-06-25 12:35 pm
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
03-06-25 08:13 pm
Mangalore Correspondent
ನಡುರಾತ್ರಿ ಪೊಲೀಸರು ಮನೆಗಳಿಗೆ ಭೇಟಿ ಕೊಡುವುದು ವ್ಯಕ...
03-06-25 07:37 pm
Mangalore, BJP, Police, SP: ಹಿಂದು ಸಂಘಟನೆ ಪ್ರಮ...
03-06-25 07:01 pm
UBL, Mangalore, Mysuru: ಯುಬಿ ಬಿಯರ್ ಫ್ಯಾಕ್ಟರಿ...
03-06-25 04:29 pm
Kalladka Prabhakar Bhat, High Court, FIR: ಕಲ್...
03-06-25 02:48 pm
03-06-25 10:25 pm
Mangalore Correspondent
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm
Ullal, Mangalore, Crime: ಕೋಮು ದ್ವೇಷದ ನೆಲದಲ್ಲ...
01-06-25 11:02 pm