ಬ್ರೇಕಿಂಗ್ ನ್ಯೂಸ್
04-01-22 02:28 pm HK Desk news ಕ್ರೈಂ
ಬುಂಡಿ(ರಾಜಸ್ಥಾನ್), ಜ.4 : ಇತ್ತೀಚೆಗೆ ನಾಪತ್ತೆಯಾಗಿದ್ದ 16 ವರ್ಷದ ಬಾಲಕಿ ಅತ್ಯಾಚಾರಗೈದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪ್ರಕರಣದಲ್ಲಿ ಪೋಸ್ಟ್ ಮಾರ್ಟಂ ನಡೆಸಿರುವ ಅಧಿಕಾರಿಗಳು ಆಘಾತಕಾರಿ ವರದಿಯನ್ನು ತೆರೆದಿಟ್ಟಿದ್ದಾರೆ. ಆರೋಪಿಗಳು ಬಾಲಕಿಯನ್ನು ಕತ್ತು ಹಿಸುಕಿ ಕೊಲೆಗೈದ ಬಳಿಕವೂ ಶವದ ಮೇಲೆ ಮೃಗೀಯವಾಗಿ ಸಂಭೋಗ ನಡೆಸಿದ್ದಾರೆ ಎಂದು ಆಟೋಪ್ಸಿ ವರದಿ ಹೇಳಿದೆ.
ಡಿ.23ರಂದು ಆಡು ಮೇಯಿಸುತ್ತಿದ್ದ 16 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಮೂವರು ಸೇರಿ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ, ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯ ಶಾಲಿನಿಂದಲೇ ಕತ್ತು ಹಿಸುಕಿ ಕೊಲೆಗೈದಿದ್ದು, ಆಬಳಿಕ ಮೂವರು ಸೇರಿ ಶವದ ಮೇಲೆ ಮೃಗೀಯವಾಗಿ ವರ್ತಿಸಿದ್ದಾರೆ. ಗುಪ್ತಾಂಗದಲ್ಲಿ 30ಕ್ಕೂ ಹೆಚ್ಚು ಗಾಯಗಳ ಗುರುತು ಕಂಡುಬಂದಿದ್ದು, ದೇಹದ ಇತರ ಭಾಗದಲ್ಲೂ ಕಿರುಕುಳ ನೀಡಿರುವ ಗಾಯಗಳಿದ್ದವು.
ನಾಪತ್ತೆಯಾದ ಮರುದಿನವೇ ಬಾಲಕಿಯ ಶವ ಗುಡ್ಡದಲ್ಲಿ ಪತ್ತೆಯಾಗಿತ್ತು. ಪೊಲೀಸರು ವಶಕ್ಕೆ ಪಡೆದು ಪೋಸ್ಟ್ ಮಾರ್ಟಂ ನಡೆಸಲು ಏರ್ಪಾಡು ಮಾಡಿದ್ದರು. ಬಾಲಕಿ ಕಿರುಚಾಡಿದ್ದಕ್ಕೆ ಆಕೆಯ ದುಪ್ಪಟ್ಟಾದಿಂದಲೇ ಕತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು ಅನ್ನೋದು ಪೋಸ್ಟ್ ಮಾರ್ಟಂ ವರದಿಯಲ್ಲಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬುಂಡಿ ಜಿಲ್ಲೆಯ ಎಸ್ಪಿ ಜೈ ಯಾದವ್, ನನ್ನ ಜೀವಮಾನದಲ್ಲಿ ಈ ರೀತಿಯ ಮೃಗೀಯ ವರ್ತನೆಯನ್ನು ನೋಡಿದ್ದಿಲ್ಲ. ಅತ್ಯಂತ ಭೀಕರವಾಗಿ ವರ್ತಿಸಿ ಕೊಂದು ಹಾಕಿದ್ದಾರೆ. ಬುಂಡಿ ಜಿಲ್ಲೆಯ ಬಾರ್ ಅಸೋಸಿಯೇಶನ್ ಸದಸ್ಯ ವಕೀಲರು ತಾವು ಯಾರು ಕೂಡ ಆರೋಪಿ ಪರ ವಕಾಲತ್ತು ನಡೆಸುವುದಿಲ್ಲ ಎಂದಿದ್ದಾಗಿ ತಿಳಿಸಿದ್ದಾರೆ.
A post-mortem revealed that the girl who went missing in Bundi last month had been raped even after her death by three men. The autopsy report of the 16-year-old girl, who had gone missing on December 23 and later was found to have been raped and murdered in Rajasthan’s Bundi, revealed that the accused continued to rape her even after her death.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
28-07-25 10:41 pm
Mangalore Correspondent
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
28-07-25 11:20 pm
Mangalore Correspondent
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm