ಬ್ರೇಕಿಂಗ್ ನ್ಯೂಸ್
08-01-22 02:08 pm HK Desk news ಕ್ರೈಂ
ಚಿತ್ರದುರ್ಗ, ಜ.8 : ಪತ್ನಿಯನ್ನು ತಾನೇ ಕೊಂದು ತನ್ನ ಮಲಗುವ ಮಂಚದಡಿಯಲ್ಲೇ ಹೂತು ಹಾಕಿ, ಪತ್ನಿ ನಾಪತ್ತೆಯಾಗಿದ್ದಾಳೆಂದು ಪೊಲೀಸ್ ದೂರು ನೀಡಿ ಸ್ಥಳೀಯರು ಮತ್ತು ಸಂಬಂಧಿಕರನ್ನು ಯಾಮಾರಿಸಿದ ಪಾತಕಿ ಪತಿರಾಯನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಕೋಣನೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಆರೋಪಿ ನಾರಪ್ಪ ಎಂಬಾತ ಬಂಧಿತ. ಕಳೆದ ಡಿ.25ರಂದು ತನ್ನ ಪತ್ನಿ ಕಾಣೆಯಾಗಿದ್ದಾಗಿ ನಾರಪ್ಪ ಎರಡು ದಿನ ಬಿಟ್ಟು ಭರಮಸಾಗರ ಠಾಣೆಯಲ್ಲಿ ದೂರು ನೀಡಿದ್ದ. ಪತ್ನಿ ಸುಮಾ ಮನೆಯಿಂದ ಕಾಣೆಯಾಗಿರುವ ಬಗ್ಗೆ ಆಕೆಯ ಹೆತ್ತವರಿಗೂ ತಿಳಿಸಿದ್ದ. ಅದರಂತೆ, ಸುಮಾ ತಂದೆ ಜಿಲ್ಲೆಯ ಹಲವಾರು ಕಡೆ ಹುಡುಕಾಟ ನಡೆಸಿದ್ದರು. ಆನಂತರ ಪೊಲೀಸರನ್ನು ಸಂಪರ್ಕಿಸಿ, ತನ್ನ ಅಳಿಯನ ಬಗ್ಗೆಯೇ ಶಂಕೆ ಇರುವುದಾಗಿ ತಿಳಿಸಿದ್ದರು.
ಆರು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಐದು ವರ್ಷದ ಮಗು ಇದೆ, ಆದರೂ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದ ಎಂದು ತಂದೆ ನೀಡಿದ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದರು. ಅದರಂತೆ, ಪೊಲೀಸರು ಸ್ಥಳೀಯರನ್ನು ವಿಚಾರಣೆ ನಡೆಸಿದ್ದಾರೆ. ಸ್ಥಳೀಯರು ಸುಮಾ ಜೊತೆ ಡಿ.25ರಂದು ರಾತ್ರಿ ಮಾತನಾಡಿರುವ ಬಗ್ಗೆ ಹೇಳಿದ್ದರು. ಅಲ್ಲದೆ, ಈ ನಡುವೆ ನಾರಪ್ಪ ತನ್ನ ಮನೆಗೆ ಸಿಮೆಂಟ್, ಒಂದಷ್ಟು ಕಲ್ಲುಗಳನ್ನು ತಂದಿದ್ದ ಬಗ್ಗೆಯೂ ಮಾಹಿತಿ ನೀಡಿದ್ದರು.
ಈ ಬಗ್ಗೆ ಪೊಲೀಸರು ನಾರಪ್ಪನನ್ನು ಪ್ರಶ್ನೆ ಮಾಡಿದ್ದು, ಜೋಳವನ್ನು ಮುಚ್ಚಿಡಲು ಹೊಂಡ ಮಾಡಿದ್ದೆ. ಅದನ್ನು ಸರಿಪಡಿಸಲು ಸಿಮೆಂಟ್ ತಂದಿದ್ದಾಗಿ ಹೇಳಿಕೆ ನೀಡಿದ್ದ. ಆದರೆ ಪೊಲೀಸರು ಮತ್ತೆ ಆತನನ್ನು ಠಾಣೆಗೆ ಬರುವಂತೆ ಹೇಳಿದಾಗ, ತನ್ನ ಮೊಬೈಲ್ ಆಫ್ ಮಾಡಿ ತಪ್ಪಿಸಿಕೊಂಡಿದ್ದ. ಹೀಗಾಗಿ ಪೊಲೀಸರು ಎರಡು ದಿನ ಬಿಟ್ಟು ನೇರವಾಗಿ ಆತನ ಮನೆಗೆ ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಆತ ಮಲಗುವ ಕೋಣೆಯ ಮಂಚದಡಿಯಲ್ಲಿ ಸಿಮೆಂಟ್ ಕೆಲಸ ನಡೆದಿರುವುದು ಕಂಡುಬಂದಿದ್ದು, ಅದನ್ನು ಸಂಶಯದಿಂದ ಅಗೆದು ನೋಡಿದಾಗ ಸುಮಾಳನ್ನು ಕೊಂದು ಹೂತು ಹಾಕಿರುವುದು ಬೆಳಕಿಗೆ ಬಂದಿದೆ.
ಡಿ.25ರಂದು ರಾತ್ರಿ ನಾರಪ್ಪನೇ ಪತ್ನಿಯನ್ನು ಕೊಂದು ತನ್ನ ಮನೆಯ ಕೊಠಡಿಯಲ್ಲೇ ಹೂತು ಹಾಕಿದ್ದು, ಮರುದಿನವೇ ಆಕೆ ನಾಪತ್ತೆಯಾಗಿದ್ದಾಗಿ ಕತೆ ಕಟ್ಟಿದ್ದ. ಪೊಲೀಸರು, ಸಂಬಂಧಿಕರು, ಸ್ಥಳೀಯರು ಎಲ್ಲರನ್ನೂ ಸುಳ್ಳಿನ ಕತೆ ಹೇಳಿ ಯಾಮಾರಿಸಿದ್ದ. ಆದರೆ ಪೊಲೀಸರು ಸಕಾಲಿಕ ಸುಳಿವು ಆಧರಿಸಿ, ಬೆನ್ನತ್ತಿದಾಗ ನಾರಪ್ಪನ ನಿಜ ಬಣ್ಣ ಬಯಲಿಗೆ ಬಂದಿದೆ.
A man who was claiming to have been searching for his 'missing' wife has been arrested by the police for allegedly killing her, burying her body under a cot at home, and then misleading the locals and the police. The incident was reported from Konanur village. The accused Narappa allegedly killed his wife Suma.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
28-07-25 10:41 pm
Mangalore Correspondent
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
28-07-25 11:20 pm
Mangalore Correspondent
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm