ಬ್ರೇಕಿಂಗ್ ನ್ಯೂಸ್
14-01-22 11:14 pm HK Desk news ಕ್ರೈಂ
ಪುತ್ತೂರು, ಜ.14 : ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ, ಆಕೆಯನ್ನು ಗರ್ಭಪಾತ ಮಾಡಿಸಿದ ಪ್ರಕರಣದಲ್ಲಿ ಆರೋಪಿ ಕಡಬ ಪೊಲೀಸ್ ಪೇದೆಗೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ಪ್ರಕರಣದಲ್ಲಿ ಆರೋಪಿ ಕಡಬ ಪೊಲೀಸ್ ಪೇದೆ ಶಿವರಾಜ್ ನನ್ನು ಕಳೆದ ಸೆಪ್ಟೆಂಬರ್ 28 ರಂದು ಬಂಧಿಸಲಾಗಿತ್ತು. ಆಬಳಿಕ ಆರೋಪಿ ವಿರುದ್ದ ತನಿಖೆ ನಡೆಸಿ ಚಾರ್ಜ್ ಶೀಟ್ ಹಾಕಲಾಗಿದ್ದು ಈ ವೇಳೆ ಆರೋಪಿ ಜೈಲಿನಲ್ಲಿ 100 ದಿನಗಳನ್ನು ಪೂರೈಸಿದ್ದಾನೆ. ಈ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆಗಾಗಿ ಪುತ್ತೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ. ಆದರೆ ಪ್ರಕರಣ ಗಂಭೀರವಾಗಿದ್ದನ್ನು ಪರಿಗಣಿಸಿ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಬಾಲಕಿ ತನ್ನ ಮೇಲೆ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ನೀಡಲು ಕಡಬ ಠಾಣೆಗೆ ಬಂದಿದ್ದಳು. ಇದರಿಂದ ಪರಿಚಯ ಆಗಿದ್ದ ಬಾಲಕಿಯನ್ನು ಆರೋಪಿ ಶಿವರಾಜ್ ಪುಸಲಾಯಿಸಿ, ಆಕೆಯ ಮನೆಗೆ ತೆರಳಲು ಆರಂಭಿಸಿದ್ದ. ಸಮನ್ಸ್ ನೀಡಲು ಬರುತ್ತಿರುವುದಾಗಿ ಹೇಳಿ ಬಾಲಕಿ ಜೊತೆಗೆ ಸಂಬಂಧ ಬೆಳೆಸಿದ್ದ. ಆನಂತರ ಮದುವೆಯಾಗುತ್ತೇನೆಂದು ಹೇಳಿ ಲೈಂಗಿಕ ಸಂಬಂಧ ಮಾಡಿಕೊಂಡಿದ್ದ. ಆಬಳಿಕ ಬಾಲಕಿ ಗರ್ಭ ಧರಿಸಿದ್ದು ಮನೆಯವರು ಸಂಶಯದಿಂದ ತಪಾಸಣೆ ನಡೆಸಿದಾಗ ಐದೂವರೆ ತಿಂಗಳ ಗರ್ಭಿಣಿ ಎಂದು ತಿಳಿದುಬಂದಿತ್ತು. ಈ ಬಗ್ಗೆ ಬಾಲಕಿಯನ್ನು ಮದುವೆಯಾಗಲು ಮನೆಯವರು ಒತ್ತಾಯಿಸಿದ್ದಾರೆ. ಆದರೆ ಆರೋಪಿ ನಿರಾಕರಿಸಿದ್ದರಿಂದ ಆಕೆಯ ತಂದೆ ಕಡಬ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದರು.
ಇದೇ ವೇಳೆ, ಆರೋಪಿ ಶಿವರಾಜ್ ಬಾಲಕಿಯ ತಾಯಿಗೆ 35 ಸಾವಿರ ಹಣ ಕೊಟ್ಟು ಮಂಗಳೂರಿಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದಾನೆ. ಈ ವಿಷಯ ಮಾಧ್ಯಮದಲ್ಲಿ ಬರುತ್ತಿದ್ದಂತೆ ಆರೋಪಿ ಶಿವರಾಜ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಆಬಳಿಕ ಶಿವರಾಜ್ ನನ್ನು ಪೊಲೀಸ್ ಸೇವೆಯಿಂದ ವಜಾ ಮಾಡಲಾಗಿತ್ತು.
ಕಡಬ ಠಾಣೆಯಲ್ಲಿ ಆರೋಪಿ ವಿರುದ್ದ ಪ್ರಮುಖ ಸೆಕ್ಷನ್ ಹಾಕಲಾಗಿದ್ದು ಅಪರಾಧವನ್ನು ಎಸ್ಪಿ ಋಷಿಕುಮಾರ್ ಸೋನವಾಣೆ ಗಂಭೀರವಾಗಿ ಪರಿಗಣಿಸಿದ್ದರು. ಒಬ್ಬ ಪೊಲೀಸ್ ಅಧಿಕಾರಿಯಾಗಿ ದೂರುದಾರ ಯುವತಿಯ ಮುಗ್ಧತೆಯನ್ನು ದುರುಪಯೋಗ ಪಡಿಸಿ ಅತ್ಯಾಚಾರ ನಡೆಸಿದ್ದಕ್ಕಾಗಿ 376(2) ಅಡಿ ಮತ್ತು 506 ಎ ಹಾಗೂ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಲಾಗಿತ್ತು.
The court has rejected the bail plea of a police constable who was arrested on charges of sexually exploiting a minor rape survivor. The Puttur Fifth District and Sessions Court gave the order on Thursday.
27-06-25 05:38 pm
Bangalore Correspondent
Five Tigers Die Male Mahadeshwara Forest: ಮಲೆ...
27-06-25 02:46 pm
ಹಾಸನದಲ್ಲಿ ಮುಂದುವರೆದ ಹೃದಯಾಘಾತ ಪ್ರಕರಣಗಳು ; 22ರ...
26-06-25 10:37 pm
Heart Attack, Hassan District: ಹಾಸನ ಜಿಲ್ಲೆಯಲ್...
26-06-25 02:15 pm
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
27-06-25 01:44 pm
HK News Desk
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
27-06-25 04:56 pm
Mangalore Correspondent
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
27-06-25 07:27 pm
HK News Desk
Mangalore Police, Stock Market Fraud, Arrest:...
26-06-25 10:49 pm
Varkady, Manjeshwar Crime, Son Kills Mother:...
26-06-25 05:32 pm
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am