ಎಣ್ಣೆ ಪಾರ್ಟಿಗೆಂದು ಕರೆದು ಯುವಕನನ್ನ ಬರ್ಬರವಾಗಿ ಕೊಂದ ಸ್ನೇಹಿತರು 

19-01-22 11:12 am       HK Desk news   ಕ್ರೈಂ

ಎಣ್ಣೆ ಪಾರ್ಟಿಗೆಂದು ಕರೆದು ಯುವಕನೊಬ್ಬನನ್ನು ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸೀಗೆಹಳ್ಳಿ ಗ್ರಾಮದ ಹೊರವಲಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ' ಜ.19: ಎಣ್ಣೆ ಪಾರ್ಟಿಗೆಂದು ಕರೆದು ಯುವಕನೊಬ್ಬನನ್ನು ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸೀಗೆಹಳ್ಳಿ ಗ್ರಾಮದ ಹೊರವಲಯಲ್ಲಿ ನಡೆದಿದೆ.

ಸೀಗೆಹಳ್ಳಿ ಗ್ರಾಮದ ಮೋಹನ್ (28) ಮೃತ ಯುವಕ‌ ಎಂದು ತಿಳಿದು ಬಂದಿದೆ. ಪ್ರಭಾಕರ್, ಸುಮನ್, ನಂದನ್ ಮೇಲೆ ಕೊಲೆ ಆರೋಪ ಮಾಡಲಾಗಿದೆ. ಸ್ನೇಹಿತರ ನಡುವೆ ಹಳೆ ದ್ವೇಷ ಇತ್ತು ಎಂದು ತಿಳಿದು ಬಂದಿದೆ.

ಕಳೆದ ಸಂಜೆ ಸ್ನೇಹಿತರೆಲ್ಲರು ಎಣ್ಣೆ ಪಾರ್ಟಿಗೆ ಎಂದು ಸೀಗೆಹಳ್ಳಿ- ಗೆಜ್ಜಿಗಾನಹಳ್ಳಿ ಮಾರ್ಗಮಧ್ಯೆ ಇರುವ ನಿಲಗಿರಿ ತೋಪಿನ ನಿರ್ಜನ ಪ್ರದೇಶಕ್ಕೆ ಮೋಹನ್​ನನ್ನು ಕರೆದೊಯ್ದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಮೋಹನ್​ನನ್ನು ಆತನ ಸ್ನೇಹಿತರು ಭೀಕರವಾಗಿ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ.

ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕೊಲೆ ಬಗ್ಗೆ ದೂರು ದಾಖಲಿಸಿಕೊಂಡಿರುವ ಶಿಡ್ಲಘಟ್ಟ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Chikkaballapur youth killed brutally by friends during party, old revenge suspected.