ಬ್ರೇಕಿಂಗ್ ನ್ಯೂಸ್
21-01-22 07:32 pm HK Desk news ಕ್ರೈಂ
ತಿರುಪತಿ, ಜ.21 : ಸಾಮಾನ್ಯವಾಗಿ ಪತ್ನಿಯ ಶೀಲ ಶಂಕಿಸಿ, ಪತಿಯಂದಿರು ಪತ್ನಿಯ ಕೊಲೆ ಮಾಡಿದ್ದು ಕೇಳಿದ್ದೇವೆ. ಆದರೆ, ಇಲ್ಲೊಬ್ಬಳು ಪತಿಯನ್ನೇ ಅದೇ ಕಾರಣಕ್ಕಾಗಿ ಕೊಂದು ಹಾಕಿದ್ದಾಳೆ. ಪತ್ನಿಯೇ ಪತಿಯ ತಲೆಯನ್ನು ಕಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ವಸುಂಧರಾ(50) ಪತಿಯನ್ನೇ ಕೊಲೆಗೈದಿರುವ ಮಹಿಳೆಯಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ರವಿಚಂದರ್(53) ಕೊಲೆಯಾದ ವ್ಯಕ್ತಿಯಾಗಿದ್ದು, ಕೌಟುಂಬಿಕ ಕಲಹದಲ್ಲಿ ಮಾತಿಗೆ ಮಾತು ನಡೆದು ಗುರುವಾರ ರಾತ್ರಿ ಪತಿಯ ಕುತ್ತಿಗೆಯನ್ನೇ ಪತ್ನಿ ವಸುಂಧರಾ ಸೀಳಿದ್ದಾಳೆ. ಆನಂತರ, ಪತಿಯ ಕುತ್ತಿಗೆಯನ್ನು ಕೊಯ್ದು ತಲೆಯನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಆಟೋದಲ್ಲಿ ರೆನಿಗುಂಟ ಪೊಲೀಸ್ ಠಾಣೆಗೆ ಬಂದಿದ್ದಳು.
ರವಿಚಂದರ್ ಉದ್ಯಮ ನಡೆಸುತ್ತಿದ್ದು, 25 ವರ್ಷಗಳ ಹಿಂದೆ ವಸುಂಧರಾಳನ್ನು ವರಿಸಿದ್ದ. ಇವರಿಗೆ 20 ವರ್ಷಗಳ ಮಗ ಇದ್ದಾನೆ. ದೇಗುಲ ನಗರಿ ತಿರುಪತಿಯ ರೆನಿಗುಂಟ ಠಾಣೆ ವ್ಯಾಪ್ತಿಯ ಬುಗ್ಗ ಸ್ಟ್ರೀಟ್ ನಲ್ಲಿ ನೆಲೆಸಿದ್ದರು. ಆರಂಭದಲ್ಲಿ ಒಳ್ಳೆಯದಾಗಿಯೇ ಇದ್ದ ದಂಪತಿ, ಇತ್ತೀಚೆಗೆ ತೀವ್ರವಾಗಿ ಮುನಿಸಿಕೊಂಡಿದ್ದರು. ಇಬ್ಬರ ನಡುವೆ ಕುಟುಂಬದ ವಿಚಾರದಲ್ಲಿ ಕಲಹ ನಡೆದಿತ್ತು. ವಸುಂಧರಾಗೆ ಪತಿ ರವಿಚಂದರ್, ಬೇರೊಬ್ಬ ಯುವತಿ ಜೊತೆ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಹೊಂದಿದ್ದಳು. ಇದೇ ವಿಚಾರದಲ್ಲಿ ಇವರ ನಡುವೆ ಕಲಹ ನಡೆದಿತ್ತು ಎನ್ನಲಾಗಿದೆ. ಗುರುವಾರ ರಾತ್ರಿ ಇವರ ನಡುವಿನ ಕಲಹ ತೀವ್ರ ಮಟ್ಟಕ್ಕೆ ಹೋಗಿದ್ದು ಮಾತಿಗೆ ಮಾತು ಬೆಳೆದು ಪತ್ನಿಯೇ ಕತ್ತಿಯಿಂದ ಪತಿಯ ಕುತ್ತಿಗೆ ಸೀಳಿದ್ದಾಳೆ.
A 50-year-old woman in Andhra Pradesh’s Tirupati killed her husband and beheaded him over suspicions of infidelity. The accused, identified as Vasundhara, stabbed her husband Ravichandar (53) to death and lopped off his head. She then walked into a local police station with her spouse’s severed head, and surrendered.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm