ಬ್ರೇಕಿಂಗ್ ನ್ಯೂಸ್
24-01-22 08:52 pm Mangalore Correspondent ಕ್ರೈಂ
ಮಂಗಳೂರು, ಜ.24 : ಕೆಎಸ್ಆರ್ ಪಿ ವಿಭಾಗದಲ್ಲಿ ಪೊಲೀಸ್ ಹುದ್ದೆ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿದ್ದ ನಿವೃತ್ತ ಯೋಧನೊಬ್ಬ ತನ್ನ ಸೇವೆಯ ಕುರಿತ ದಾಖಲಾತಿಯಲ್ಲಿ ಫೋರ್ಜರಿ ಮಾಡಿರುವುದು ಕಂಡುಬಂದಿದ್ದು, ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ವಿಭಾಗದ ಕೆಎಸ್ಆರ್ ಪಿ ಯೂನಿಟ್ ಅಸೈಗೋಳಿಯಲ್ಲಿದ್ದು, ಅಲ್ಲಿನ ಕೇಂದ್ರಕ್ಕೆ ಸೇರ್ಪಡೆಯಾಗಲು ಚಿತ್ರದುರ್ಗದ ವಸಂತ ಕುಮಾರ್ ಎಂಬ ವ್ಯಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಜೊತೆಗೆ ತನ್ನ ಸೇವಾವಧಿ, ಶಿಕ್ಷಣ ಇನ್ನಿತರ ದಾಖಲಾತಿಗಳನ್ನು ನೀಡಿದ್ದ.
ಆಯ್ಕೆ ಪ್ರಕ್ರಿಯೆ ವೇಳೆ ಆತ ನೀಡಿದ್ದ ದಾಖಲಾತಿಗಳನ್ನು ಆಯಾ ವಿಭಾಗಕ್ಕೆ ಪರಿಶೀಲನೆಗಾಗಿ ಕಳಿಸಿಕೊಡಲಾಗಿತ್ತು. ಈ ವೇಳೆ, ವಸಂತ ಕುಮಾರ್ ತಾನು ಸಿಆರ್ ಪಿಎಫ್ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾಗಿನ ಅವಧಿಯ ನಿರ್ವಹಣಾ ಪತ್ರದಲ್ಲಿ ಪೋರ್ಜರಿ ಮಾಡಿದ್ದು ಕಂಡುಬಂದಿದೆ. ಸೇವಾವಧಿಯಲ್ಲಿ ಕುಡಿತದ ಚಟ ಹೊಂದಿದ್ದರಿಂದ ಬ್ಯಾಡ್ ಎಂದು ನಮೂದಿಸಿದ್ದನ್ನು ತಿದ್ದಿ ಗುಡ್ ಎಂದು ಮಾಡಿಕೊಂಡಿದ್ದ.
ಸರಕಾರಿ ದಾಖಲೆಯನ್ನು ತಿದ್ದಿ ಪೋರ್ಜರಿ ಮಾಡಿದ್ದಲ್ಲದೆ, ಸರಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಮೋಸ ಎಸಗಿದ ವಿಚಾರದಲ್ಲಿ ಕೆಎಸ್ಆರ್ ಪಿ ಕಮಾಂಡೆಂಟ್ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಕೊಣಾಜೆ ಠಾಣೆಯಲ್ಲಿ ಆತನ ಪೋರ್ಜರಿ ದಾಖಲೆ ಬಗ್ಗೆ ಎಫ್ಎಸ್ ಎಲ್ ಮಾಡಲು ನೀಡಲಾಗಿದ್ದು ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
Mangalore Ex Military Man forges conduct certificate to Join KSRP Police department, FIR has been filed against Vasant Kumar native of Chitradura at Konaje Police Station. He had forged the conduct certificate issued by the Military Department. His conduct was issued as bad which he tried to forge as good.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm