ಬ್ರೇಕಿಂಗ್ ನ್ಯೂಸ್
02-02-22 03:13 pm HK Desk news ಕ್ರೈಂ
ಬೆಂಗಳೂರು, ಫೆ.2 : ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದ ಖದೀಮರ ಜಾಲವನ್ನು ಬೆಂಗಳೂರಿನ ತ್ಯಾಮಗೊಂಡ್ಲು ಪೊಲೀಸರು ಪತ್ತೆ ಮಾಡಿದ್ದಾರೆ.
ಗಾಂಜಾ ಪೂರೈಕೆದಾರನ ಮಾಹಿತಿ ಹಿಡಿದು ಬೆಂಗಳೂರು ಪೊಲೀಸರು ಗಾಂಜಾ ಬೆಳೆಯುವ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಗೆ ತೆರಳಿದ್ದು, ಅಲ್ಲಿನ ನಿವಾಸಿಗಳು ಬೆಳೆಯುತ್ತಿದ್ದ ಅಪಾರ ಪ್ರಮಾಣದ ಗಾಂಜಾ ಗದ್ದೆಯನ್ನು ನೋಡಿ ಶಾಕ್ ಆಗಿದ್ದಾರೆ. ಗೋದಾವರಿ ನದಿ ತೀರದ ಗುಡ್ಡಗಾಡು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಗಾಂಜಾ ಬೆಳೆಯುತ್ತಿದ್ದು, ಅಲ್ಲಿನ ಜನರು ಅದನ್ನೇ ಮುಖ್ಯ ಕಸುಬಾಗಿಸಿಕೊಂಡಿದ್ದಾರೆ.
ತಮ್ಮ ಹೊಲಗಳಲ್ಲಿ ರಾಜಾರೋಷವಾಗಿ ಗಾಂಜಾವನ್ನು ಬೆಳೆದು ಮನೆ ಅಂಗಳದಲ್ಲಿ ಒಣಗಿಸಿ, ಪಾರ್ಸೆಲ್ ಮಾಡುತ್ತಿದ್ದರು. ನೆಲಮಂಗಲ ಸರ್ಕಲ್ ಇನ್ ಸ್ಪೆಕ್ಟರ್ ರಾಜೀವ ಮತ್ತವರ ತಂಡ ಗೋದಾವರಿ ಜಿಲ್ಲೆಗೆ ತೆರಳಿದ್ದು ಅಲ್ಲಿ ಬೆಳೆಯುತ್ತಿರುವ ಗಾಂಜಾ ಗದ್ದೆಗಳು, ಗಾಂಜಾವನ್ನು ಮೂಟೆ ಕಟ್ಟಿ ದಾಸ್ತಾನು ಮಾಡಿರುವುದು, ಬೆಳೆಯನ್ನು ಕೊಯ್ಲು ಮಾಡಿ ಒಣಗಿಸಿ ದಾಸ್ತಾನು ಕೇಂದ್ರಕ್ಕೆ ಸಾಗಿಸುತ್ತಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ರೈತರು ಬೆಳೆಯುವ ಗಾಂಜಾವನ್ನು ಪ್ಯಾಕೆಟ್ ಮೂಲಕ ಅಲ್ಲಿಂದ ಗುಪ್ತವಾಗಿ ಸರಬರಾಜು ಮಾಡಲಾಗುತ್ತಿದೆ. ತ್ಯಾಮಗೊಂಡ್ಲು ಪೊಲೀಸರು ಗಾಂಜಾ ಕಿಂಗ್ ಪಿನ್ ಎನ್ನಲಾಗಿರುವ ಆಂಧ್ರಪ್ರದೇಶ ಮೂಲದ ರಾಮಪ್ರಸಾದ್ ಮತ್ತು ನೆಲಮಂಗಲ ನಿವಾಸಿ ಉಮೇಶ್ ನನ್ನು ಬಂಧಿಸಿದ್ದಾರೆ. ಇವರ ನಡುವೆ ಕೊಂಡಿಯಾಗಿದ್ದ ಸೈಯದ್ ಎಂಬ ಆರೋಪಿ ಪೊಲೀಸರ ಕಾರ್ಯಾಚರಣೆ ತಿಳಿದು ಎಸ್ಕೇಪ್ ಆಗಿದ್ದಾನೆ. ಆರೋಪಿಗಳು ಕಾರಿನಲ್ಲಿ ಸಾಗಿಸುತ್ತಿದ್ದ 53 ಕೇಜಿ ಗಾಂಜಾ, ಎರಡು ಮೊಬೈಲ್, ಮಾರುತಿ 800 ಕಾರು ಜಪ್ತಿ ಮಾಡಿದ್ದಾರೆ.
ಆರೋಪಿಗಳು ಗೋದಾವರಿ ಜಿಲ್ಲೆಯಿಂದ ರಹಸ್ಯವಾಗಿ ಗಾಂಜಾವನ್ನು ತಂದು ಬೆಂಗಳೂರು ಹೊರವಲಯದಲ್ಲಿ ವಹಿವಾಟು ನಡೆಸುತ್ತಿದ್ದರು. ಚಿಕ್ಕಬಳ್ಳಾಪುರ ಸೇರಿ ಹೊರ ಜಿಲ್ಲೆಗಳಿಗೂ ಗಾಂಜಾ ಪೂರೈಕೆ ಮಾಡುತ್ತಿದ್ದರು. ಇಲ್ಲಿಂದಲೇ ಪೆಡ್ಲರ್ ಗಳು ಗಾಂಜಾವನ್ನು ಪಡೆದು ವಿವಿಧ ಕಡೆಗಳಿಗೆ ಪೂರೈಸುತ್ತಿದ್ದರು. ಗೋದಾವರಿ ಜಿಲ್ಲೆಯಲ್ಲಿ ಪತ್ತೆಯಾಗಿರುವ ಗಾಂಜಾ ಬೆಳೆಯ ಬಗ್ಗೆ ಅಲ್ಲಿನ ಸ್ಥಳೀಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
53 kilo Ganja seized, illegal supply to Mangalore and Bangalore found by Police in Godavari. Peddlers pick Ganja from here and supply it to Mangalore and Bangalore has been revealed by the Police.
26-06-25 10:37 pm
HK News Desk
Heart Attack, Hassan District: ಹಾಸನ ಜಿಲ್ಲೆಯಲ್...
26-06-25 02:15 pm
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
26-06-25 10:22 pm
HK News Desk
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
26-06-25 10:08 pm
Mangalore Correspondent
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
26-06-25 10:49 pm
Mangalore Correspondent
Varkady, Manjeshwar Crime, Son Kills Mother:...
26-06-25 05:32 pm
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm