ಲಾಟರಿ ಹಣದ ಆಸೆಗೆ ಬಿದ್ದು ಲಕ್ಷಾಂತರ ರೂ. ಕಳಕೊಂಡ ಯುವಕ !

18-09-20 12:00 pm       Udupi Correspondent   ಕ್ರೈಂ

ಲಾಟರಿ ಹಣ ಗೆದ್ದಿರುವುದಾಗಿ ಬಂದ ಮೊಬೈಲ್ ಸಂದೇಶವನ್ನು ನಂಬಿದ ಯುವಕನೊಬ್ಬ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಬೆಳ್ಮಣ್‌ನಲ್ಲಿ ನಡೆದಿದೆ.

ಉಡುಪಿ, ಸೆ.17: ಲಾಟರಿ ಹಣ ಗೆದ್ದಿರುವುದಾಗಿ ಬಂದ ಮೊಬೈಲ್ ಸಂದೇಶವನ್ನು ನಂಬಿದ ಯುವಕನೊಬ್ಬ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಬೆಳ್ಮಣ್‌ನಲ್ಲಿ ನಡೆದಿದೆ.

ಬೆಳ್ಮಣ್ ಪುನಾರ್ ನಿವಾಸಿ ಸುರೇಶ್ ಪ್ರಭು ಎಂಬವರ ಮಗ ಸುಜಿತ್ ಪ್ರಭು (19) ಮೊಬೈಲ್‌ ನಂಬರಿಗೆ ಸೆ.4ರಂದು 12,18,095 ರೂ. ಲಾಟರಿ ಗೆದ್ದಿರುವುದಾಗಿ ಸಂದೇಶ ಬಂದಿತ್ತು. ತದನಂತರ ವ್ಯಕ್ತಿಯೊಬ್ಬ ಕರೆ ಮಾಡಿ, ಲಾಟರಿಯಲ್ಲಿ ಗೆದ್ದ 17,400 ಡಾಲರ್ ಹಣವನ್ನು ರೂಪಾಯಿಗೆ ಬದಲಾಯಿಸಲು 6,500 ರೂ. ಪಾವತಿಸಬೇಕು ಎಂದು ನಂಬಿಸಿದ್ದ ಎನ್ನಲಾಗಿದೆ.

ಅದರಂತೆ ಸುಜಿತ್ ಪ್ರಭು ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸಿದ್ದ. ನಂತರ ಮತ್ತೊಬ್ಬ ಕರೆ ಮಾಡಿ ಬೇರೆ ಕೆಲವು ಖಾತೆಯ ನಂಬರ್ ಗಳನ್ನು ನೀಡಿ ಅದಕ್ಕೂ ಹಣ ಪಾವತಿ ಮಾಡುವಂತೆ ತಿಳಿಸಿದ್ದ. ಹೀಗೆ ಸುಜಿತ್ ಒಟ್ಟು 2,05,500 ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ಡಿಪಾಸಿಟ್ ಮಾಡಿದ್ದು ವಂಚನೆಗೆ ಒಳಗಾದ ಬಗ್ಗೆ ಪೊಲೀಸ್ ಠಾಣೆಗೆ ದೂರಲಾಗಿದೆ. ಈ ಬಗ್ಗೆ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join our WhatsApp group for latest news updates