ಬ್ರೇಕಿಂಗ್ ನ್ಯೂಸ್
12-02-22 10:55 pm HK Desk news ಕ್ರೈಂ
ನವದೆಹಲಿ, ಫೆ.12 : ‘ಡಾರ್ಕ್ನೆಟ್’ ಹಾಗೂ ಕ್ರಿಪ್ಟೊಕರೆನ್ಸಿ ನೆರವಿನಲ್ಲಿ ಕೊರಿಯರ್ ಮೂಲಕ ದೇಶದಾದ್ಯಂತ ಮನೆ, ಮನೆಗಳಿಗೆ ಡ್ರಗ್ಸ್ ತಲುಪಿಸುತ್ತಿದ್ದ ಜಾಲವನ್ನು ಎನ್ಸಿಬಿ ಅಧಿಕಾರಿಗಳು ಭೇದಿಸಿದ್ದು, ಬೆಂಗಳೂರಿನ ಎಂಬಿಬಿಎಸ್ ವಿದ್ಯಾರ್ಥಿ ಸೇರಿ 22 ಮಂದಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆದಿತ್ಯ ರೆಡ್ಡಿ, ‘ಎಲ್ಎಸ್ಡಿ ಕಿಂಗ್’ ಎಂದೇ ಕರೆಯಲಾಗುತ್ತಿರುವ ರಘುನಾಥ ಕುಮಾರ್ ಹಾಗೂ ಡ್ರಗ್ಸ್ ಮಾರಾಟ ಜಾಲದ ಮಾಸ್ಟರ್ ಮೈಂಡ್ ಎಂದು ಗುರುತಿಸಲಾದ ಮೊಹ್ಮದ್ ಅಸ್ಲಾಂ ಎಂಬವರು ಬಂಧಿತರಲ್ಲಿ ಪ್ರಮುಖರು. ಡ್ರಗ್ಸ್ ಸಂಬಂಧಿಸಿ ಕರ್ನಾಟಕ ಪೊಲೀಸರು ರಘುನಾಥ ಕುಮಾರ್ ಎಂಬಾತನನ್ನು ಈಗಾಗಲೇ ಬಂಧಿಸಿದ್ದರು. ಆತನ ಮಾಹಿತಿಯಂತೆ ದೇಶದ ವಿವಿಧೆಡೆ ದಾಳಿ ನಡೆಸಲಾಗಿತ್ತು.
ಡಾರ್ಕ್ನೆಟ್ ವೆಬ್ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಡಿಎನ್ಎಂ ಇಂಡಿಯಾ, ಡಿಆರ್ಇಡಿ ಹಾಗೂ ದಿ ಓರಿಯಂಟ್ ಎಕ್ಸ್ಪ್ರೆಸ್ ಎಂಬ ಆನ್ಲೈನ್ ಮಾರುಕಟ್ಟೆಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಎನ್ಸಿಬಿ ಮಹಾ ನಿರ್ದೇಶಕ (ಉತ್ತರ ವಲಯ) ಜ್ಞಾನೇಶ್ವರ ಸಿಂಗ್ ತಿಳಿಸಿದ್ದಾರೆ.
‘ಆರೋಪಿಗಳು 20–35 ವರ್ಷ ವಯೋಮಾನದವರು. ಕೆಲವರು ಶಾಲೆ ಬಿಟ್ಟವರೂ ಇದ್ದಾರೆ. ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದವರಿದ್ದರು, ಮತ್ತೆ ಕೆಲವರು ಅಪರಾಧ ಕೃತ್ಯಗಳನ್ನೆಸಗುತ್ತಿದ್ದವರು ತಂಡದಲ್ಲಿ ಇದ್ದಾರೆ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಸೂರತ್, ಪುಣೆ, ಬೆಂಗಳೂರು, ಕೋಲ್ಕತ್ತ, ಡಾರ್ಜಿಲಿಂಗ್, ದೆಹಲಿ, ಗಾಜಿಯಾಬಾದ್, ರಾಂಚಿ ಹಾಗೂ ಗುವಾಹಟಿಗಳಲ್ಲಿ ನಾಲ್ಕು ತಿಂಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಎನ್ಸಿಬಿಯ ಕೋಲ್ಕತ್ತ ಹಾಗೂ ದೆಹಲಿ ವಲಯಕ್ಕೆ ಲಭಿಸಿದ್ದ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿ ಮಹಿಳೆ ಶ್ರದ್ಧಾ ಸುರಾನಾ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಫೈನಾನ್ಸಿಯಲ್ ಕನ್ಸಲ್ಟಂಟ್ ಆಗಿದ್ದಾರೆ. ಡಾರ್ಕ್ನೆಟ್ ಮೂಲಕ ವಿದೇಶಗಳಿಂದ ಡ್ರಗ್ಸ್ ಆಮದು ಮಾಡಿಕೊಳ್ಳುವುದು ಹಾಗೂ ಹಣಕಾಸು ವ್ಯವಹಾರ ನಿರ್ವಹಣೆ ಕಾರ್ಯದಲ್ಲಿ ಆಕೆ ಮತ್ತೊಬ್ಬ ಆರೋಪಿ ಜಸ್ಬೀರ್ ಎಂಬಾತನಿಗೆ ಸಹಕರಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ.
Newdelhi a 23-year-old woman financial analyst earning nearly Rs 70,000 a month; threeNetflix enthusiasts emulating their favourite characters from popular narco-series Narcos and Breaking Bad, ‘LSD King’ running his drug network from Bellary jail in Karnataka; a budding psychiatrist who wanted to spread love through drugs; and a Gujarati couple that switched to drugs trade after lockdown hit their legit business.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm