ಬ್ರೇಕಿಂಗ್ ನ್ಯೂಸ್
14-02-22 09:25 pm Bengaluru Correspondent ಕ್ರೈಂ
ಬೆಂಗಳೂರು, ಫೆ.14 : 100 ಕೋಟಿ ಲೋನ್ ಕೊಡಿಸುವುದಾಗಿ ಹೇಳಿ ಉದ್ಯಮಿಗಳನ್ನು ವಂಚಿಸುತ್ತಿದ್ದ ಅಂತರಾಜ್ಯ ಗ್ಯಾಂಗ್ ಒಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಹಾಗೂ ಮಧ್ಯಪ್ರದೇಶ ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮುಂಬೈ ಮೂಲದ ಸಂತೋಷ್, (36), ಸಂದೇಶ್ (45) ಸೇರಿ ಐವರ ಬಂಧಿತರು. ನೂರು ಕೋಟಿ ಲೋನ್ ಕೊಡಿಸೋದಾಗಿ ಹೇಳಿ ಉದ್ಯಮಿ ವಿನ್ಸನ್ ಎಂಬವರಿಂದ ಒಂದು ಕೋಟಿ ಪಡೆದು ವಂಚನೆ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಸೂಟ್ಕೇಸ್ನಲ್ಲಿ ತುಂಬಿಸಿದ ಹಣವನ್ನು ತೋರಿಸಿ ಖದೀಮರು ಗಾಳ ಹಾಕುತ್ತಿದ್ದರು. ಎರಡು ಸಾವಿರ ಮುಖಬೆಲೆಯ ಕೋಟ್ಯಾಂತರ ರೂ. ನಗದು ತೋರಿಸಿ ವಂಚನೆ ಎಸಗಿದ್ದಾರೆ ಎನ್ನಲಾಗಿತ್ತು. ವಿನ್ಸನ್, ಮೈಸೂರಿನ ಗಾರ್ಮೆಂಟ್ ಫ್ಯಾಕ್ಟರಿ ಉದ್ಯಮಿಯಾಗಿದ್ದು ವ್ಯಾಪಾರ ಅಭಿವೃದ್ಧಿ ಮಾಡಲು ಲೋನ್ ಪಡೆಯಲು ತಿರುಗಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಆರೋಪಿಗಳಾದ ಸಂತೋಷ್ ಹಾಗೂ ಸಂದೇಶ್, ನೂರು ಕೋಟಿ ಲೋನ್ ತೆಗೆಸಿಕೊಡುವುದಾಗಿ ಹೇಳಿ ಸ್ನೇಹ ಸಂಪಾದಿಸಿದ್ದರು. ಆನಂತರ, ಹಲವು ಫೈವ್ ಸ್ಟಾರ್ ಹೊಟೇಲ್ ಗಳಲ್ಲಿ ಮೀಟಿಂಗ್ ನಡೆಸಿದ್ದು ಈ ಬಗ್ಗೆ ಚರ್ಚೆ ನಡೆಸಿದ್ದರು.
ಸಾವಿರಾರು ಕೋಟಿ ಹಣ ತಮ್ಮ ಬಳಿ ಇರೋದಾಗಿ ಹೇಳಿದ್ದಲ್ಲದೆ, ನಂಬಿಕೆ ಬರಲು ಸೂಟ್ ಕೇಸ್ ಗಳಲ್ಲಿ ತುಂಬಿದ ಹಣವನ್ನು ತೋರಿಸಿ ಆಮಿಷ ಒಡ್ಡಿದ್ದರು. ಇದೆಲ್ಲಾ ಹಣ ನಿಮಗೂ ಸಿಗುತ್ತೆ. ಆದರೆ, ಹಣ ಸಿಗಬೇಕಾದ್ರೆ ಇಂತಿಷ್ಟು ಖರ್ಚಾಗುತ್ತೆ. ಅದಕ್ಕಾಗಿ ಒಂದು ಕೋಟಿ ಬೇಕೆಂದು ಹೇಳಿ ಉದ್ಯಮಿಯಿಂದಲೇ ಹಣವನ್ನು ಪಡೆದಿದ್ದರು. ಆದರೆ ನೂರು ಕೋಟಿಗಾಗಿ ಒಂದು ಕೋಟಿ ಹೋದರೆ ಹೋಗಲಿ ಎಂದು ಹಣ ಕೊಟ್ಟಿದ್ದ ಉದ್ಯಮಿ ತನಗೆ ಹಣ ಬರದಿದ್ದಾಗ ಮೋಸ ಆಗಿರುವ ಬಗ್ಗೆ ತಿಳಿದು ಪೊಲೀಸರತ್ತ ಬಂದಿದ್ದರು. ಸದ್ಯ ಐವರನ್ನ ಬಂಧಿಸಿ 87 ಲಕ್ಷ 73 ಸಾವಿರ ಹಣವನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.
The Electronics City police on Monday arrested a five-member gang allegedly for cheating several businessmen in the city offering huge amounts of loan and escaping with the 1% commission. This amount sums up to at least ₹1 crore. Based on a complaint filed by Vincent, a garment businessman, a team of police tracked down the gang and arrested them from Mumbai and Madhya Pradesh.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm