ಬ್ರೇಕಿಂಗ್ ನ್ಯೂಸ್
14-02-22 09:25 pm Bengaluru Correspondent ಕ್ರೈಂ
ಬೆಂಗಳೂರು, ಫೆ.14 : 100 ಕೋಟಿ ಲೋನ್ ಕೊಡಿಸುವುದಾಗಿ ಹೇಳಿ ಉದ್ಯಮಿಗಳನ್ನು ವಂಚಿಸುತ್ತಿದ್ದ ಅಂತರಾಜ್ಯ ಗ್ಯಾಂಗ್ ಒಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಹಾಗೂ ಮಧ್ಯಪ್ರದೇಶ ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮುಂಬೈ ಮೂಲದ ಸಂತೋಷ್, (36), ಸಂದೇಶ್ (45) ಸೇರಿ ಐವರ ಬಂಧಿತರು. ನೂರು ಕೋಟಿ ಲೋನ್ ಕೊಡಿಸೋದಾಗಿ ಹೇಳಿ ಉದ್ಯಮಿ ವಿನ್ಸನ್ ಎಂಬವರಿಂದ ಒಂದು ಕೋಟಿ ಪಡೆದು ವಂಚನೆ ಮಾಡಿದ್ದ ಬಗ್ಗೆ ದೂರು ದಾಖಲಾಗಿತ್ತು. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಸೂಟ್ಕೇಸ್ನಲ್ಲಿ ತುಂಬಿಸಿದ ಹಣವನ್ನು ತೋರಿಸಿ ಖದೀಮರು ಗಾಳ ಹಾಕುತ್ತಿದ್ದರು. ಎರಡು ಸಾವಿರ ಮುಖಬೆಲೆಯ ಕೋಟ್ಯಾಂತರ ರೂ. ನಗದು ತೋರಿಸಿ ವಂಚನೆ ಎಸಗಿದ್ದಾರೆ ಎನ್ನಲಾಗಿತ್ತು. ವಿನ್ಸನ್, ಮೈಸೂರಿನ ಗಾರ್ಮೆಂಟ್ ಫ್ಯಾಕ್ಟರಿ ಉದ್ಯಮಿಯಾಗಿದ್ದು ವ್ಯಾಪಾರ ಅಭಿವೃದ್ಧಿ ಮಾಡಲು ಲೋನ್ ಪಡೆಯಲು ತಿರುಗಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಆರೋಪಿಗಳಾದ ಸಂತೋಷ್ ಹಾಗೂ ಸಂದೇಶ್, ನೂರು ಕೋಟಿ ಲೋನ್ ತೆಗೆಸಿಕೊಡುವುದಾಗಿ ಹೇಳಿ ಸ್ನೇಹ ಸಂಪಾದಿಸಿದ್ದರು. ಆನಂತರ, ಹಲವು ಫೈವ್ ಸ್ಟಾರ್ ಹೊಟೇಲ್ ಗಳಲ್ಲಿ ಮೀಟಿಂಗ್ ನಡೆಸಿದ್ದು ಈ ಬಗ್ಗೆ ಚರ್ಚೆ ನಡೆಸಿದ್ದರು.
ಸಾವಿರಾರು ಕೋಟಿ ಹಣ ತಮ್ಮ ಬಳಿ ಇರೋದಾಗಿ ಹೇಳಿದ್ದಲ್ಲದೆ, ನಂಬಿಕೆ ಬರಲು ಸೂಟ್ ಕೇಸ್ ಗಳಲ್ಲಿ ತುಂಬಿದ ಹಣವನ್ನು ತೋರಿಸಿ ಆಮಿಷ ಒಡ್ಡಿದ್ದರು. ಇದೆಲ್ಲಾ ಹಣ ನಿಮಗೂ ಸಿಗುತ್ತೆ. ಆದರೆ, ಹಣ ಸಿಗಬೇಕಾದ್ರೆ ಇಂತಿಷ್ಟು ಖರ್ಚಾಗುತ್ತೆ. ಅದಕ್ಕಾಗಿ ಒಂದು ಕೋಟಿ ಬೇಕೆಂದು ಹೇಳಿ ಉದ್ಯಮಿಯಿಂದಲೇ ಹಣವನ್ನು ಪಡೆದಿದ್ದರು. ಆದರೆ ನೂರು ಕೋಟಿಗಾಗಿ ಒಂದು ಕೋಟಿ ಹೋದರೆ ಹೋಗಲಿ ಎಂದು ಹಣ ಕೊಟ್ಟಿದ್ದ ಉದ್ಯಮಿ ತನಗೆ ಹಣ ಬರದಿದ್ದಾಗ ಮೋಸ ಆಗಿರುವ ಬಗ್ಗೆ ತಿಳಿದು ಪೊಲೀಸರತ್ತ ಬಂದಿದ್ದರು. ಸದ್ಯ ಐವರನ್ನ ಬಂಧಿಸಿ 87 ಲಕ್ಷ 73 ಸಾವಿರ ಹಣವನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.
The Electronics City police on Monday arrested a five-member gang allegedly for cheating several businessmen in the city offering huge amounts of loan and escaping with the 1% commission. This amount sums up to at least ₹1 crore. Based on a complaint filed by Vincent, a garment businessman, a team of police tracked down the gang and arrested them from Mumbai and Madhya Pradesh.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm