ಬ್ರೇಕಿಂಗ್ ನ್ಯೂಸ್
21-02-22 09:49 am Shivamogga Reporter ಕ್ರೈಂ
ಶಿವಮೊಗ್ಗ, ಫೆ.21: ಹಿಜಾಬ್ ಬೆಂಕಿಯಿಂದ ಉರಿಯುತ್ತಿದ್ದ ಶಿವಮೊಗ್ಗ ನಗರದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತನ ಕೊಲೆಯಾಗಿದ್ದು ಮತ್ತೆ ಉದ್ವಿಗ್ನ ಸ್ಥಿತಿಗೆ ತಲುಪಿದೆ. ಭಾನುವಾರ ರಾತ್ರಿ ಏಕಾಏಕಿ ಕಾರಿನಲ್ಲಿ ಬಂದಿದ್ದ ತಂಡ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದೆ.
ಹಿಂದು ಸಂಘಟನೆ ಕಾರ್ಯಕರ್ತ ಹರ್ಷ (28) ಕೊಲೆಯಾದವರು. ಹತ್ಯೆಯಾದ ಬೆನ್ನಲ್ಲೇ ಶಿವಮೊಗ್ಗ ನಗರ ಉದ್ವಿಗ್ನ ಆಗಿದ್ದು ಕ್ಲರ್ಕ್ ಪೇಟೆ, ಎಂಕೆಕೆ ರಸ್ತೆ , ಸೀಗೆಹಟ್ಟಿ , ಇಮಾಮ್ ಬಡಾವಣೆಗಳಲ್ಲಿ ರಾತ್ರಿ ಕಲ್ಲು ತೂರಾಟ ಆಗಿದೆ. ಆಕ್ರೋಶಿತ ಪುಂಡರು ಪ್ರತಿಭಟನೆ ನೆಪದಲ್ಲಿ ಬೈಕ್ ಇನ್ನಿತರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಕೂಡಲೇ ಪೊಲೀಸರು ಲಾಠಿ ಬೀಸಿದ್ದು , ಜನರನ್ನು ಚದುರಿಸಲು ಯತ್ನಿಸಿದ್ದಾರೆ. ಕಲ್ಲು ತೂರಾಟ ಆಗುತ್ತಲೇ ಜನರು ಮನೆಯಿಂದ ಹೊರಬಂದು ಉದ್ವಿಗ್ನ ಸ್ಥಿತಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ಪೊಲೀಸರು ಬಳಿಕ ಅವರನ್ನು ಮನೆಯ ಒಳಗೆ ಕಳಿಸಲು ಹರಸಾಹಸ ಪಟ್ಟಿದ್ದಾರೆ. ಮಕ್ಕಳು, ಮಹಿಳೆಯರು ಹೊರಬಂದು ಪೊಲೀಸರ ರಕ್ಷಣೆ ಕೋರಿದ್ದಾರೆ. ಪೊಲೀಸರು ಆಕ್ರೋಶಿತರನ್ನು ವಶಕ್ಕೆ ಪಡೆದು ಪರಿಸ್ಥಿತಿ ಸಹಜ ಸ್ಥಿತಿಗೆ ತಂದಿದ್ದಾರೆ. ಹಿಂದು ಸಂಘಟನೆ ಮುಖಂಡರು ಪೊಲೀಸರ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ.
ಈ ಬಗ್ಗೆ ಗೃಹ ಸಚಿವ ಆರಗ ಜ್ನಾನೇಂದ್ರ ಪ್ರತಿಕ್ರಿಯೆ ನೀಡಿದ್ದು ಮೃತನ ಮನೆಯವರಿಗೆ ಸಾಂತ್ವನ ನೀಡಲಾಗಿದೆ. ಆರೋಪಿಗಳ ಸುಳಿವು ಪತ್ತೆಯಾಗಿದೆ. ತನಿಖೆ ಹಂತದಲ್ಲಿರುವಾಗ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಶೀಘ್ರದಲ್ಲೇ ಆರೋಪಿಗಳ ಹೆಡೆಮುರಿ ಕಟ್ಟುತ್ತೇವೆ. ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಂದೋಬಸ್ತ್ ಮಾಡಲಾಗಿದೆ. ನಗರ ಭಾಗದಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ ಎಂದು ತಿಳಿಸಿದ್ದಾರೆ.
Section 144 was imposed in the Shivamogga district of Karnataka after a 23-year-old Bajrang Dal activist was murdered on Sunday night. He was taken to the Mc Gann district hospital where he passed away. Karnataka Home Minister Araga Jnanendra said that the matter was not related to the ongoing hijab row in the state. “But we need to wait for further investigations before arriving at a conclusion,” he said. Araga Jnanendra spoke to the family of the deceased, who was a tailor, in Shivamogga.
26-06-25 10:37 pm
HK News Desk
Heart Attack, Hassan District: ಹಾಸನ ಜಿಲ್ಲೆಯಲ್...
26-06-25 02:15 pm
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
26-06-25 10:22 pm
HK News Desk
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
26-06-25 10:08 pm
Mangalore Correspondent
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
26-06-25 10:49 pm
Mangalore Correspondent
Varkady, Manjeshwar Crime, Son Kills Mother:...
26-06-25 05:32 pm
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm