ಬ್ರೇಕಿಂಗ್ ನ್ಯೂಸ್
04-03-22 02:12 pm Bengaluru Correspondent ಕ್ರೈಂ
ಬೆಂಗಳೂರು, ಮಾ.4: ಏರ್ಟೆಲ್ ಸಿಮ್ ಹೊಂದಿರುವ ಗ್ರಾಹಕರೇ ಎಚ್ಚರ. ನಿಮ್ಮ ಹೆಸರಲ್ಲೇ ಸಿಮ್ ಪಡೆದು ಸೈಬರ್ ವಂಚನೆ ಮಾಡೋರಿದ್ದಾರೆ, ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸೈಬರ್ ವಂಚನೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಏರ್ಟೆಲ್ ಕಂಪನಿಯ ಇಬ್ಬರು ಎಕ್ಸಿಕ್ಯುಟಿವ್ ಗಳನ್ನೇ ಬಂಧಿಸಿದ್ದಾರೆ.
ಹರ್ಷ(24) ಹಾಗೂ ಚೇತನ್(27) ಬಂಧಿತ ಆರೋಪಿಗಳು. ಕಳೆದ ಜನವರಿಯಲ್ಲಿ ರಾಜೇಶ್ವರ್ ಎಂಬ ಸೈಬರ್ ವಂಚಕನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ರೇವಾ ಯುನಿವರ್ಸಿಟಿಯಲ್ಲಿ ಸೀಟು ಕೊಡಿಸೋದಾಗಿ ವಂಚಿಸಿದ್ದ ಆರೋಪಿಯನ್ನು ಬಂಧಿಸಲಾಗಿತ್ತು. ಆತನ ಸಿಮ್ ತಪಾಸಣೆ ನಡೆಸಿದಾಗ, ನಕಲಿ ಸಿಮ್ ಮೂಲಕ ಕರೆ ಮಾಡಿದ್ದು ಕಂಡುಬಂದಿತ್ತು. ಸೀಟು ಕೊಡಿಸುವುದಾಗಿ ಹೇಳಿ 1.25 ಲಕ್ಷ ರೂ. ವಂಚಿಸಿದ್ದ.
ಇದೇ ರೀತಿ ಆರೋಪಿ ರಾಜೇಶ್ವರ್ ಹಲವರಿಗೆ ವಂಚಿಸಿರುವುದು ಪೊಲೀಸರ ವಿಚಾರಣೆಯಲ್ಲಿ ಪತ್ತೆಯಾಗಿತ್ತು. ಸಿಮ್ ಸಿಕ್ಕಿದ್ದು ಹೇಗೆ ಎಂದು ತಪಾಸಣೆ ನಡೆಸಿದ ವೇಳೆ ಏರ್ಟೆಲ್ ಕಂಪನಿಯ ಇಬ್ಬರು ಸೇಲ್ಸ್ ಎಕ್ಸಿಕ್ಯೂಟಿವ್ ಗಳೇ ಈತನಿಗೆ ಸಹಕಾರ ನೀಡಿರುವುದು ಗಮನಕ್ಕೆ ಬಂದಿತ್ತು. ಅದರಂತೆ, ಪೊಲೀಸರು ಸೈಬರ್ ವಂಚಕನಿಗೆ ಸಹಕಾರ ನೀಡಿರುವ ಆರೋಪದಲ್ಲಿ ಇಬ್ಬರು ಎಕ್ಸಿಕ್ಯುಟಿವ್ ಗಳನ್ನು ಬಂಧಿಸಿದ್ದಾರೆ.
ನಮ್ಮ ಬಳಿಯಿಂದಲೇ ಹೆಚ್ಚುವರಿ ದಾಖಲಾತಿ ಪಡೆದು ಪ್ರತ್ಯೇಕ ಸಿಮ್ ಖರೀದಿ ಮಾಡುತ್ತಿದ್ದ ಇವರು, ಅದನ್ನ ಸೈಬರ್ ವಂಚಕರಿಗೆ ನೀಡುತ್ತಿದ್ದರು. ಏರ್ಟೆಲ್ ಕಚೇರಿಯಲ್ಲೇ ಕುಳಿತು ಸೈಬರ್ ವಂಚಕರ ಪರ ಕೆಲಸ ಮಾಡುತ್ತಿದ್ದರು. ಗ್ರಾಹಕರ ಬಳಿ ಹೆಚ್ಚುವರಿ ದಾಖಲಾತಿ ಶೇಖರಿಸಿ ಸಿಮ್ ಗಳನ್ನು ಪಡೆಯುತ್ತಿದ್ದ ಆರೋಪಿಗಳು, ಅದನ್ನು ಸೈಬರ್ ವಂಚಕರಿಗೆ ನೀಡುತ್ತಿದ್ದರು.
Bangalore Two Airtel executives staffs arrested for using customers sim and committing cyber crime. The duo have duped people in lakhs.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
01-08-25 10:02 pm
Mangalore Correspondent
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm