ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಮುಂಬೈನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಕ್ಕಣ್ಣ ಬೆಂಗಳೂರಿನಲ್ಲಿ ಸೆರೆ ! ಉದ್ಯಮಿಗೆ ಹಲ್ಲೆಗೈದ ಬಳಿಕ ಪೊಲೀಸರಿಗೆ ಹೆದರಿ ಅವಿತುಕೊಂಡಿದ್ದ ! 

08-03-22 02:12 pm       Bengalore Correspondent   ಕ್ರೈಂ

ಮುಂಬೈನಲ್ಲಿ ಕೊಲೆ, ದರೋಡೆ, ಹಫ್ತಾ ವಸೂಲಿ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಲಿಯಾಸ್ ಅಬ್ದುಲ್ ಆಸಿಫ್ ಅಕಾ ಬಕ್ಕಣ್ಣ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ‌. 

ಬೆಂಗಳೂರು, ಮಾ.8: ಮುಂಬೈನಲ್ಲಿ ಕೊಲೆ, ದರೋಡೆ, ಹಫ್ತಾ ವಸೂಲಿ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಲಿಯಾಸ್ ಅಬ್ದುಲ್ ಆಸಿಫ್ ಅಕಾ ಬಕ್ಕಣ್ಣ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ‌. 

ಮುಂಬೈನಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಹಫ್ತಾ , ಡಕಾಯಿತಿ ಹೀಗೆ 37 ಪ್ರಕರಣಗಳನ್ನು ಆರೋಪಿ ಎದುರಿಸುತ್ತಿದ್ದ. ಆರೋಪಿ ಇಲಿಯಾಸ್, ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ಅಡಗಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿ ಕೃಷ್ಣ , ಎಎಸ್ಪಿ ಲಕ್ಷ್ಮೀ ಗಣೇಶ್, ಆನೇಕಲ್ ಡೆಪ್ಯುಟಿ ಎಂ. ಮಲ್ಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. 

ಪೊಲೀಸರು ಬೆನ್ನುಬಿದ್ದಾಗ, ಆರೋಪಿ ಇಲಿಯಾಸ್ ತನ್ನಲ್ಲಿದ್ದ ಗನ್ ತೆಗೆದು ತಿರುಗಿ ಬೀಳಲು ಸಜ್ಜಾಗಿದ್ದ.‌ ಆದರೆ ಪೊಲೀಸರು ಶಸ್ತ್ರ ಸಜ್ಜಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಪ್ರತಿದಾಳಿ ನಡೆಸಲು ಮುಂದಾಗದೆ ಶರಣಾಗಿದ್ದಾನೆ. ಆರೋಪಿ ಬಳಿಯಿಂದ ನಾಲ್ಕು ಸಜೀವ ಗುಂಡು, ಒಂದು ಪಿಸ್ತೂಲ್, 15 ಸಿಮ್ ಕಾರ್ಡ್, ಆರು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ಮುಂಬೈನಲ್ಲಿ ಇತ್ತೀಚೆಗೆ ಸಿಕಂದರ್ ರಾಜು ಲೂಲಾಡಿಯಾ ಎಂಬ ಉದ್ಯಮಿಯನ್ನು ಆತನ ಕಚೇರಿಯಲ್ಲೇ ಹಣಕ್ಕಾಗಿ ಕಬ್ಬಣದ ರಾಡ್ ನಿಂದ ಹೊಡೆದು ಹಲ್ಲೆ ಮಾಡಲಾಗಿತ್ತು.‌ ಅದರಲ್ಲಿ ಪ್ರಮುಖ ಆರೋಪಿಯಾಗಿದ್ದ ಇಲಿಯಾಸ್ ಅಬ್ದುಲ್ ಆಸಿಫ್ ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಮುಂಬೈ ನಗರ ಮತ್ತು ಮಹಾರಾಷ್ಟ್ರದಾದ್ಯಂತ ಆರೋಪಿ ಪತ್ತೆಗೆ ಹುಡುಕಾಟ ನಡೆದಿತ್ತು. ಹಾಗಾಗಿ ಕರ್ನಾಟಕಕ್ಕೆ ಬಂದು ದಕ್ಷಿಣ ಬೆಂಗಳೂರಿನ ನಿಗೂಢ ಜಾಗದಲ್ಲಿ ಅವಿತುಕೊಂಡಿದ್ದ. ಈ ಬಗ್ಗೆ ಮುಂಬೈ ಪೊಲೀಸರು ನೀಡಿದ ಸುಳಿವು ಆಧರಿಸಿ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

The Karnataka Police have arrested one of the most wanted Mumbai gangsters, Iliyas Abdul Asif a.k.a Bhackana, in an early morning operation here on Tuesday.