ಬ್ರೇಕಿಂಗ್ ನ್ಯೂಸ್
17-03-22 06:54 pm Mangalore Correspondent ಕ್ರೈಂ
ಕೊಣಾಜೆ, ಮಾ.17: ಅಂಗನವಾಡಿಯ ಗ್ಯಾಸ್ ಸ್ಟೌವ್ ರಿಪೇರಿಗೆಂದು ಬಂದಾತ ಅಂಗನವಾಡಿ ಸಹಾಯಕಿ ಮಹಿಳೆಯ ಕೈ ಎಳೆದು ಮಾನಭಂಗಕ್ಕೆ ಯತ್ನಿಸಿದ್ದು ಆರೋಪಿಯನ್ನ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಹರೇಕಳ ಗ್ರಾಮದ ಅಂಗನವಾಡಿಯ ಸಹಾಯಕಿ ಅವಿವಾಹಿತ ಮಹಿಳೆಗೆ ಅದೇ ಗ್ರಾಮದ ಆಲಡ್ಕ ನಿವಾಸಿ ನಿಝಾಮುದ್ದೀನ್(31) ಎಂಬಾತ ಕೈ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದರಿಂದ ಆರೋಪಿಯನ್ನ ಕೊಣಾಜೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಅಂಗನವಾಡಿಯಲ್ಲಿದ್ದ ಗ್ಯಾಸ್ ಸ್ಟೌವ್ ಕೆಟ್ಟು ದುರಸ್ತಿಗೆ ಬಂದ ಕಾರಣ ಅಂಗನವಾಡಿ ಟೀಚರ್ ಸಲಹೆಯಂತೆ ಸಹಾಯಕಿ ಗ್ಯಾಸ್ ಸ್ಟೌವ್ ರಿಪೇರಿ ಮಾಡುವ ಪರಿಚಯದ ಯುವಕ ನಿಝಾಮ್ ಅಂಗಡಿಗೆ ಕರೆ ಮಾಡಿ ತಿಳಿಸಿದ್ದರು. ಅದರಂತೆ ಬುಧವಾರ ಮಧ್ಯಾಹ್ನ ಆತ ಅಂಗನವಾಡಿಗೆ ಬಂದಿದ್ದಾನೆ. ಶಿಕ್ಷಕಿ ಆತನಿಗೆ ಅಡುಗೆ ಕೊಣೆಯಲ್ಲಿದ್ದ ಗ್ಯಾಸ್ ಸ್ಟೌವ್ ತೋರಿಸಿ ದುರಸ್ತಿ ಮಾಡಿ ತಾ ಎಂದು ಹೇಳಿ ಮಕ್ಕಳಿರುವ ಕೊಠಡಿಗೆ ತೆರಳಿದ್ದಾರೆ. ಆರೋಪಿ ನಿಝಾಮ್ ಚೀಲದಲ್ಲಿ ಗ್ಯಾಸ್ ಸ್ಟೌವ್ ತುಂಬಿಸುವಾಗ ಪಕ್ಕದಲ್ಲಿದ್ದ ಅಡುಗೆ ಸಹಾಯಕಿಯ ಕೈ ಹಿಡಿದು ಎಳೆದಿದ್ದು ಆಕೆ ಆತನ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಆಬಳಿಕ ಬೇಸರ ಮಾಡಬೇಡ ಎಂದು ಹೇಳಿದ್ದಾಗಿ ಯುವತಿ ದೂರಿದ್ದಾರೆ. ಆತ ತೆರಳಿದ ತಕ್ಷಣ ನಡೆದ ವಿಷಯವನ್ನು ಸಂತ್ರಸ್ತೆ ಶಿಕ್ಷಕಿಯ ಗಮನಕ್ಕೆ ತಂದಿದ್ದು ಶಿಕ್ಷಕಿ ಅಣ್ಣಂದಿರಿಗೆ ತಿಳಿಸುವಂತೆ ಸೂಚಿಸಿದ್ದರು. ಇಂದು ಸಂತ್ರಸ್ತೆ ಅಂಗನವಾಡಿ ಸಹಾಯಕಿ ಕೊಣಾಜೆ ಠಾಣೆಗೆ ತೆರಳಿ ದೂರು ನೀಡಿದ್ದು ಆರೋಪಿಯನ್ನ ಕೊಣಾಜೆ ಠಾಣೆ ಪೊಲೀಸರು ಕ್ಷಿಪ್ರವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
A government teacher from Konaje in Mangalore was sexually harassed by a Gas repair guy who came to the house to repair the gas has been arrested by Konaje Police. The arrested has been identified as Nizamuddin (31).
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
15-09-26 10:31 am
HK News Staffer
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am