ಬ್ರೇಕಿಂಗ್ ನ್ಯೂಸ್
17-03-22 10:17 pm Bengaluru Correspondent ಕ್ರೈಂ
ಬೆಂಗಳೂರು, ಮಾ.18: ನಿಮಗೆ ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ತೆಲಂಗಾಣ ಪೊಲೀಸರಿಗೇ ಸವಾಲು ಹಾಕಿ ತಲೆಮರೆಸಿಕೊಂಡಿದ್ದ ಐಷಾರಾಮಿ ಕಾರುಗಳನ್ನು ಕದಿಯುವುದನ್ನೇ ಕಸುಬು ಮಾಡಿಕೊಂಡಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬೇಟೆಯಾಡಿದ್ದಾರೆ.
ರಾಜಸ್ಥಾನದ ಮೂಲದ ಸತ್ಯೇಂದರ್ ಸಿಂಗ್ ಶೇಖಾವತ್ (41) ಬಂಧಿತ ಆರೋಪಿ. ಬೆಂಗಳೂರು, ಹೈದರಾಬಾದ್, ಚೆನ್ನೈ ಹೀಗೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಐಷಾರಾಮಿ ಕಾರುಗಳನ್ನು ಕದಿಯುವುದನ್ನೇ ವೃತ್ತಿ ಮಾಡಿಕೊಂಡಿದ್ದ ಶೇಖಾವತ್, ತೆಲಂಗಾಣ ಪೊಲೀಸರು ಬೆನ್ನುಬಿದ್ದಾಗ ನೀವು ತಾಕತ್ತಿದ್ದರೆ ಹಿಡಿದು ನೋಡಿ ಎಂದು ಸವಾಲು ಹಾಕಿದ್ದ ಎನ್ನಲಾಗಿದೆ. ಈತನಿಂದ ಟೊಯೊಟಾ ಫಾರ್ಚುನರ್, ಆಡಿ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಸುಮಾರು 20 ಕಾರಿನ ಕೀಗಳು, 13 ಸ್ಮಾರ್ಟ್ ಕೀಗಳು, ಕೀ ಕತ್ತರಿಸಲು ಬಳಸುವ ಎರಡು ಲಕ್ಷ ಮೌಲ್ಯದ ಯಂತ್ರ ಸೇರಿ ಕಾರು ಕದಿಯಲು ಬಳಸುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯ ವಿಚಾರಣೆಯಲ್ಲಿ ಬೆಂಗಳೂರಿನಲ್ಲಿ 12 ಕಾರು ಕಳವು, ಹೈದರಾಬಾದ್ ನಲ್ಲಿ 5 ರಾಜಸ್ಥಾನ ಹಾಗೂ ಚೆನ್ನೈನಲ್ಲಿ ತಲಾ ಒಂದು ಐಷಾರಾಮಿ ಕಾರು ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಬೆಂಗಳೂರು, ಚೆನ್ನೈನಲ್ಲಿ ಕಾರು ಕದ್ದು ರಾಜಸ್ಥಾನಕ್ಕೆ ಒಯ್ಯುತ್ತಿದ್ದ ಶೇಖಾವತ್, ಅಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. 2003ರಿಂದ ಕಾರು ಕಳವನ್ನೇ ವೃತ್ತಿಯಾಗಿಸಿದ್ದ ಈತನ ವಿರುದ್ಧ ದೇಶಾದ್ಯಂತ ಪ್ರಕರಣ ದಾಖಲಾಗಿದೆ. ದೆಹಲಿ, ಗುಜರಾತ್, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡು ಓಡಾಡುತ್ತಿದ್ದ.
ಕಳೆದ ಅಕ್ಟೋಬರ್ 19ರಂದು ಅಮೃತಹಳ್ಳಿ ಠಾಣೆ ವ್ಯಾಪ್ತಿಯ ವಸತಿ ಸಮುಚ್ಚಯ ಒಂದರಲ್ಲಿ ನಿಲ್ಲಿಸಿದ್ದ ಫಾರ್ಚುನರ್ ಕಳವಾದ ಬಗ್ಗೆ ಅಭಿಷೇಕ್ ಎಂಬವರು ದೂರು ನೀಡಿದ್ದರು. ಪ್ರಕರಣದ ತನಿಖೆಗೆ ಈಶಾನ್ಯ ವಿಭಾಗದ ಡಿಸಿಪಿ, ವಿಷೇಷ ತಂಡವನ್ನು ರಚಿಸಿದ್ದರು. ಈ ವೇಳೆ, ಕಾರು ಕಳ್ಳ ಜೈಪುರದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿ ಆರೋಪಿಯನ್ನು ಹಿಡಿದು ತಂದಿದ್ದಾರೆ. ಆರೋಪಿ ಬಾಯಿ ಬಿಡಿಸಿದಾಗ, ಐಷಾರಾಮಿ ಕಾರು ಕಳವುಗೈಯುತ್ತಿದ್ದ ಪ್ರವರ ಹೊರಬಿದ್ದಿದೆ.
Rajasthan-based Satyendra Singh Shekhawat, who has stolen more than 40 cars across a dozen different states, was caught and arrested in Bangalore on Thursday.Shekhawat, who has a track record of stealing cars in Gujarat, Karnataka, Delhi, Maharashtra, Hyderabad, Tamil Nadu, Daman, Diu and Telangana, challenged police by saying “catch me if you can.”
26-06-25 02:15 pm
HK News Desk
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
Assault Case, Anant Kumar Hegde, Accident: ಹಲ...
25-06-25 01:09 pm
25-06-25 10:05 pm
HK News Desk
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
26-06-25 12:02 pm
Mangalore Correspondent
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
Sixth Sense Beauty Salon, Raid, Mangalore, Po...
24-06-25 09:49 pm
26-06-25 02:54 pm
HK News Desk
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm
Social Media, Woman Murder, Affair, Mandya: ಪ...
25-06-25 04:06 pm
ಸ್ನೇಹಿತನಿಂದ 8 ಲಕ್ಷ ರೂ. ಸಾಲ ; ಕೊಟ್ಟ ಸಾಲ ತೀರಿಸಲ...
24-06-25 09:51 pm