ಬ್ರೇಕಿಂಗ್ ನ್ಯೂಸ್
18-03-22 06:17 pm Bengaluru Correspondent ಕ್ರೈಂ
ಬೆಂಗಳೂರು, ಮಾ.18: 23 ವರ್ಷದ ದಲಿತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಇಟ್ಟುಕೊಂಡಿದ್ದಲ್ಲದೆ, ಬಳಿಕ ಯುವತಿಯನ್ನು ಜಾತಿ ವಿಚಾರದಲ್ಲಿ ಮದುವೆಯಾಗಲು ನಿರಾಕರಿಸಿ ಪ್ರಿಯಕರನೇ ಬೆಂಕಿ ಹಚ್ಚಿ ಸುಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಯುವತಿಯನ್ನು ವಿಜಯಪುರ ಜಿಲ್ಲೆಯ ಮೂಲದ ದಾನೇಶ್ವರಿ (23) ಎಂದು ಗುರುತಿಸಲಾಗಿದೆ. ಆರೋಪಿ ಶಿವಕುಮಾರ್ ಚಂದ್ರಶೇಖರ್ ಹರೇಹಾಳ ವಿರುದ್ಧ ಯುವತಿಯ ತಂಗಿ ಬೆಂಗಳೂರಿನಲ್ಲಿ ಪೊಲೀಸ್ ದೂರು ನೀಡಿದ್ದು ಜಾತಿ ನಿಂದನೆ ಮತ್ತು ಕೊಲೆ ಪ್ರಕರಣ ದಾಖಲಾಗಿದೆ.
ದಾನೇಶ್ವರಿ ಮತ್ತು ಶಿವಕುಮಾರ್ ವಿಜಯಪುರ ಜಿಲ್ಲೆಯ ನಿವಾಸಿಗಳಾಗಿದ್ದು ಅಲ್ಲಿ ಒಂದೇ ಕಾಲೇಜಿನಲ್ಲಿ ಜೊತೆಯಾಗಿ ಇಂಜಿನಿಯರಿಂಗ್ ಮುಗಿಸಿದ್ದರು. ಅಲ್ಲಿದ್ದಾಗಲೇ ಪ್ರೀತಿ ನೆಪದಲ್ಲಿ ಇಬ್ಬರೂ ಸಂಬಂಧ ಇಟ್ಟುಕೊಂಡಿದ್ದರು. ಆಬಳಿಕ ಇಬ್ಬರು ಕೂಡ ಬೆಂಗಳೂರಿನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು ಅಲ್ಲಿಯೂ ಸಂಬಂಧ ಮುಂದುವರಿಸಿದ್ದರು. ಆರೋಪಿ ಶಿವಕುಮಾರ್ ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ.
ಇತ್ತೀಚೆಗೆ ಮದುವೆಯ ಬಗ್ಗೆ ದಾನೇಶ್ವರಿ, ಹುಡುಗನ ಬಳಿ ಚರ್ಚೆ ನಡೆಸಿದ್ದು ತಂದೆ, ತಾಯಿ ಬಳಿ ಕೇಳಿಕೊಂಡು ಬರುವುದಾಗಿ ಹೇಳಿ ಆರೋಪಿ ಊರಿಗೆ ತೆರಳಿದ್ದ. ಆನಂತರ, ಮರಳಿ ಬಂದಿದ್ದ ಶಿವಕುಮಾರ್, ಹುಡುಗಿ ಕೆಳ ಜಾತಿಯವಳು, ಮದುವೆಯಾಗಲು ಹೆತ್ತವರು ನಿರಾಕರಿಸಿದ್ದಾರೆ ಎಂದು ಹೇಳಿದ್ದ. ಇದರಿಂದ ಚಿಂತೆಗೆ ಒಳಗಾಗಿದ್ದ ದಾನೇಶ್ವರಿ, ಶಿವಕುಮಾರ್ ಕೆಲಸ ಮಾಡುತ್ತಿದ್ದ ಕಚೇರಿಗೆ ತೆರಳಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಳು.
ಆದರೆ ಶಿವಕುಮಾರ್, ಹುಡುಗಿಯನ್ನು ನಿಂದಿಸಿದ್ದಲ್ಲದೆ ಜಾತಿ ಹೆಸರೇಳಿ ಅವಾಚ್ಯ ಪದಗಳಿಂದ ಬೈದು ಕಳಿಸಿದ್ದ. ಆನಂತರ ಆರೋಪಿ, ಮಾತುಕತೆಗೆಂದು ನಿರ್ಜನ ಪ್ರದೇಶಕ್ಕೆ ಬರಹೇಳಿದ್ದು ಅಲ್ಲಿರುವಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ದೂರಿನಲ್ಲಿ ದೂರಲಾಗಿದೆ. ಅರೆಬರೆ ಸುಟ್ಟು ಹೋಗಿದ್ದ ಯುವತಿಯನ್ನು ಬಳಿಕ ಆತನೇ ಆಸ್ಪತ್ರೆಗೆ ಒಯ್ದು ದಾಖಲಿಸಿದ್ದು ಬಳಿಕ ಎಸ್ಕೇಪ್ ಆಗಿದ್ದ. ಮಾರ್ಚ್ 15 ರಂದು ಯುವತಿ ದಾನೇಶ್ವರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಪೊಲೀಸರು ಆರೋಪಿ ಯುವಕನ ವಿರುದ್ಧ ಜಾತಿ ನಿಂದನೆ ಕೇಸು ಮತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ.
In a shocking development, a man has allegedly torched his partner belonging to the Dalit community, to death in Bengaluru, police said on Friday.
26-06-25 02:15 pm
HK News Desk
ಬೈಕ್ ಟ್ಯಾಕ್ಸಿ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್...
26-06-25 12:44 pm
Bangalore Old Couple Suicide, Crime: ಬೆಂಗಳೂರಲ...
25-06-25 10:32 pm
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
Assault Case, Anant Kumar Hegde, Accident: ಹಲ...
25-06-25 01:09 pm
25-06-25 10:05 pm
HK News Desk
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
26-06-25 12:02 pm
Mangalore Correspondent
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
Lokayukta Raids Mangalore City Corporation, M...
25-06-25 10:46 pm
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
Sixth Sense Beauty Salon, Raid, Mangalore, Po...
24-06-25 09:49 pm
26-06-25 05:32 pm
Mangalore Correspondent
Mangalore Youth, IIT Bombay Campus, Crime Bra...
26-06-25 02:54 pm
“Pastor Alwyn Dmello, Mangalore: The Foreign...
26-06-25 12:42 am
Puttur rape, Crime: ಸಹಪಾಠಿ ವಿದ್ಯಾರ್ಥಿನಿಯನ್ನು...
25-06-25 11:11 pm
Social Media, Woman Murder, Affair, Mandya: ಪ...
25-06-25 04:06 pm