ಬ್ರೇಕಿಂಗ್ ನ್ಯೂಸ್
03-04-22 05:25 pm Mangalore Correspondent ಕ್ರೈಂ
ಮಂಗಳೂರು, ಎ.3 : ಮಹಿಳೆಯೊಬ್ಬರ ಮೈಗೆ ಕೈ ಮಾಡಿದ್ದಲ್ಲದೆ, ಆಕೆಗೆ ದೈಹಿಕ ಹಲ್ಲೆಗೈದ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಶಿವಮೊಗ್ಗ ಮೂಲದ ವನಜಾ ಎಂಬ ಮಹಿಳೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಕ್ರಮ ಜರುಗಿಸಿದ್ದಾರೆ. ದೂರಿನ ಪ್ರಕಾರ, ಮಹಿಳೆಯು ಆಸಿಫ್ ಅವರ ಮೂಲ್ಕಿಯಲ್ಲಿರುವ ಮೈಮೂನ ಫೌಂಡೇಶನ್ ಅಡಿ ಕಾರ್ಯ ನಿರ್ವಹಿಸುವ ಆಶ್ರಮದಲ್ಲಿ ಕಳೆದ ಒಂದು ವರ್ಷದಿಂದ ಆಶ್ರಯ ಪಡೆದಿದ್ದರು. ಈ ವೇಳೆ ಅಲ್ಲಿ ಆಶ್ರಮ ನೋಡಿಕೊಳ್ಳುತ್ತಿದ್ದ ಶಶಿಧರ್ ಎಂಬಾತ ಹಣಕಾಸು ವಂಚನೆ ಮಾಡಿ ಪರಾರಿಯಾಗಿದ್ದ. ಆತನಿಗೆ ಮಹಿಳೆ ಸಹಾಯ ಮಾಡಿದ್ದಾಳೆ ಎನ್ನುವ ಆರೋಪದಲ್ಲಿ ಆಸಿಫ್, ಶಿವಲಿಂಗ ಮತ್ತು ಮಹಮ್ಮದ್ ಅಫ್ತಾಬ್ ಸೇರಿ ಹಲ್ಲೆಗೈದು ಮಾನಸಿಕ ಕಿರುಕುಳ ನೀಡಿದ್ದಾರೆ.
ಮಹಿಳೆ ವನಜಾ ಈ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಹೋಮ್ ನರ್ಸ್ ಆಗಿದ್ದು ಕೊರೊನಾ ಬಳಿಕ ಕೆಲಸ ಕಳಕೊಂಡು ಕೆಲಸಕ್ಕಾಗಿ ಪಂಪ್ವೆಲ್ ನಲ್ಲಿ ಅಂಗಡಿ ಹೊಂದಿರುವ ಶಿವಲಿಂಗ ಬಳಿಗೆ ಹೋಗಿದ್ದಳು. ಶಿವಲಿಂಗ, ಬಳಿಕ ಆಸಿಫ್ ಗೆ ಮಾಹಿತಿ ನೀಡಿ ಆಶ್ರಮಕ್ಕೆ ಸೇರಿಸುವಂತೆ ಸಲಹೆ ನೀಡಿದ್ದ. ಅದರಂತೆ ಆಸಿಫ್ ಮಹಿಳೆಯನ್ನು ಕರೆದೊಯ್ದು ಆಶ್ರಮದಲ್ಲಿ ಆಶ್ರಯ ನೀಡಿದ್ದರು. ಈ ವೇಳೆ, ಆಶ್ರಮದ ಹಣಕಾಸು ವಿಚಾರದಲ್ಲಿ ವಂಚನೆ ಆಗಿದ್ದರಿಂದ ಮಹಿಳೆ ಮತ್ತು ಶಶಿಧರ್ ಬಳಿ ಆಸಿಫ್ ಪ್ರಶ್ನೆ ಮಾಡಿದ್ದರು.
ಹಣ ಕೇಳಿ, ವಿಕೆಟ್ ಮತ್ತು ಬೆಲ್ಟ್ ನಲ್ಲಿ ಹೊಡೆದಿದ್ದಾರೆಂದು ಮಹಿಳೆ ಆರೋಪಿಸಿದ್ದು ಬಳಿಕ ಆಕೆಯನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಮಹಡಿಯಿಂದ ಬಿದ್ದು ಗಾಯಗೊಂಡಿರುವುದಾಗಿ ಸುಳ್ಳು ಹೇಳಲು ಆಸಿಫ್ ಹೇಳಿದ್ದ. ಇಲ್ಲದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಆಸಿಫ್ ಬೆದರಿಕೆ ಹಾಕಿದ್ದು ಚಿಕಿತ್ಸೆ ನೀಡಿದ್ದ ವೈದ್ಯರು ಕೈಗೆ ಪೆಟ್ಟು ಬಿದ್ದ ಜಾಗಕ್ಕೆ ಪ್ಲಾಸ್ಟರ್ ಹಾಕಿದ್ದರು. ಕೈಗೆ ಬಿದ್ದ ಪೆಟ್ಟಿನ ಬಗ್ಗೆ ವೈದ್ಯರಿಗೆ ಅನುಮಾನ ಬಂದಿತ್ತು. ಬಳಿಕ ಮಹಿಳೆ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ಆಸಿಫ್, ಶಿವಲಿಂಗ ಮತ್ತು ಅಫ್ತಾಬ್ ಸೇರಿ ಹಲ್ಲೆಗೈದ ಬಗ್ಗೆ ಪ್ರಕರಣ ದಾಖಲಾಗಿದೆ. ಮಾನಭಂಗ ಯತ್ನ, ಕೊಲೆ ಬೆದರಿಕೆ, ಹಲ್ಲೆಗೈದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
The Pandeshwar Women’s police have arrested three persons including Asif Apathbandava for assaulting a woman at the Maimuna Foundation on April 2. The arrested have been identified as Mohammed Asif Apathbandava (39) from Mulki Karnad, Shivaling (40) from Pumpwell and Aftab (32) from Mulki.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm