ರಸ್ತೆ ಮಧ್ಯದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಖದೀಮರು !

23-09-20 02:57 pm       Mangalore Correspondent   ಕ್ರೈಂ

ರಸ್ತೆ ಮಧ್ಯದಲ್ಲೇ ಬೈಕಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಕೆಮ್ಮಿಂಜೆ ಗ್ರಾಮದ ನೈತಾಡಿ - ಬೆದ್ರಾಳ ರಸ್ತೆಯಲ್ಲಿ ನಡೆದಿದೆ‌. 

ಪುತ್ತೂರು, ಸೆಪ್ಟಂಬರ್ 23: ರಸ್ತೆ ಮಧ್ಯದಲ್ಲೇ ಬೈಕಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಯುವಕನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಘಟನೆ ಕೆಮ್ಮಿಂಜೆ ಗ್ರಾಮದ ನೈತಾಡಿ - ಬೆದ್ರಾಳ ರಸ್ತೆಯಲ್ಲಿ ನಡೆದಿದೆ‌. 

ಬೆದ್ರಾಳದ ಭಗತ್ ಸಿಂಗ್ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಇಬ್ಬರು ವ್ಯಕ್ತಿಗಳು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಒಬ್ವ ಸೆರೆ ಸಿಕ್ಕಿದ್ದು ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

ಬಂಧಿತನನ್ನು ನರಿಮೊಗರು ಗ್ರಾಮದ ಸಾಝಿಲ್ ಅಹಮ್ಮದ್ (24) ಎಂದು ಗುರುತಿಸಿದ್ದು ಪರಾರಿಯಾದ ಆರೋಪಿ ಪುತ್ತೂರು ಕೆಮ್ಮಿಂಜೆ ಗ್ರಾಮದ ಮಹಮ್ಮದ್ ಅಶ್ರಫ್ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿ ಬಳಿಯಿಂದ ರೂ. 3000 ಮೌಲ್ಯದ 166 ಗ್ರಾಂ ಗಾಂಜಾ ದೊರೆತಿದ್ದು ಸುಮಾರು ರೂ. 40,000 ಮೌಲ್ಯದ ದ್ವಿಚಕ್ರ ವಾಹನ ಮತ್ತು 12,000 ಮೌಲ್ಯದ ಮೊಬೈಲ್ ಪೋನ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Join our WhatsApp group for latest news updates (2)