ಬ್ರೇಕಿಂಗ್ ನ್ಯೂಸ್
20-04-22 12:09 pm Bengaluru Correspondent ಕ್ರೈಂ
ಬೆಂಗಳೂರು, ಎ.20: ಜುವೆಲ್ಲರಿ ಮೇಲ್ಗಡೆಯ ಮಹಡಿಯಲ್ಲಿ ಬಾಡಿಗೆ ಪಡೆದಿದ್ದ ತಂಡವೊಂದು ಜುವೆಲ್ಲರಿಗೆ ಕನ್ನ ಹಾಕಿದ್ದಲ್ಲದೆ, 5 ಕೇಜಿ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು 15 ಜನರ ವಿಶೇಷ ತಂಡವನ್ನು ರಚಿಸಿದ್ದಾರೆ.
ಜೆಪಿ ನಗರ ಠಾಣೆ ವ್ಯಾಪ್ತಿಯ ಪ್ರಿಯದರ್ಶಿನಿ ಜುವೆಲ್ಲರ್ಸ್ ನಲ್ಲಿ ಕಳವು ನಡೆದಿದ್ದು, ಆರೋಪಿಗಳು ವ್ಯವಸ್ಥಿತವಾಗಿ ಕಳ್ಳತನ ನಡೆಸಿದ್ದಾರೆ. ಒಂದು ತಿಂಗಳ ಹಿಂದೆ ದೆಹಲಿಯ ನಕಲಿ ವಿಳಾಸವನ್ನು ನೀಡಿ, ಮೂವರು ವ್ಯಕ್ತಿಗಳು ಜುವೆಲ್ಲರಿ ಕಟ್ಟಡದ ಮೂರನೇ ಮಹಡಿಯಲ್ಲಿ ಬಾಡಿಗೆ ಕೋಣೆ ಪಡೆದಿದ್ದರು. ಕೆಳಗಿನ ಎರಡು ಮಹಡಿಯಲ್ಲಿ ಜುವೆಲ್ಲರಿ ಇದ್ದು, ಮೇಲಿನ ಮೂರನೇ ಮಹಡಿ ಖಾಲಿ ಇತ್ತು. ಅಲ್ಲಿ ಬಾಡಿಗೆ ಪಡೆದು ಒಂದು ತಿಂಗಳ ಕಾಲ ಜುವೆಲ್ಲರಿ ದರೋಡೆಗೆ ಆರೋಪಿಗಳು ಸ್ಕೆಚ್ ಹಾಕಿದ್ದಾರೆ.

ಜುವೆಲ್ಲರಿಯ ಇಂಚಿಂಚು ಮಾಹಿತಿ ಸಂಗ್ರಹಿಸಿದ ಬಳಿಕ ಮೊನ್ನೆ ರಜಾದಿನವಾದ ಭಾನುವಾರ ಕಳವು ಕೃತ್ಯ ನಡೆಸಿದ್ದಾರೆ. ಮೂರನೇ ಮಹಡಿಯಿಂದ ಕೆಳಗಿನ ಭಾಗಕ್ಕೆ ಕಾಂಕ್ರೀಟನ್ನು ಕೊರೆದು ಸುರಂಗ ತೋಡಿದ್ದು ಅಲ್ಲಿಂದ ಜುವೆಲ್ಲರಿ ಒಳಕ್ಕಿಳಿದು ಚಿನ್ನಾಭರಣ ಕಳವು ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಮಾಲೀಕರು ಬಂದು ಜುವೆಲ್ಲರಿ ಓಪನ್ ಮಾಡಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಟ್ಟು 2.5 ಕೋಟಿ ಮೌಲ್ಯದ ಚಿನ್ನಾಭರಣ ಕಳವಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೊಠಡಿ ಬಾಡಿಗೆ ಪಡೆಯುವ ವೇಳೆ ವಿಳಾಸದ ಗುರುತಿಗಾಗಿ ಆಧಾರ್ ಕಾರ್ಡ್ ನೀಡಿದ್ದು, ಅದು ನಕಲಿಯೆಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಸಂಜೆ ವರೆಗೂ ವ್ಯಾಪಾರ ಮಾಡಿದ್ದ ಮಾಲೀಕರು ರಾತ್ರಿ ವೇಳೆಗೆ ಬಂದ್ ಮಾಡಿ ಹೋಗಿದ್ದರು. ಅದೇ ದಿನ ರಾತ್ರಿ 2 ಗಂಟೆಯ ವೇಳೆಗೆ ಜುವೆಲ್ಲರಿಗೆ ಕನ್ನ ಕೊರೆಯಲಾಗಿದೆ. ಗ್ಯಾಸ್ ಕಟರ್ ಬಳಸಿ ಕನ್ನ ಹಾಕಿರುವುದು ಕಂಡುಬಂದಿದ್ದು, ಒಳಕ್ಕಿಳಿದು ಕಪಾಟು ಒಡೆದು ಚಿನ್ನ ದೋಚಿದ್ದಾರೆ.
Bangalore Robbers break Priyadarshini Jewellers at JP Nagar, escape with five kilos of gold. A 15 member police team has been formed to nab the robbers. JP Nagar police are now investigating the case.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm