ಬ್ರೇಕಿಂಗ್ ನ್ಯೂಸ್
24-04-22 01:28 pm HK News Desk ಕ್ರೈಂ
ಬೆಂಗಳೂರು, ಎ.24: ಇತ್ತೀಚೆಗೆ ಬೆಂಗಳೂರಿನ ಹತ್ತಕ್ಕೂ ಶಾಲೆಗಳಿಗೆ ಬಾಂಬ್ ಇದೆಯೆಂದು ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ತನಿಖೆ ಚುರುಕುಗೊಂಡಿದ್ದು ಕೇಂದ್ರ ಗುಪ್ತಚರ ದಳವೂ ತನಿಖೆ ಕೈಗೆತ್ತಿಕೊಂಡಿದೆ. ತನಿಖೆಯಲ್ಲಿ ಇ-ಮೇಲ್ ಬೆದರಿಕೆ ಸಂದೇಶ ಪಾಕಿಸ್ಥಾನ ಅಥವಾ ಸಿರಿಯಾದಿಂದ ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಇ-ಮೇಲ್ ಸಂದೇಶದಲ್ಲಿ ಬಳಸಿದ ಭಾಷೆ ಮತ್ತು ಶಬ್ದಗಳು ಒಂದೇ ರೀತಿಯವಾಗಿದ್ದು, ಯಾರೋ ಒಂದೇ ತಂಡದ ಕೃತ್ಯ ಎನ್ನುವ ಶಂಕೆ ಅಧಿಕಾರಿಗಳದ್ದು, ಹೀಗಾಗಿ ಇ-ಮೇಲ್ ಸಂದೇಶ ಎಲ್ಲಿಂದ ಬಂದಿತ್ತು ಎನ್ನುವ ಬಗ್ಗೆ ಅಧಿಕಾರಿಗಳು ಸರ್ವರ್ ಆಧರಿಸಿ ತನಿಖೆ ಕೈಗೊಂಡಿದ್ದಾರೆ. ರಾಜ್ಯ ಗುಪ್ತಚರ ದಳ, ಆಂತರಿಕ ಭದ್ರತಾ ದಳ ಮತ್ತು ಕೇಂದ್ರೀಯ ಗುಪ್ತಚರ ದಳ ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ.
ವಿದೇಶದಿಂದ ಇ-ಮೇಲ್ ಬಂದಿರುವ ಬಗ್ಗೆ ಪ್ರಾಥಮಿಕ ಮಾಹಿತಿಗಳಿವೆ. ಹೀಗಾಗಿ ಪಾಕಿಸ್ಥಾನ ಅಥವಾ ಗಲ್ಫ್ ರಾಷ್ಟ್ರಗಳಿಂದ ಮೇಲ್ ಬಂದಿರುವ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಒಂದೇ ಸರ್ವರ್ ಆಗಿರಬಹುದೇ, ಬೇರೆ ಬೇರೆ ಸರ್ವರ್ ಗಳನ್ನು ಬಳಸಿ ಇಮೇಲ್ ಮಾಡಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಬೆಂಗಳೂರು ಪೊಲೀಸರು ಸೈಬರ್ ತಂತ್ರಜ್ಞರ ಮೊರೆ ಹೋಗಿದ್ದಾರೆ. ಇದೇ ವೇಳೆ, ಗೂಗಲ್ ಸಂಸ್ಥೆಯಿಂದಲೂ ತನಿಖೆಗೆ ಮಾಹಿತಿ ಪಡೆಯುವುದಕ್ಕೂ ಮುಂದಾಗಿದ್ದಾರೆ.
ಇದೇ ವೇಳೆ, ಹಳೆಯ ಬಾಂಬ್ ಬೆದರಿಕೆ ಪ್ರಕರಣಗಳ ಬಗ್ಗೆಯೂ ಪೊಲೀಸರು ಜಾಲಾಡಿದ್ದಾರೆ. ಹಳೆ ಆರೋಪಿಗಳನ್ನು ವಿಚಾರಣೆ ನಡೆಸಿ, ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಿದ್ದಾರೆ. ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಹಲವು ಕಡೆ ಬಾಂಬ್ ಇರಿಸಿದ್ದಾಗಿ ಹುಸಿ ಕರೆ ಮಾಡಿದ್ದ ಪ್ರಕರಣಗಳ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ. ಅವರಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಇ-ಮೇಲ್ ಸಂದೇಶ ಎಲ್ಲಿಂದ ಬಂದಿತ್ತು ಅನ್ನುವುದನ್ನು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ.
13 schools in Bengaluru get hoax bomb threat, Pak work behind emails says Intellegence. As many as 13 private schools in and around the city received emails threatening that explosives have been planted on the school premises, on Friday. The police, who concluded that it is a mischief, have intensified the investigation to trace the people behind it. Reacting to the incident, Chief Minister Basavaraj Bommai said it is a conspiracy to disturb peace and tarnish the image of the state.
05-05-24 04:17 pm
Bangalore Correspondent
Annamalai, Prajwal Revanna: ಎಸ್ಐಟಿ ಮೊದಲು ಈ ವಿ...
04-05-24 10:13 pm
Prajwal Revanna Sex Case: ಬಂಧನ ಭೀತಿಯಲ್ಲಿ ದೇಶದ...
04-05-24 09:43 pm
MLA HD Revanna arrested: ಲೈಂಗಿಕ ಕಿರುಕುಳ ಪ್ರಕರ...
04-05-24 07:56 pm
LR Sivaram Gowda, Prajwal Revanna: ರೇವಣ್ಣ ಒಳ್...
04-05-24 07:10 pm
05-05-24 11:51 am
HK News Desk
Priyanka Gandhi, Narendra modi, Rahul Gandi:...
04-05-24 03:41 pm
Puri Lok Sabha: ಸೂರತ್, ಇಂದೋರ್ ಬಳಿಕ ಒಡಿಶಾದ ಪುರ...
04-05-24 03:27 pm
ಒಂದೇ ರೀತಿಯ ಹೆಸರಿನ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ...
04-05-24 01:50 pm
C V Ananda Bose, West Bengal governor: ಪಶ್ಚಿಮ...
03-05-24 10:58 pm
05-05-24 01:26 pm
Mangalore Correspondent
Highest temperature in Mangalore: ಕರಾವಳಿಯ ಉಪ್...
04-05-24 09:50 pm
Puttur news, Ramchandra officer: ವರ್ಗಾವಣೆ ಆದೇ...
04-05-24 08:45 pm
Mangalore airport, Bomb threat mail: ಮಂಗಳೂರು...
04-05-24 12:41 pm
Mangalore, Subramanya; ಸುಬ್ರಹ್ಮಣ್ಯ ; ಮನೆಯಂಗಳದ...
04-05-24 11:20 am
05-05-24 02:44 pm
HK News Desk
K P K Jeyakumar Dhanasingh: ತಿರುನಲ್ವೇಲಿ ಜಿಲ್ಲ...
04-05-24 11:03 pm
Hubballi Crime Rape Minor, Arrest; ಹುಬ್ಬಳ್ಳಿ...
04-05-24 12:23 pm
Mangalore Fake CBI Call, Crime, Online fraud:...
03-05-24 09:57 pm
House fire, Lover: ಮೂವರು ಮಕ್ಕಳ ತಾಯಿಯನ್ನ ಮದುವ...
03-05-24 03:21 pm