ಜಾಗದ ತಕರಾರು ; ಪರಿಶಿಷ್ಟ ಜನಾಂಗದ ಮಹಿಳೆಗೆ ಅದೇ ಸಮುದಾಯದ ತಂಡದಿಂದ ಹಲ್ಲೆ, ಅರೆ ಬೆತ್ತಲೆಗೊಳಿಸಿ ಹಲ್ಲೆಗೈದ ವಿಡಿಯೋ ವೈರಲ್ ! 

25-04-22 09:53 am       HK Desk news   ಕ್ರೈಂ

ಪರಿಶಿಷ್ಟ ಜನಾಂಗದ ಮಹಿಳೆಯನ್ನು  ಅದೇ ಸಮುದಾಯದ ತಂಡವೊಂದು ಅರೆ ಬೆತ್ತಲೆಗೊಳಿಸಿ ಹಲ್ಲೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದ್ದು ಘಟನೆ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಮೂವರು ಮಹಿಳೆಯರು ಸೇರಿ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.‌

ಬೆಳ್ತಂಗಡಿ, ಎ.25 ಪರಿಶಿಷ್ಟ ಜನಾಂಗದ ಮಹಿಳೆಯನ್ನು  ಅದೇ ಸಮುದಾಯದ ತಂಡವೊಂದು ಅರೆ ಬೆತ್ತಲೆಗೊಳಿಸಿ ಹಲ್ಲೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದ್ದು ಘಟನೆ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಮೂವರು ಮಹಿಳೆಯರು ಸೇರಿ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.‌

ಜಾಗದ ತಕರಾರಿನ ವಿಚಾರದಲ್ಲಿ ಹಲ್ಲೆ ಕೃತ್ಯ ನಡೆದಿದ್ದು ಉಜಿರೆ ಗುರಿಪಳ್ಳ ನಿವಾಸಿಗಳಾದ ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಸುಗುಣ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಎಂಬವರ ವಿರುದ್ಧ ಐಪಿಸಿ 143, 147, 148, 323, 324, 504, 354, 354(B), 506, 149 ಅಡಿ   ಎಫ್ ಐಆರ್ ದಾಖಲಾಗಿದೆ. 

ಬಿಜೆಪಿ ತಾಲೂಕು ಘಟಕದ ಎಸ್.ಟಿ. ಮೋರ್ಚಾ ಅಧ್ಯಕ್ಷ ಸೇರಿ ಹಲವರು ಸೇರಿ ಕೃತ್ಯ ನಡೆಸಿದ್ದಾಗಿ ಆರೋಪಿಸಲಾಗಿದೆ. ಅರೆಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ಕೃತ್ಯದ ವಿಡಿಯೋ ಮಾಡಿದ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ. 

ಹಲ್ಲೆಗೊಳಗಾದ ಮಹಿಳೆಯ ಕುಟುಂಬಸ್ಥರು ಸರಕಾರಿ ಜಾಗದಲ್ಲಿ ಮನೆ ನಿರ್ಮಿಸುವುದಕ್ಕಾಗಿ ಸಲ್ಲಿಸಿದ್ದ 94ಸಿ ಅರ್ಜಿಯ ವಿಚಾರದಲ್ಲಿ ಎ.19 ರಂದು ಪಂಚಾಯತ್ ಪಿಡಿಓ ಮತ್ತು ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಬಂದಿದ್ದರು. 

ಈ ಸಂದರ್ಭ ಜಾಗದ ವಿಚಾರದಲ್ಲಿ ಇನ್ನೊಂದು ತಂಡ ತಕರಾರು ತೆಗೆದಿದ್ದು ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಪಡಿಸಿತ್ತು. ಇದರಿಂದ ಅಳತೆಗೆ ಬಂದಿದ್ದ ಅಧಿಕಾರಿಗಳು ತಮ್ಮಿಂದ ಈ ಕಾರ್ಯ ಸಾಧ್ಯವಿಲ್ಲ ಎಂದು ಬಿಟ್ಟು ಹೋಗಿದ್ದರು. ಅಧಿಕಾರಿ ಸಿಬಂದಿ ತೆರಳಿದ ಬಳಿಕ ಸುರೇಖಾ ಎಂಬ ಮಹಿಳೆ ಧರಿಸಿದ್ದ ನೈಟಿಯನ್ನು ಹಿಡಿದೆಳೆದು ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ.‌ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

9 booked for stripping and assaulting tribal woman in Dakshina Kannada.