ಬ್ರೇಕಿಂಗ್ ನ್ಯೂಸ್
11-05-22 10:24 pm Udupi Correspondent ಕ್ರೈಂ
ಉಡುಪಿ, ಮೇ 11 : ಹಿರಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ನಡೆದ ತಾಯಿ, ಮಗಳ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಶಿವಮೊಗ್ಗ ಮೂಲದ ಯುವಕನನ್ನು ಬಂಧಿಸಿದ್ದಾರೆ.
ಆತ್ರಾಡಿ ಗ್ರಾಮದ ಮದಗ ಮುಳ್ಳುಗುಜ್ಜೆ ಎಂಬಲ್ಲಿ ಚೆಲುವಿ (28) ಮತ್ತು ಆಕೆಯ ಹತ್ತು ವರ್ಷದ ಮಗಳನ್ನು ಮೇ 8ರಂದು ರಾತ್ರಿ ಯಾರೋ ಅಪರಿಚಿತರು ಕತ್ತು ಹಿಸುಕಿ ಕೊಲೆಗೈದಿದ್ದರು. ಈ ಬಗ್ಗೆ ಮೃತಳ ತಂಗಿ ದೇವಿ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಖಚಿತ ಸುಳಿವು ಇಲ್ಲದ ಪ್ರಕರಣದಲ್ಲಿ ಕೆಲವು ಮಾಹಿತಿಗಳನ್ನು ಆಧರಿಸಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ತನಿಖೆ ಕೈಗೊಂಡಿದ್ದರು. ಆಕೆಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಹರೀಶ (29) ಎಂಬಾತ ಬಂಧಿತ.
ಹರೀಶ ಮೃತ ಚೆಲುವಿಯ ದೂರದ ಸಂಬಂಧಿಯಾಗಿದ್ದು ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ. ಈ ನಡುವೆ, ಚೆಲುವಿ ಗಂಡನಿಂದ ದೂರವಾಗಿ ಮಕ್ಕಳ ಜೊತೆ ವಾಸವಿದ್ದುದನ್ನು ತಿಳಿದು ಆಕೆಯ ಮನೆಗೆ ಬರಲಾರಂಭಿಸಿದ್ದ. ಅಲ್ಲದೆ, ಆಕೆಯನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದ. ಚೆಲುವಿ ಬೇರೆ ಗಂಡಸರ ಜೊತೆ ಫೋನ್ ನಲ್ಲಿ ಸಂಪರ್ಕ ಹೊಂದಿದ್ದಾಳೆಂದು ಚೆಲುವಿ ಗಲಾಟೆ ಮಾಡುತ್ತಿದ್ದ. ಇದೇ ಸಂಶಯದಿಂದ ಮೇ 8 ರಂದು ಆಕೆಯ ಮನೆಗೆ ಬಂದಿದ್ದ ಹರೀಶ ಗಲಾಟೆ ಮಾಡಿದ್ದ. ರಾತ್ರಿ ಆಕೆಯ ಮನೆಗೆ ಬಂದು ಊಟ ಮಾಡಿ ಮಲಗಿದ್ದ ಆರೋಪಿ ನಂತರ ಚೆಲುವಿ ಮಲಗಿದ್ದಲ್ಲಿಗೆ ಹೋಗಿ ಶಾಲಿನಿಂದ ಕುತ್ತಿಗೆ ಬಿಗಿದು ಆಕೆಯನ್ನು ಕೊಲೆ ಮಾಡಿದ್ದ. ಈ ವಿಚಾರವನ್ನು ಮಗಳು ಪೊಲೀಸರಿಗೆ ತಿಳಿಸಬಹುದು ಎಂಬ ಭಯದಲ್ಲಿ ಆನಂತರ ಹತ್ತು ವರ್ಷದ ಬಾಲಕಿಯನ್ನೂ ನಿದ್ದೆಯಲ್ಲಿದ್ದಾಗಲೇ ಕತ್ತು ಹಿಸುಕಿ ಕೊಲೆಗೈದಿದ್ದ.
ಕೃತ್ಯದ ಬಳಿಕ ಚೆಲುವಿಯ ಕುತ್ತಿಗೆಯಲ್ಲಿದ್ದ ಸುಮಾರು 50 ಸಾವಿರ ಮೌಲ್ಯದ ಚಿನ್ನದ ಸರ ಹಾಗೂ ಆಕೆ ಉಪಯೋಗಿಸುತ್ತಿದ್ದ ಒಪ್ಪೋ ಮೊಬೈಲ್ ಫೋನನ್ನು ಕಿತ್ತುಕೊಂಡು ರಾತ್ರಿಯೇ ಪರಾರಿಯಾಗಿದ್ದ. ತನಿಖೆ ನಡೆಸಿದ ಪೊಲೀಸರು ಮುನ್ನಾ ದಿನ ಚೆಲುವಿಯ ಮನೆಗೆ ಬಂದಿದ್ದ ಆಕೆಯ ತಾಯಿ ಬಳಿ ಮಾಹಿತಿ ಕೇಳಿದ್ದಾರೆ. ಅಲ್ಲದೆ, ಮೃತ ಚೆಲುವಿಯ ತಂಗಿಯಿಂದಲೂ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ, ಭದ್ರಾವತಿ ಮೂಲದ ವ್ಯಕ್ತಿಯ ಮಾಹಿತಿ ಸಿಕ್ಕಿದ್ದರಿಂದ ಆತನನ್ನು ವಶಕ್ಕೆ ಪಡೆದಿದ್ದರು. ಹಿರಿಯಡ್ಕ ಠಾಣೆ ಪಿಎಸ್ಐ ಅನಿಲ್ ಮಾದರ, ಕೋಟ ಠಾಣೆ ಪಿಎಸ್ಐ ಮಧು ಬಿ.ಇ, ಪ್ರೊಬೇಶನರಿ ಪಿಎಸ್ಐ ಮಂಜುನಾಥ ಮರಬದ, ರವಿ ಬಿ. ಕಾರಗಿ, ಎಎಸ್ಐ ಕೃಷ್ಣಪ್ಪ, ಪ್ರದೀಪ ನಾಯಕ, ವಾಸುದೇವ ಪಿ., ರವೀಂದ್ರ ಎಚ್., ಶೇಖರ ಸೇರಿಗಾರ, ಜಯಂತ, ಗಂಗಪ್ಪ ಮತ್ತಿತರರಿದ್ದ ತಂಡ ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣವನ್ನು ಭೇದಿಸಿದೆ.
The accused of murdering the daughter of Attradi-Madaku mother of the Heriyadka police station has been arrested within 48 hours. The arrested accused is Harisha, a resident of Bommanakatte in Bhadravati in Shimoga district. The man, identified as R Ganesh (29), has been identified.Cheluvi (28) and her 10-year-old daughter were found murdered in the night of 08/05/2022 by the deceased's sister Devi in a complaint lodged at Hiriyadka police station.
28-03-24 01:44 pm
Bangalore Correspondent
Pralhad Joshi , Dharwad, Veerashaiva Lingayat...
27-03-24 11:07 pm
ಮಾಫಿ ಸಾಕ್ಷಿ ಮುಗಿಸಲು ಚೈತ್ರಾ ಗ್ಯಾಂಗ್ ಸಂಚು ; ಆರೆ...
27-03-24 10:36 pm
Govind Karjol ticket, bjp; ಕೇಂದ್ರ ಸಚಿವ ನಾರಾಯಣ...
27-03-24 08:56 pm
Kolar congress fight: ಕೋಲಾರ ಕಾಂಗ್ರೆಸಿನಲ್ಲಿ ಭಿ...
27-03-24 05:03 pm
28-03-24 01:15 pm
HK News Desk
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
IAS Ananya Singh, UPSC Exam: ಮೊದಲ ಪ್ರಯತ್ನದಲ್ಲ...
27-03-24 09:43 pm
America Ship, Baltimore bridge video; ಅಮೇರಿಕಾ...
27-03-24 04:56 pm
27-03-24 10:53 pm
Mangalore Correspondent
Bjp MLA Harish poonja, Shivaraj Tangadagi: ಹಿ...
27-03-24 09:11 pm
ಮತ್ತೆ ನಾಲ್ವರ ಮೇಲೆ ಗೂಂಡಾ ಕಾಯ್ದೆ ; ಮತ್ತೆ 13 ಮಂದ...
26-03-24 10:17 pm
Tumkur car burnt, three killed, Mangalore: ಬೆ...
26-03-24 09:57 pm
Brijesh Chowta Mangalore; ದೇಶದಲ್ಲಿ ಭಯಮುಕ್ತ ವಾ...
26-03-24 08:45 pm
28-03-24 02:18 pm
Udupi Correspondent
Mangalore Police, CCB, Drugs; ಆಂಧ್ರಪ್ರದೇಶದಿಂದ...
27-03-24 11:12 pm
Bank vehicle robbery, ATM in Kasaragod: ಕಾಸರಗ...
27-03-24 06:20 pm
CA arrested by Bengalore police, Rs 168 crore...
27-03-24 12:48 pm
Thane Kidnap, Murder; ಮನೆ ನಿರ್ಮಾಣಕ್ಕೆ 23 ಲಕ್ಷ...
26-03-24 11:12 am