ಬ್ರೇಕಿಂಗ್ ನ್ಯೂಸ್
10-07-21 04:39 pm GIZBOT Mantesh ಡಿಜಿಟಲ್ ಟೆಕ್
ಆಧಾರ್ ಕಾರ್ಡ್ ದೇಶದ ಪ್ರತಿಯೊಬ್ಬರ ಗುರುತಿನ ಕಾರ್ಡ್ ಆಗಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ತಮ್ಮ ಆಧಾರ್ ಕಾರ್ಡ್ಗಳನ್ನ ತಪ್ಪದೇ ಮಾಡಿಸಿಕೊಳ್ಳುತ್ತಾರೆ. ಆಧಾರ ಕಾರ್ಡ್ ಮಾಡಿಸಿದ ನಂತರ ಹಲವು ಕಾರಣಗಳಿಂದಾಗಿ ತಿದ್ದುಪಡಿ ಮಾಡುವ ಪ್ರಸಂಗ ಬರುಬಹುದು. ಹೆಸರು ತಪ್ಪಾಗಿರಬಹುದು, ಮೊಬೈಲ್ ನಂಬರ್, ಜನ್ಮ ದಿನಾಂಕ, ವಿಳಾಸ ಹೀಗೆ ಏನಾದರು ಒಂದು ಮಾಹಿತಿ ತಪ್ಪಾಗಿ ನಮೂದಾಗಿರಬಹುದು. ಆಗ ಆಧಾರ ಕಾರ್ಡ್ ತಿದ್ದುಪಡಿ ಮಾಡಬೇಕಿರುತ್ತದೆ. ಅದಕ್ಕಾಗಿ ಆನ್ಲೈನ್ನಲ್ಲಿಯೂ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಬಹುದಾಗಿದೆ.
ಹೌದು, ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ದಾಖಲಾತಿ ಹೊಂದಿರುವವರಿಗೆ ತಮ್ಮ ಗುರುತಿನ ಚೀಟಿಯಲ್ಲಿರುವ ಮಾಹಿತಿಯನ್ನು ಎಡಿಟ್ ಮಾಡುವುದಕ್ಕೆ ಅವಕಾಶ ನೀಡಿದೆ. ಆಧಾರ್ ಕಾರ್ಡ್ನಲ್ಲಿ ಫೋನ್ ಸಂಖ್ಯೆಯನ್ನು ಸೇರಿಸಲು ಅಥವಾ ನವೀಕರಿಸಲು ಆಧಾರ್ ಕೇಂದ್ರಕ್ಕೆ ಭೇಟ ನೀಡಬೇಕಿತ್ತು. ಈಗ ಆಧಾರ್ ಬಳಕೆದಾರರು ಸೇವಾ ಅಪ್ಡೇಟ್ ಪೋರ್ಟಲ್ (ಎಸ್ಎಸ್ಯುಪಿ) ಬಳಸಿ ಫೋನ್ ಸಂಖ್ಯೆಯನ್ನು ನವೀಕರಿಸಬಹುದು / ಲಿಂಕ್ ಮಾಡಬಹುದು. ಆನ್ಲೈನ್ ಮೂಲಕ ಆಧಾರ್ ಕಾರ್ಡ್ನಲ್ಲಿ ಫೋನ್ ಸಂಖ್ಯೆಯನ್ನು ಹೇಗೆ ಅಪ್ಡೇಟ್ ಮಾಡುವುದು / ಸೇರಿಸುವುದು ಎಂಬುದರ ಕುರಿತು ಮುಂದೆ ತಿಳಿಯೋಣ ಬನ್ನಿರಿ.

ಆನ್ಲೈನ್ನಲ್ಲಿ ಆಧಾರ್ ಕಾರ್ಡ್ನಲ್ಲಿ ಫೋನ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಹೀಗೆ ಮಾಡಿ:
ಹಂತ 1: ಹತ್ತು-ಅಂಕಿಯ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು, ನೀವು ಮೊದಲು UIDAI ವೆಬ್ ಪೋರ್ಟಲ್ಗೆ ask.uidai.gov.in ಗೆ ಭೇಟಿ ನೀಡಬೇಕಾಗುತ್ತದೆ.
ಹಂತ 2: ನೀವು ನವೀಕರಿಸಲು ಬಯಸುವ ಫೋನ್ ಸಂಖ್ಯೆಯನ್ನು ಸೇರಿಸಿ.
ಹಂತ 3: ಮುಂದಿನ ಪೆಟ್ಟಿಗೆಗಳಲ್ಲಿ ಕ್ಯಾಪ್ಚಾದಲ್ಲಿ ಟೈಪ್ ಮಾಡಿ

ಹಂತ 4: ನಂತರ ನೀವು ‘ಕಳುಹಿಸು ಒಟಿಪಿ' ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಫೋನ್ ಸಂಖ್ಯೆಗೆ ಕಳುಹಿಸಿದ ಒಟಿಪಿಯನ್ನು ನಮೂದಿಸಬೇಕಾಗುತ್ತದೆ.
ಹಂತ 5: ನಂತರ ‘ಸಬ್ಮಿಟ್ ಒಟಿಪಿ & ಪ್ರೊಸೀಡ್' ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 6: ನಂತರ ನೀವು ‘ಆನ್ಲೈನ್ ಆಧಾರ್ ಸೇವೆಗಳು' ಎಂದು ಸೂಚಿಸುವ ಡ್ರಾಪ್ಡೌನ್ ಮೆನುವನ್ನು ನೋಡಬಹುದು.

ಹಂತ 7: ಹೆಸರು, ವಿಳಾಸ, ಲಿಂಗ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಆಯ್ಕೆಗಳನ್ನು ಪಟ್ಟಿ ತೋರಿಸುತ್ತದೆ. ಆಧಾರ್ನಲ್ಲಿ ಫೋನ್ ಸಂಖ್ಯೆಯನ್ನು ನವೀಕರಿಸಲು ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿ.
ಹಂತ 8: ನಂತರ ನೀವು ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ‘ನೀವು ಏನು ನವೀಕರಿಸಲು ಬಯಸುತ್ತೀರಿ' ಆಯ್ಕೆಯನ್ನು ಆರಿಸಲು ಖಚಿತಪಡಿಸಿಕೊಳ್ಳಿ.
ಹಂತ 9: ಮುಂದೆ ಹೊಸ ಪುಟವು ತೋರಿಸುತ್ತದೆ ಮತ್ತು ನೀವು ಕ್ಯಾಪ್ಚಾವನ್ನು ನಮೂದಿಸಬೇಕಾಗುತ್ತದೆ.
(Kannada Copy of Gizbot Kannada)
18-02-26 09:02 pm
HK Desk
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
ಊಟಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ; ಬೈಕ್...
17-02-26 10:33 pm
Mohan Das Pai: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾ...
17-02-26 09:12 pm
ಫೇಲಾದವರನ್ನು ಪಾಸು ಮಾಡುವುದೇ ತಪ್ಪು ; ಕೇರಳದಲ್ಲಿ ಶ...
17-02-26 08:56 pm
17-02-26 08:50 pm
HK Desk
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
18-02-26 11:19 am
Mangaluru Staffer
Parameshwara in Mangalore: ಶಾಸಕರು ವಿದೇಶಕ್ಕೆ ತ...
17-02-26 12:42 pm
Mangalore Ullal Accident: ಉಳ್ಳಾಲ ; ಅತಿ ವೇಗದಿಂ...
16-02-26 11:13 pm
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
18-02-26 09:16 pm
Mangaluru Staffer
Mangalore Shivabagh Suicide: ಕೈ ಕೊಯ್ದುಕೊಂಡು ರ...
18-02-26 07:42 pm
Hassan Murder: ಆಸ್ತಿ ವಿಚಾರಕ್ಕೆ ತಕರಾರು, ಕೋರ್ಟ್...
18-02-26 07:10 pm
ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆ, ಹಡಗುಗಳ ರಹಸ್ಯ ಮಾ...
18-02-26 01:52 pm
ಬೆಚ್ಚಿಬೀಳಿಸಿದ ಎಂಬಿಎ ವಿದ್ಯಾರ್ಥಿನಿ ಹತ್ಯೆ ಪ್ರಕರಣ...
17-02-26 03:03 pm