ಬ್ರೇಕಿಂಗ್ ನ್ಯೂಸ್
16-07-21 12:55 pm GIZBOT Mutthuraju H M ಡಿಜಿಟಲ್ ಟೆಕ್
ಜನಪ್ರಿಯ ಮೆಸೇಜಿಂಗ್ ವಾಟ್ಸಾಪ್ ಭಾರತದ 2021 ರ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಅನುಸಾರವಾಗಿ ತನ್ನ ಮೊದಲ ಮಧ್ಯವರ್ತಿ ಮಾರ್ಗಸೂಚಿಗಳ ವರದಿಯನ್ನು ಪ್ರಕಟಿಸಿದೆ. ಮೇ 15 ರಿಂದ ಜೂನ್ 15 ರ ನಡುವೆ ಹೊಸ ಐಟಿ ನಿಯಮದ ಅನ್ವಯ 29 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಅನ್ನೊ ಮಾಹಿತಿಯನ್ನು ವಾಟ್ಸಾಪ್ ಬಹಿರಂಗಪಡಿಸಿದೆ. ಅಲ್ಲದೆ ವಾಟ್ಸಾಪ್ ಖಾತೆಗಳ ನಿಷೇಧದ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದೆ.

ಹೌದು, ಭಾರತದಲ್ಲಿ ಜಾರಿಯಾದ ಹೊಸ ಮಾಹಿತಿ ತಂತ್ರಜ್ಞಾನದ ನಿಯಮ 2021ರ ಅನ್ವಯ ಮಾರ್ಗಸೂಚಿ ವರದಿಯನ್ನು ಪ್ರಕಟಿಸಿದೆ. ಇದರಲ್ಲಿ 29 ಲಕ್ಷ ವಾಟ್ಸಾಪ್ ಖಾತೆಗಳನ್ನು ಬ್ಲಾಕ್ ಮಾಡಿರುವುದಾಗಿ ಹೇಳಿದೆ. ಅಂತಹ ಖಾತೆ ನಿಷೇಧದ ಶೇಕಡಾ 95 ಕ್ಕಿಂತಲೂ ಹೆಚ್ಚು ಸ್ವಯಂಚಾಲಿತ ಅಥವಾ ಬೃಹತ್ ಸಂದೇಶಗಳ ಅನಧಿಕೃತ ಬಳಕೆಯಿಂದಾಗಿ ಇದನ್ನು ಸ್ಪ್ಯಾಮ್ ಎಂದು ವರ್ಗೀಕರಿಸಬಹುದು. ಜಾಗತಿಕ ಮಾಸಿಕ ಸರಾಸರಿ ಸುಮಾರು 8 ಮಿಲಿಯನ್ ಖಾತೆಗಳನ್ನು ಪ್ರತಿ ತಿಂಗಳು ನಿಷೇಧಿಸಲಾಗಿದೆ ಎಎಂದಿದೆ. ಹಾಗಾದ್ರೆ ವಾಟ್ಸಾಪ್ ಹೊಸ ಐಟಿ ನಿಯಮದ ಅನ್ವಯ 29 ಲಕ್ಷ ಖಾತೆಗಳನ್ನು ಬ್ಲಾಕ್ ಮಾಡಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್ 2021 ರ ಮೇ 15 ರಿಂದ ಜೂನ್ 15 ರವರೆಗೆ ವಿವಿಧ ವಲಯಗಳಿಂದ ಪಡೆದ ಕುಂದುಕೊರತೆಗಳ ವಿಘಟನೆಯನ್ನು ಹಂಚಿಕೊಂಡಿದೆ. ಮೊದಲ ಮಧ್ಯವರ್ತಿ ಮಾರ್ಗಸೂಚಿಗಳ ವರದಿಯ ಪ್ರಕಾರ, ಮೆಸೇಜಿಂಗ್ ಅಪ್ಲಿಕೇಶನ್ ಖಾತೆ ಬೆಂಬಲಕ್ಕಾಗಿ 70 ವಿನಂತಿಗಳನ್ನು ಮತ್ತು 204 ನಿಷೇಧ ಮೇಲ್ಮನವಿಗಳನ್ನು ಸ್ವೀಕರಿಸಿದೆ. ಇದರಲ್ಲಿ ಅಪ್ಲಿಕೇಶನ್ 63 ಖಾತೆಗಳನ್ನು ನಿಷೇಧಿಸಿದೆ. ಕುಂದುಕೊರತೆ ಎಂದು ಪರಿಗಣಿಸಿದ ಪ್ರಕರಣಗಳಿಗೆ ವಾಟ್ಸಾಪ್ ಸ್ಪಂದಿಸಿದೆ. ಒಮ್ಮೆ ಖಾತೆಯನ್ನು ನಿಷೇಧಿಸಿದರೆ ಅಥವಾ ದೂರಿನ ಪರಿಣಾಮವಾಗಿ ಹಿಂದೆ ನಿಷೇಧಿಸಲಾದ ಖಾತೆಯನ್ನು ಮರುಸ್ಥಾಪಿಸಿದರೆ ಖಾತೆಯನ್ನು ಕಾರ್ಯಗತಗೊಳಿಸಲಾಗುತ್ತದ ಎಂದು ವಾಟ್ಸಾಪ್ ತನ್ನ ವರದಿಯಲ್ಲಿ ಹೇಳಿದೆ.

ಇದಲ್ಲದೆ, ಅದು ತನ್ನ ಪ್ಲಾಟ್ಫಾರ್ಮ್ನಲ್ಲಿ ದುರುಪಯೋಗ ಪತ್ತೆಹಚ್ಚುವಿಕೆಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ವಿವರಿಸುತ್ತದೆ. "ಖಾತೆಯ ಜೀವನಶೈಲಿಯ ಮೂರು ಹಂತಗಳಲ್ಲಿ ನಿಂದನೆ ಪತ್ತೆಹಚ್ಚುವಿಕೆ ಕಾರ್ಯನಿರ್ವಹಿಸುತ್ತದೆ. ಅಂದರೆ ನೋಂದಣಿಯಲ್ಲಿ, ಸಂದೇಶ ಕಳುಹಿಸುವ ಸಮಯದಲ್ಲಿ ಮತ್ತು ಋಣಾತ್ಮಕ ಪ್ರತಿಕ್ರಿಯೆಗೆ ಪ್ರತಿಕ್ರಿಯೆಯಾಗಿ, ನಾವು ಬಳಕೆದಾರರ ರೂಪದಲ್ಲಿ ಸ್ವೀಕರಿಸುತ್ತೇವೆ ಎಂದು ಹೇಳಿದೆ. ಮೆಸೇಜಿಂಗ್ ಅಪ್ಲಿಕೇಶನ್ ನಿಷೇಧಿತ ಖಾತೆಗಳಲ್ಲಿ ಭಾರತೀಯ ಸಂಖ್ಯೆಗಳನ್ನು ಒಳಗೊಂಡಿದೆ ಎಂದು ಸ್ಪಷ್ಟಪಡಿಸಿದೆ.
(Kannada Copy of Gizbot Kannada)
27-12-25 02:40 pm
Bangalore Correspondent
ಚಿತ್ರದುರ್ಗ ಬಸ್ ದುರಂತ ; ಗಾಯಗೊಂಡಿದ್ದ ಸೀಬರ್ಡ್...
26-12-25 09:38 pm
ಬೈಕ್ ಗೆ ಟಿಪ್ಪರ್ ಡಿಕ್ಕಿ ; ಚರ್ಚ್ ನಲ್ಲಿ ಕ್ರಿಸ್ ಮ...
26-12-25 01:35 pm
ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನ...
25-12-25 08:00 pm
Chitradurga Seabird Bus accident: ಚಿತ್ರದುರ್ಗ...
25-12-25 06:26 pm
27-12-25 04:29 pm
HK News Desk
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
26-12-25 10:34 pm
Mangalore Correspondent
Grace Ministry Christmas 2025: ಗ್ರೇಸ್ ಮಿನಿಸ್ಟ...
26-12-25 06:37 pm
ಎಂಆರ್ ಜಿ ಗ್ರೂಪಿನಿಂದ ಆಶಾ ಪ್ರಕಾಶ್ ಶೆಟ್ಟಿ ನೆರವು...
25-12-25 10:54 pm
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
27-12-25 02:28 pm
Bangalore Correspondent
ಪ್ಯಾಲೆಸ್ ಗ್ರೌಂಡ್ನಲ್ಲಿ ಅದ್ದೂರಿ ರಿಸೆಪ್ಷನ್, ಶ್...
26-12-25 11:21 pm
ಪಡುಬಿದ್ರೆ ; ನೇಮೊತ್ಸದಲ್ಲಿ ವೃದ್ಧೆಯ ಸರ ಕಳ್ಳತನ, ಮ...
26-12-25 11:06 pm
ವರದಕ್ಷಿಣೆಗಾಗಿ ದೌರ್ಜನ್ಯ- ಕಿರುಕುಳ ; ಗಂಡನ ಮನೆಯಲ್...
26-12-25 10:44 pm
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ; ಕೋಮ...
26-12-25 03:31 pm