ಬ್ರೇಕಿಂಗ್ ನ್ಯೂಸ್
24-08-21 02:31 pm Headline Karnataka News Network ಡಿಜಿಟಲ್ ಟೆಕ್
ಜಪಾನ್ ಮೂಲದ ಟೊಯೋಟಾ ಕಂಪನಿ ಜತೆಗೂಡಿ ಮಾರುತಿ ಸುಜುಕಿ ಕಂಪನಿ ಹೈಬ್ರಿಡ್ ಕಾರನ್ನು ತಯಾರಿಸುತ್ತಿದೆ. ಇದು ಇಂಧನ ಸಹಾಯವಿಲ್ಲ ಮತ್ತು ಚಾರ್ಜ್ ಇಲ್ಲದೆಯೇ ಚಲಿಸಬಹುದಾದ ಕಾರು ಇದಾಗಿದೆ. ಹಾಗಾದರೆ ಮಾರುತಿ ಸುಜುಕಿ ಕಂಪನಿ ತಯಾರಿಸುತ್ತಿರುವ ನೂತನ ಕಾರು ಹೇಗೆ ಚಲಿಸುತ್ತೇ? ಎಂಬ ಪ್ರಶ್ನೆ ಮೂಡಿರಬಹುದು. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್- ಡಿಸೇಲ್ ವಾಹನಗಳಿವೆ. ಅಷ್ಟು ಮಾತ್ರವಲ್ಲದೆ, ಎಲೆಕ್ಟ್ರಿಕ್ ವಾಹನವನ್ನು ಬಳಸುವವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಹಲವಾರು ಕಂಪನಿ ನಾನಾ ತಂತ್ರಗಳೊಂದಿಗೆ, ಹೊಸ ವಿಶೇಷತೆಗಳನ್ನು ಒಳಗೊಂಡ ಕಾರನ್ನು ಅಭಿವೃದ್ಧಿ ಪಡಿಸುತ್ತಿದೆ. ಅದರಂತೆ ಮಾರುತಿ ಸುಜುಕಿ ಕಂಪನಿಯು ಜಪಾನ್ ಮೂಲದ ಟಯೋಟಾ ಕಂಪನಿಯೊಂದಿಗೆ ಜತೆಗೂಡಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರು ಸಿದ್ಧಪಡಿಸುತ್ತಿದೆ.

ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಏರುತ್ತಿದ್ದರು ಫಾಸ್ಟ್ ಚಾಜಿಂಗ್ ಸ್ಟೇಷನ್ಗಳಿಲ್ಲ ಎಂಬ ಕೊರಗು ಗ್ರಾಹಕರಲ್ಲಿದೆ. ಇವೆಲ್ಲಾವನ್ನು ಗಮನಿಸಿದ ಮಾರುತಿ ಸುಜುಕಿ ಕಂಪನಿ ಹೊಸ ಹೈಬ್ರಿಡ್ ಕಾರನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ ಟಾಟಾ ಮೋಟಾರ್ಸ್, ಮಹೀಮದ್ರಾ, ಹುಂಡೈ ಕಂಪನಿಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನ ವಿಚಾರದಲ್ಲಿ ಮಾರುತಿ ಸುಜುಕಿ ಹಿಂದುಳಿದಿದೆ. ಅದಕ್ಕೆ ಉತ್ತರವೆಂಬಂತೆ ಇದೀಗ ಹ್ರೈಬ್ರಿಡ್ ಎಲೆಕ್ಟ್ರಿಕ್ ಕಾರನ್ನು (ಎಚ್ಇವಿ) ನಿರ್ಮಿಸುತ್ತಿದೆ. ಈ ಕಾರಿನ ವಿಶೇಷತೆ ಎಂದರೆ ಪೆಟ್ರೋಲ್-ಡೀಸೆಲ್ ಬೇಕಿಲ್ಲ. ಚಾರ್ಚ್ ಕೂಡ ಮಾಡಬೇಕಿಲ್ಲ. ಈ ಕಾರು ಸ್ವಯಂ ಚಾಲಿತವಾಗಿ ಚಾರ್ಜ್ ಆಗಲಿದೆ.

ವಾಹನ ಚಲಾಯಿಸುವಾಗ ಕಾರಿನ ಬ್ಯಾಟರಿ ಸ್ವಯಂ ಚಾಲಿತವಾಗಿ ಚಾರ್ಜ್ ಆಗಲಿದೆ. ಚಾಜಿಂಗ್ ಸ್ಟೇಷನ್ಗೆ ಹೋಗದೆ ಚಲಿಸುವ ವೇಳೆ ಚಾರ್ಜ್ ಆಗುತ್ತದೆ.
ಮಾರುತಿ ಸುಜುಕಿ ತಯಾರಿಸುವ ಹೈಬ್ರಿಟ್ ಕಾರು ಇಂಟರ್ನಲ್ ಕಂಬುಷ್ಟನ್ ಎಂಜಿನ್ ಹೊಂದಿರಲಿದೆ. ಇದು ಬ್ಯಾಟರಿಗೆ ಪವರ್ ನೀಡಲಿದೆ. ಮುಂದಿನ ತಿಂಗಳು ಎಲೆಕ್ಟ್ರಿಕ್ ವಾಹನಗಳ ಜಂಟಿ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಈ ಕಾರನ್ನು ಟೆಸ್ಟಿಂಗ್ ನಡೆಸಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಓಡಾಡುತ್ತಿರುವ ಕಾರುಗಳು ಒಂದಲ್ಲಾ ಒಂದು ವಿಶೇಷತೆ ಹೊಂದಿದೆ. ಅದರಂತೆ ಬ್ಯಾಟರಿ ಚಾಲಿತ ಕಾರುಗಳಲ್ಲಿ ನಾನಾ ಫೀಚರ್ಗಳನ್ನು ಅಳವಡಿಸಿದೆ. ಆದರೆ ಮಾರುತಿ ಸುಜುಕಿ ಇದೀಗ ತನ್ನ ಗ್ರಾಹಕರಿಗೆ ಮತ್ತಷ್ಟು ಉಪಕಾರವಾಗಲೆಂದು ಹೈಬ್ರಿಡ್ ಕಾರನ್ನು ತಯಾರಿಸುತ್ತಿದೆ. ಹೈಬ್ರಿಡ್ ಕಾರುಗಳು ಭಾರಕ್ಕೆ ಬಂದರೆ ಹಲವು ಪ್ರಯೋಜನಗಳಿದೆ.
(Kannada Copy of Gizbot Kannada)
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm