ಬ್ರೇಕಿಂಗ್ ನ್ಯೂಸ್
27-05-22 10:16 am Bengalore Correspondent ಕರ್ನಾಟಕ
ಬೆಂಗಳೂರು, ಮೆ 27: ಜಾರಿ ನಿರ್ದೇಶನಾಲಯ (Enforcement directorate) ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಗುರುವಾರ ಆರೋಪಪಟ್ಟಿ ದಾಖಲಿಸಿದೆ. ಈ ಮೂಲಕ ಇಡಿ ಮತ್ತೊಮ್ಮೆ ಡಿ ಕೆ ಶಿವಕುಮಾರ್ ಗೆ ಶಾಕ್ ಕೊಟ್ಟಿದೆ.
ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಡಿ ಕೆ ಶಿವಕುಮಾರ್ ಮತ್ತು ಇತರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆದಾಯ ತೆರಿಗೆ ಇಲಾಖೆ ನೀಡಿದ ದೂರಿನ ಆಧಾರದ ಮೇಲೆ ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಕುಮಾರ್ ಸದ್ಯ ಜಾಮೀನಿನ ಮೇಲೆ ಇದ್ದಾರೆ.
2019ರಲ್ಲಿ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದೆಹಲಿಯಲ್ಲಿ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಿದ್ದರು. 50 ದಿನಗಳ ಕಾಲ ದೆಹಲಿಯ ತಿಹಾರ್ ಜೈಲಿನಲ್ಲಿದ್ದು ನಂತರ ದೆಹಲಿ ಹೈಕೋರ್ಟ್ ನಿಂದ ಜಾಮೀನು ಮೇಲೆ ಹೊರಬಂದಿದ್ದರು.
ಈ ಬಾರಿ ಜಾರಿ ನಿರ್ದೇಶನಾಲಯದಿಂದ ಡಿ ಕೆ ಶಿವಕುಮಾರ್ ಗೆ ಶಿಕ್ಷೆಯಾಗುತ್ತದೆಯೇ, ಆದರೆ ಎಷ್ಟು ವರ್ಷ ಆಗುತ್ತದೆ, ಅವರ ರಾಜಕೀಯ ಜೀವನಕ್ಕೆ ಮುಳುವಾಗುತ್ತದೆಯೇ ಎಂಬುದು ಸದ್ಯಕ್ಕಿರುವ ಕುತೂಹಲ.
ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ, ಒಪ್ಪದಿದ್ದಕ್ಕೆ ಸಂಚು: ಡಿಕೆ ಶಿವಕುಮಾರ್ ನೇರ ಆರೋಪ
ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಅದಕ್ಕೆ ಒಪ್ಪದಿದ್ದಕ್ಕೆ ನನ್ನ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ಇದಕ್ಕೆ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ರಾಜಕೀಯ ಸೇಡಿಗೆ ಸರಿಯಾದ ಉತ್ತರ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್, ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಅದಕ್ಕೆ ಒಪ್ಪದಿದ್ದಕ್ಕೆ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಸರ್ಕಾರಿ ಸಂಸ್ಥೆಗಳು ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿವೆ. ನನ್ನನ್ನು ಹೆದರಿಸುವುದು ಅಷ್ಟು ಸುಲಭವಲ್ಲ. ಬಿಜೆಪಿಯ 40% ಕಮಿಷನ್ ಸರ್ಕಾರದಿಂದ ನಾಡಿನ ಜನ ಬೇಸತ್ತಿದ್ದಾರೆ. ಈ ರಾಜಕೀಯ ಸೇಡಿಗೆ ಸರಿಯಾದ ಉತ್ತರ ಸಿಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
BJP ಪಕ್ಷಕ್ಕೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಅದಕ್ಕೆ ಒಪ್ಪದಿದ್ದಕ್ಕೆ ಸಂಚು ರೂಪಿಸಲಾಗಿದೆ. ಸರ್ಕಾರಿ ಸಂಸ್ಥೆಗಳು ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿವೆ. ನನ್ನನ್ನು ಹೆದರಿಸುವುದು ಅಷ್ಟು ಸುಲಭವಲ್ಲ. ಬಿಜೆಪಿಯ 40% ಕಮಿಷನ್ ಸರ್ಕಾರದಿಂದ ನಾಡಿನ ಜನ ಬೇಸತ್ತಿದ್ದಾರೆ. ಈ ರಾಜಕೀಯ ಸೇಡಿಗೆ ಸರಿಯಾದ ಉತ್ತರ ಸಿಗಲಿದೆ.
— DK Shivakumar (@DKShivakumar) May 26, 2022
The Enforcement Directorate (ED) has filed a chargesheet under the Prevention of Money-Laundering Act against Congress's Karnataka unit president DK shivakumar before a special court here this week. The agency has, however, not shared details of the charges framed against the former minister.
Shivakumar was arrested in September 2019 after being grilled on huge investments flowing into his entities which owned properties in Karnataka and Delhi.
29-04-24 11:33 am
HK News Desk
Bellari Accident, wedding: ಬಳ್ಳಾರಿ ; ಮದುವೆ ದಿ...
28-04-24 09:39 pm
PM Modi in Belagavi, Siddaramaiah: ಬಿಜೆಪಿ ಜನರ...
28-04-24 09:16 pm
Modi in Belagavi, Neha Murder: ಕಾಂಗ್ರೆಸ್ ಪಕ್ಷ...
28-04-24 08:24 pm
Prajwal Revanna, Sex, FIR: ಲೈಂಗಿಕ ದೌರ್ಜನ್ಯ ;...
28-04-24 05:28 pm
28-04-24 10:35 pm
HK News Desk
Alejandra Rodríguez, Miss Universe Buenos Air...
28-04-24 10:51 am
ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ...
27-04-24 05:46 pm
Sunny Leone in Kasaragod: ಮಾದಕ ನಟಿ ಸನ್ನಿ ಲಿಯೋ...
27-04-24 03:13 pm
Crime news, Nude Video shared: ಕೈ ಕೊಟ್ಟಿದ್ದಕ್...
27-04-24 02:53 pm
29-04-24 11:05 am
Mangalore Correspondent
Contentful CEO Karthik Rau, Udupi: ಜಗತ್ತಿನ ಮು...
28-04-24 11:03 pm
ಕೇರಳದಲ್ಲಿ ಹಕ್ಕಿಜ್ವರ ಭೀತಿ ; ಕರ್ನಾಟಕದ ಗಡಿ ಜಿಲ್ಲ...
28-04-24 03:36 pm
Mangalore, Congress Mp candidate Padmaraj: ಕಾ...
27-04-24 11:06 pm
loksabha elections 2024, Mangalore: ದಕ್ಷಿಣ ಕನ...
27-04-24 09:43 pm
28-04-24 09:46 pm
HK News Desk
Bangalore crime, Instagram: ತಾಯಿಯ ಫೋಟೋ ಅಶ್ಲೀಲ...
28-04-24 05:22 pm
Bangalore crime, Divorce: ಇನ್ನೊಬ್ಬಳ ಜೊತೆ ಪತಿಯ...
27-04-24 01:37 pm
Mangalore crime, stabbed, Pawan: ಫರಂಗಿಪೇಟೆ ;...
26-04-24 03:59 pm
Mangalore Fraud, crime, Krishnaprasad Shetty:...
25-04-24 10:18 pm