ಬ್ರೇಕಿಂಗ್ ನ್ಯೂಸ್
02-06-22 10:36 am Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 2: ಕುವೆಂಪು ಬಗ್ಗೆ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವಹೇಳನ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ, ಆಕ್ಷೇಪ ಕೇಳಿಬರುತ್ತಿರುವ ನಡುವಲ್ಲೇ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಅವರೂ ಕುವೆಂಪು ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ.
ಕುವೆಂಪು ಒಬ್ಬ ಮುಸ್ಲಿಂ ವಿರೋಧಿ ಆಗಿದ್ದರು. ಈ ಬಗ್ಗೆ ಅವರಲ್ಲೇ ಕೇಳಬೇಕು ಅಂತ ಒಮ್ಮೆ ಅವರ ಮನೆಗೂ ಹೋಗಿದ್ದೆ. ಆದರೆ ಅವರ ವಯಸ್ಸು ನೋಡಿ ಸುಮ್ಮನಾಗಿದ್ದೆ ಎಂದು ಸಾಹಿತಿ ಬೋಳುವಾರು ಮಹಮದ್ ಹೇಳಿಕೆ ನೀಡಿದ್ದಾರೆ.
ಕುವೆಂಪು ವಿಚಾರದಲ್ಲಿ ಕ್ಲಬ್ ಹೌಸ್ನಲ್ಲಿ ಚರ್ಚೆ ನಡೆಯುತ್ತಿದ್ದಾಗ ಬೋಳುವಾರು ಮಹಮದ್ ತನ್ನ ಅಭಿಪ್ರಾಯ ಹೇಳಿದ್ದು ಕುವೆಂಪು ಅವರ ವ್ಯಕ್ತಿತ್ವದ ಬಗ್ಗೆ ಪ್ರಶ್ನೆ ಮಾಡಿದಂತಾಗಿದೆ. ಕುವೆಂಪು ದೊಡ್ಡ ಕವಿಯಾಗಿದ್ದರೂ ಮುಸ್ಲಿಂ ವಿರೋಧಿ ಮನಸ್ಸು ಹೊಂದಿದ್ದರು. ಇದನ್ನು ನಾನು ಕೇಳಬೇಕೆಂದು ಅವರ ಮನೆಗೂ ಹೋಗಿದ್ದೆ. ಬಳಿಕ ಅವರ ವಯಸ್ಸನ್ನು ನೋಡಿ ಸುಮ್ಮನೆ ಹಿಂತಿರುಗಿದ್ದೆ. ನಾನು ಆವತ್ತೇ ಕುವೆಂಪುಗಿಂತ ಒಳ್ಳೆಯ ಕಾದಂಬರಿ ಬರೆಯಬೇಕು ಎಂದು ನಿರ್ಧರಿಸಿದ್ದೆ. ಅದರಂತೆ ನಾನು ಕುವೆಂಪು ಅವರಿಗಿಂತ ದೊಡ್ಡ ಕಾದಂಬರಿ ಬರೆದಿದ್ದೇನೆ ಎಂದು ಹೇಳಿದ್ದಾರೆ.

ಕುವೆಂಪು ಅವರದ್ದು 600 ಪುಟದ ಕಾದಂಬರಿಯಾಗಿತ್ತು. ನಾನು 1,100 ಪುಟದ ಕಾದಂಬರಿ ಬರೆದಿದ್ದೇನೆ. ಕುವೆಂಪು ಅವರಂತಹ ಮನುಷ್ಯರ ಮನಸ್ಸಿನಲ್ಲೂ ಮುಸ್ಲಿಂ ಬಗ್ಗೆ ವಿರೋಧಿ ಕಲ್ಪನೆ ಇತ್ತು ಎಂಬುದನ್ನು ಊಹಿಸಿರಲಿಲ್ಲ. ಆದರೆ ಅವರು ಮುಸ್ಲಿಮರ ವಿಚಾರದಲ್ಲಿ ತಪ್ಪು ಭಾವನೆ ಹೊಂದಿದ್ದರು ಎಂದು ತಮ್ಮ ಭಾಷಣದಲ್ಲಿ ಬೋಳುವಾರು ಮಹಮದ್ ಕುವೆಂಪು ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಕ್ಲಬ್ ಹೌಸ್ ನಲ್ಲಿ ಆಡಿರುವ ಮಾತುಗಳ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕುವೆಂಪು ಬಗ್ಗೆ ರೋಹಿತ್ ಚಕ್ರತೀರ್ಥ ಅವಹೇಳನ ಮಾಡಿದ್ದಾರೆಂದು ಗುಲ್ಲು ಎದ್ದಿರುವಾಗಲೇ ಈಗ ಹೊಸ ವಿವಾದ ಏಳುವಂತಾಗಿದೆ.
Bolwar Mahammad Kunhi quesutins if Kuvempu was anti Muslim. Pressure has started mounting on Chief Minister Basavaraj Bommai to remove Rohith Chakrathirtha from the post of chairman of Karnataka Textbooks Revision Committee, over his remarks about the state anthem.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 12:01 pm
HK News Staffer
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm