ಬ್ರೇಕಿಂಗ್ ನ್ಯೂಸ್
05-06-22 05:09 pm Bengalore Correspondent ಕರ್ನಾಟಕ
ಬೆಂಗಳೂರು, ಜೂನ್ 5 : ಸುಪ್ರೀಂ ಕೋರ್ಟ್ ಆದೇಶದನ್ವಯ ಧ್ವನಿವರ್ಧಕ ಬಳಕೆ ಮೇಲೆ ನಿರ್ಬಂಧ ವಿಧಿಸಬೇಕು ಎನ್ನುವ ಆಗ್ರಹದ ನಡುವಲ್ಲೇ ಧ್ವನಿವರ್ಧಕ ಬಳಕೆಗೆ ಪರವಾನಗಿ ಶುಲ್ಕ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಒಂದು ದಿನದ ಅವಧಿಗೆ 75 ರೂ., 1 ರಿಂದ 31 ದಿನಗಳ ಅವಧಿಗೆ 15 ರೂ. ಹಾಗೂ ಒಂದು ತಿಂಗಳ ಅವಧಿಗಿಂತ ಹೆಚ್ಚಿನ ದಿನಕ್ಕೆ ಪರವಾನಗಿ ಬೇಕಿದ್ದಲ್ಲಿ ಅದರ ಶುಲ್ಕವನ್ನು 450 ರೂ. ಎಂದು ನಿಗದಿಪಡಿಸಲಾಗಿದೆ. ಇದಲ್ಲದೆ, ಸುಪ್ರೀಂ ಕೋರ್ಟ್ ನೀಡಿರುವ ಧ್ವನಿವರ್ಧಕದ ಶಬ್ದದ ಮಿತಿಯನ್ನು ನಿಗದಿಯಂತೆ ಮಿತಿಗೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
2018ರ ಈ ಕುರಿತ ಆದೇಶದಲ್ಲಿ ಒಂದು ತಿಂಗಳಿಗೆ ಮಾತ್ರ ಧ್ವನಿವರ್ಧಕ ಪರವಾನಗಿ ಶುಲ್ಕದ ಬಗ್ಗೆ ತಿಳಿಸಲಾಗಿತ್ತು. ಅದರಿಂದ ಮೇಲ್ಪಟ್ಟ ಅವಧಿಗೆ ಶುಲ್ಕ ನಿಗದಿ ಮಾಡಿರಲಿಲ್ಲ. ಇದೀಗ ಜೂನ್ 3ರ 2022 ರಂದು ಹೊರಡಿಸಿದ ಆದೇಶದಲ್ಲಿ ಒಂದು ತಿಂಗಳಿಗಿಂತ ಹೆಚ್ಚಿನ ಕಾಲಾವಧಿಗೆ ನೀಡಲಾಗುವ ಧ್ವನಿವರ್ಧಕ ಅನುಮತಿಗಳಿಗೆ ಒಟ್ಟಾರೆ ಶುಲ್ಕವನ್ನು 450 ಎಂದು ನಿಗದಿಪಡಿಸಲಾಗಿದೆ. ಅಲ್ಲದೆ, ಆಯಾ ಪ್ರಾಧಿಕಾರವು ಎರಡು ವರ್ಷಗಳ ಅವಧಿಗೆ ಧ್ವನಿವರ್ಧಕ ಪರವಾನಗಿ ನೀಡಬಹುದೆಂದೂ ಆದೇಶದಲ್ಲಿ ತಿಳಿಸಿದೆ.
ಮಸೀದಿಗಳ ಧ್ವನಿವರ್ಧಕದ ಬಗ್ಗೆ ಹಿಂದು ಸಂಘಟನೆಗಳ ಆಕ್ಷೇಪ ಇದ್ದರೂ, ಎಷ್ಟು ಅವಧಿಗೆ ಪರವಾನಗಿ ನೀಡಬೇಕು ಮತ್ತು ಅದರ ಶುಲ್ಕ ಎಷ್ಟು ಎನ್ನುವ ಬಗ್ಗೆ ಸರಕಾರದಿಂದ ಸೂಕ್ತ ಆದೇಶ ಇರಲಿಲ್ಲ. ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಸೀದಿಗಳು ಮೈಕ್ ಅನುಮತಿಯನ್ನು ನವೀಕರಿಸುವ ಜೊತೆಗೆ ಅದರ ಶಬ್ದದ ಮಿತಿಯನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಿಗದಿಗೊಳಿಸಬೇಕಾಗಿದೆ.
The Karnataka Government on Tuesday issued new guidelines for using a loudspeaker in the state, with a rider for a ‘designated authority’ authorization. The move comes amid an ongoing row over the use of the loudspeakers for Azaan, the Islamic call for prayers versus Hanuman Chalisa.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 02:42 pm
Mangalore Correspondent
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm