ಮೋದಿಗಾಗಿ ಮಾಡಿದ್ರು ನುಣ್ಣನೆ ರಸ್ತೆ ; ಒಂದೇ ದಿನದಲ್ಲಿ ಅಸಲಿಯತ್ತು ಬಯಲು, ರಸ್ತೆ ಕುಸಿದ ವಿಡಿಯೋ ವೈರಲ್! ವರದಿ ಕೇಳಿದ ಪ್ರಧಾನಿ ಕಚೇರಿ

24-06-22 06:54 pm       Bengalore Correspondent   ಕರ್ನಾಟಕ

ಧಾನಿ ಮೋದಿ ಬೆಂಗಳೂರಿಗೆ ಬಂದಿದ್ದಾಗ ರಸ್ತೆ ಸರಾಗ ಇರಬೇಕೆಂದು ತುರ್ತಾಗಿ ಡಾಮರೀಕರಣ ಮಾಡಲಾಗಿತ್ತು. 15 ದಿನಗಳಲ್ಲಿ 23 ಕೋಟಿ ವ್ಯಯಿಸಿ 14 ಕಿಮೀ ರಸ್ತೆಯನ್ನು ಡಾಮರೀಕರಣ ಮಾಡಿದ್ದು ಭಾರೀ ಟೀಕೆಗೂ ಗುರಿಯಾಗಿತ್ತು.

ಬೆಂಗಳೂರು, ಜೂನ್ 24: ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದಾಗ ರಸ್ತೆ ಸರಾಗ ಇರಬೇಕೆಂದು ತುರ್ತಾಗಿ ಡಾಮರೀಕರಣ ಮಾಡಲಾಗಿತ್ತು. 15 ದಿನಗಳಲ್ಲಿ 23 ಕೋಟಿ ವ್ಯಯಿಸಿ 14 ಕಿಮೀ ರಸ್ತೆಯನ್ನು ಡಾಮರೀಕರಣ ಮಾಡಿದ್ದು ಭಾರೀ ಟೀಕೆಗೂ ಗುರಿಯಾಗಿತ್ತು. ಆದರೆ ಮೋದಿ ಬಂದು ಹೋದ ಒಂದೇ ದಿನದಲ್ಲಿ ಡಾಮರ್ ರಸ್ತೆ ಕುಸಿದು ಹೋಗಿದ್ದು, ಕಳಪೆ ಕಾಮಗಾರಿಯ ವಿಡಿಯೋ ವೈರಲ್ ಆಗಿತ್ತು. ರಸ್ತೆಯ ನಡುವೆ ಗುಂಡಿ ಬಿದ್ದಿರುವುದು ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಸಿಎಂ ಬೊಮ್ಮಾಯಿ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದರೆ, ಪ್ರಧಾನ ಮಂತ್ರಿ ಕಚೇರಿಯಿಂದ ಈ ಬಗ್ಗೆ ರಿಪೋರ್ಟ್ ನೀಡುವಂತೆ ಸಿಎಂ ಕಚೇರಿಗೆ ಸೂಚನೆ ಬಂದಿದೆ.

ಮರಿಯಪ್ಪನ ಪಾಳ್ಯ- ಜ್ಞಾನಭಾರತಿ ಮೈನ್ ರೋಡಿನ ನಡುವೆ ಹೊಸ ಡಾಮರು ರಸ್ತೆ ಕುಸಿದು ಹೋಗಿದ್ದು, ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದೆ. ಇದೇ ರಸ್ತೆಯಲ್ಲಿ ಜೂನ್ 20ರಂದು ಪ್ರಧಾನಿ ಮೋದಿ ಮತ್ತವರ ಬೆಂಗಾವಲು ವಾಹನಗಳು ಚಲಿಸಿದ್ದವು. ಬೆಂಗಳೂರು ಯೂನಿವರ್ಸಿಟಿ ಕ್ಯಾಂಪಸ್ ಮುಂದಿನ 3.6 ಕಿಮೀ ಉದ್ದದ ರಸ್ತೆಯನ್ನು ಆರು ಕೋಟಿ ಖರ್ಚು ಮಾಡಿ ಡಾಮರೀಕರಣ ಮಾಡಲಾಗಿತ್ತು. ಆದರೆ ಮೋದಿ ಹಿಂತಿರುಗಿದ ಮಂಗಳವಾರ ರಾತ್ರಿಯೇ ಬೆಂಗಳೂರಿನಲ್ಲಿ ಮಳೆಯಾಗಿತ್ತು. ಒಂದೇ ಮಳೆಯಲ್ಲಿ ರಸ್ತೆಯ ನಡು ನಡುವೆ ಕುಸಿದಿದ್ದು, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಕಾರ್ಯ ನಿರ್ವಹಣೆಗೆ ಕನ್ನಡಿ ಹಿಡಿದಿದೆ.

PMO seeks report after Bengaluru road caves in within 48 hours of PM  Narendra Modi's visit | Mint

Bengaluru road relaid by BBMP for Modi visit collapses soon after he  leaves- The New Indian Express

Karnataka: Blushes as Bengaluru road done up for PM Modi visit collapses  within 48 hours

Bengaluru Civic Body Spends Rs 6 Cr to Asphalt Road for PM's Visit, It  Caves In Day Later

Karnataka Covid 19 clusters: CM Basavaraj Bommai calls emergency meeting-  The New Indian Express

ಈ ಬಗ್ಗೆ ಸಮಗ್ರ ವರದಿಯನ್ನು ನೀಡುವಂತೆ ಪ್ರಧಾನ ಮಂತ್ರಿ ಕಚೇರಿಯಿಂದ ಮುಖ್ಯಮಂತ್ರಿ ಕಚೇರಿಗೆ ಸೂಚನೆ ಬಂದಿದೆ. ಇದರ ನಡುವಲ್ಲೇ ಸಿಎಂ ಬೊಮ್ಮಾಯಿ, ಬಿಬಿಎಂಪಿ ಆಯುಕ್ತರಿಗೆ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಅಧಿಕಾರಿಗಳು ದೌಡಾಯಿಸಿ, ರಸ್ತೆಯಲ್ಲಿ ತಡಕಾಡಿದ್ದು ಹಳೆ ಪೈಪ್ ಲೈನಲ್ಲಿ ನೀರು ಬಂದು ಒಡೆದು ಹೋಗಿರುವುದು ಕಂಡುಬಂದಿದೆ. ರಸ್ತೆಯ ಅಡಿಭಾಗದಲ್ಲಿ ನೀರಿನ ಪೈಪ್ ಲೈನ್ ಇತ್ತು. ಅದರಲ್ಲಿ ನೀರು ಬರಲ್ಲ ಎಂದು ಹೇಳಿ ಹಾಗೆಯೇ ಮಣ್ಣು ಮುಚ್ಚಿ ಮೇಲ್ಗಡೆ ಡಾಮರು ಮಾಡಿದ್ದರು. ಮಂಗಳವಾರ ರಾತ್ರಿ ಭಾರೀ ಮಳೆಯಾಗಿದ್ದರಿಂದ ಡಾಮರು ಆಗಿದ್ದ ರಸ್ತೆಯೇ ಕೆಲವೆಡೆ ಕುಸಿದಿದ್ದು ಹೊಂಡ ಬಿದ್ದಿದೆ.

Road Fixed by Bengaluru Civic Body for Rs 6.05 Crs Ahead of PM Modi's Visit  Caves In a Day Later | Shiksha News

Shoddy work leads to road collapse after PM's visit; BBMP engineers receive  notice- The New Indian Express

Bengaluru Roads Deteriorate Days After PM Modi's Visit, Show Cause Notice  Issued

Bangalore News: Latest Bengaluru News, Bangalore News Today, Karnataka  Coronavirus News Live | The Indian Express

PM Modi to meet defence service chiefs today amid Agnipath protests - India  News

ಒಂದೇ ದಿನದಲ್ಲಿ ರಸ್ತೆ ಗುಂಡಿ ಬಿದ್ದಿರುವುದರ ವಿಡಿಯೋ ವೈರಲ್ ಆಗಿದ್ದಲ್ಲದೆ, ರಾಜ್ಯ ಸರಕಾರದ ಕಾರ್ಯ ವೈಖರಿಗೆ ಕನ್ನಡಿ ಹಿಡಿದಿತ್ತು. ಪ್ರಧಾನ ಮಂತ್ರಿ ಕಚೇರಿ ಅಧಿಕಾರಿಗಳು ಈ ರೀತಿಯ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ವರದಿಯನ್ನು ನೀಡುವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಬಿಬಿಎಂಪಿಯ ಮೂವರು ಇಂಜಿನಿಯರುಗಳಿಗೆ ಆಯುಕ್ತರು ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ.

A video that shows near-instant deterioration of Bengaluru roads that were newly asphalted to smoothen the travel of Prime Minister Narendra Modi’s convoy during his recent visit has gone viral. Embarrassed by this infrastructure failure, the Prime Minister’s Office has sought a report from the Karnataka state government.The civic body recently claimed that ahead of Modi’s visit, it had spent Rs 23 crore to redo 14 km of roads, including stretches of Mysuru Road and Ballari Road, in the city.