ನಾನೇನಾದ್ರೂ ತಪ್ಪು ಮಾಡಿದ್ದರೆ ವಿಧಾನಸೌಧ ಮುಂದೆ ತಲೆ ಕಡಿದುಕೊಳ್ಳಲು ಸಿದ್ಧ ; ಹೈಕೋರ್ಟ್ ನ್ಯಾಯಾಧೀಶರ ಖಾರ ನುಡಿ

03-07-22 09:53 pm       HK News Desk   ಕರ್ನಾಟಕ

ಕೆಲವು ವಕೀಲರು ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಆರೋಪ ಮಾಡಿರುವ ವಿಚಾರದಲ್ಲಿ ಖಾರ ಪ್ರತಿಕ್ರಿಯೆ ನೀಡಿರುವ ಹೈಕೋರ್ಟ್ ನ್ಯಾಯಾಧೀಶ ಬಿ.ವೀರಪ್ಪ, ನಾನೇನಾದ್ರೂ ನ್ಯಾಯಾಂಗ ಸೇವೆಯಲ್ಲಿ ತಪ್ಪು ಮಾಡಿದ್ದರೆ, ವಿಧಾನಸೌಧ ಮತ್ತು ಹೈಕೋರ್ಟ್ ಅಂಗಳದಲ್ಲಿ ಎಲ್ಲರ ಮುಂದೆ ನಿಂತು ತಲೆ ಕಡಿದುಕೊಳ್ಳಲು ಸಿದ್ಧನಿದ್ದೇನೆ. ನ್ಯಾಯಾಂಗದಲ್ಲಿ ನಾನು ನಡೆದುಕೊಂಡು ಬಂದ ಕೆಲಸದ ಬದ್ಧತೆಯಿಂದ ಈ ಮಾತು ಹೇಳುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ನ್ಯಾಯಾಧೀಶರೊಬ್ಬರು ಈ ಮಾತು ಹೇಳಿದ್ದು ವಕೀಲರು ಮತ್ತು ನ್ಯಾಯಾಧೀಶರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು, ಜುಲೈ 3: ಕೆಲವು ವಕೀಲರು ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಆರೋಪ ಮಾಡಿರುವ ವಿಚಾರದಲ್ಲಿ ಖಾರ ಪ್ರತಿಕ್ರಿಯೆ ನೀಡಿರುವ ಹೈಕೋರ್ಟ್ ನ್ಯಾಯಾಧೀಶ ಬಿ.ವೀರಪ್ಪ, ನಾನೇನಾದ್ರೂ ನ್ಯಾಯಾಂಗ ಸೇವೆಯಲ್ಲಿ ತಪ್ಪು ಮಾಡಿದ್ದರೆ, ವಿಧಾನಸೌಧ ಮತ್ತು ಹೈಕೋರ್ಟ್ ಅಂಗಳದಲ್ಲಿ ಎಲ್ಲರ ಮುಂದೆ ನಿಂತು ತಲೆ ಕಡಿದುಕೊಳ್ಳಲು ಸಿದ್ಧನಿದ್ದೇನೆ. ನ್ಯಾಯಾಂಗದಲ್ಲಿ ನಾನು ನಡೆದುಕೊಂಡು ಬಂದ ಕೆಲಸದ ಬದ್ಧತೆಯಿಂದ ಈ ಮಾತು ಹೇಳುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ನ್ಯಾಯಾಧೀಶರೊಬ್ಬರು ಈ ಮಾತು ಹೇಳಿದ್ದು ವಕೀಲರು ಮತ್ತು ನ್ಯಾಯಾಧೀಶರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ರಿತುರಾಜ್ ಅವಸ್ಥಿ ಅವರಿಗೆ ಬೆಂಗಳೂರು ವಕೀಲರ ಸಂಘದಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾಯಾಧೀಶ ಬಿ. ವೀರಪ್ಪ ಸ್ವಲ್ಪ ಖಾರವಾಗಿಯೇ ಮಾತನಾಡಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರು ಕೆಲವು ಪ್ರಕರಣಗಳಲ್ಲಿ ಪ್ರಭಾವ ಬೀರುವ ರೀತಿ ನಡೆದುಕೊಳ್ಳುತ್ತಾರೆ ಎಂದು ಕೆಲವು ವಕೀಲರು ಆರೋಪ ಮಾಡಿದ್ದ ಬಗ್ಗೆ ನ್ಯಾಯಾಧೀಶರು ಪ್ರತಿಕ್ರಿಯೆ ನೀಡಿದ್ದಾರೆ.  

ಈ ಬಗ್ಗೆ ಹೆಸರು ಪ್ರಸ್ತಾಪಿಸದೆ ಪ್ರತಿಕ್ರಿಯಿಸಿದ ವೀರಪ್ಪ ಅವರು, ಈ ರೀತಿಯ ಆರೋಪಗಳನ್ನು ಒಂದು ಹಂತದ ವರೆಗೆ ಕೇಳಿಕೊಂಡು ಸುಮ್ಮನಿರಬಹುದು. ಆದರೆ, ಅದೊಂದು ಹಂತವನ್ನು ದಾಟಿದರೆ ಕೇಳಿಕೊಂಡು ಸುಮ್ಮನಿರುವಂತಿಲ್ಲ. ಶ್ರೀಕೃಷ್ಣ ಮಹಾಭಾರತದಲ್ಲಿ ಕೊನೆಗೆ ಸುದರ್ಶನ ಚಕ್ರ ಎತ್ತಿದ ರೀತಿ ಹೈಕೋರ್ಟ್ ಕೂಡ ಸುದರ್ಶನ ಚಕ್ರವನ್ನು ಎತ್ತಬೇಕಾಗುತ್ತದೆ. ವಕೀಲರ ಈ ರೀತಿಯ ನಡೆಗಳ ಬಗ್ಗೆ ಬಾರ್ ಕೌನ್ಸಿಲ್ ಕೂಡ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ ಬೆಂಗಳೂರು ಬಾರ್ ಕೌನ್ಸಿಲ್ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ವಕೀಲರು ನ್ಯಾಯಾಧೀಶರ ಬಗ್ಗೆ ಪ್ರಶ್ನೆ ಮಾಡುವುದರಿಂದ ಜನರು ನ್ಯಾಯಾಂಗದ ಮೇಲಿಟ್ಟ ಗೌರವಕ್ಕೆ ಧಕ್ಕೆ ಬರುತ್ತದೆ. ನ್ಯಾಯಾಧೀಶರ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಮಾಡುವುದಕ್ಕಿಂತ ದೊಡ್ಡ ಅಪರಾಧ ಮತ್ತೊಂದಿಲ್ಲ. ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಬಾರ್ ಕೌನ್ಸಿಲ್ ನಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Justice B Veerappa, a judge at the Karnataka High Court spoke in an event on Friday and said, “I am ready to stand in front of the Vidhana Soudha and the high court and behead myself if I make a mistake, that is the spirit with which I work as a judge.” His statement comes after reports emerged of advocates allegedly casting aspersions on high court judges and levelling them with ‘baseless’ allegations during court proceedings.