ಬ್ರೇಕಿಂಗ್ ನ್ಯೂಸ್
05-07-22 10:27 pm HK News Desk ಕರ್ನಾಟಕ
ಹುಬ್ಬಳ್ಳಿ, ಜುಲೈ 5: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರನ್ನು ಪತ್ತೆ ಮಾಡಲು ಕೊನೆಗೆ ಜೆಸಿಬಿ ಕೂಡ ನೆರವಿಗೆ ಬಂದಿತ್ತು ಅನ್ನೋ ವಿಚಾರ ಬಯಲಾಗಿದೆ. ಬೆಳಗಾವಿ ಪೊಲೀಸರು ಜೆಸಿಬಿ ಅಡ್ಡ ಇಟ್ಟು ಹಂತಕರನ್ನು ಕಾಲರ್ ಹಿಡಿದು ನಡುಬೀದಿಯಲ್ಲಿ ದರ ದರನೆ ಎಳೆ ತರುವ ವಿಡಿಯೋ ವೈರಲ್ ಆಗಿದೆ.
ಕೊಲೆ ವಿಷಯ ತಿಳಿಯುತ್ತಲೇ ಹಂತಕರ ಪತ್ತೆಗೆ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಪೊಲೀಸರು ಅಲರ್ಟ್ ಆಗಿದ್ದರು. ಹಂತಕರು ನಗರ ದಾಟಿ ಹೋಗಬಾರದು ಎಂದು ಎಲ್ಲ ಕಡೆ ನಾಕಾಬಂದಿ ಹಾಕಿದ್ದರು. ಆದರೆ, ಆರೋಪಿಗಳು ಯಾರೆಂದು ತಿಳಿಯುತ್ತಲೇ ಲೊಕೇಶನ್ ನೋಡಿದಾಗ, ನಗರ ಬಿಟ್ಟು ಹೋಗಿದ್ದು ಕನ್ಫರ್ಮ್ ಆಗಿತ್ತು. ಕಾರಿನಲ್ಲಿ ಹುಬ್ಬಳ್ಳಿ ನಗರ ದಾಟಿ ಬೆಳಗಾವಿ ರಸ್ತೆಯಲ್ಲಿ ಎಸ್ಕೇಪ್ ಆಗುತ್ತಿರುವುದು ಕಂಡುಬಂದಿತ್ತು.
ಆರೋಪಿಗಳು ಬೆಳಗಾವಿ ರಸ್ತೆಯಲ್ಲಿ ಗೋವಾ ಅಥವಾ ಮಹಾರಾಷ್ಟ್ರಕ್ಕೆ ತೆರಳುವುದು ಖಾತ್ರಿಯಾಗಿತ್ತು. ಕೂಡಲೇ ಹುಬ್ಬಳ್ಳಿ ಪೊಲೀಸರ ತಂಡ ರಾಮದುರ್ಗ ಪೊಲೀಸರಿಗೆ ಸುದ್ದಿ ಮುಟ್ಟಿಸಿತ್ತು. ಕಾರಿನಲ್ಲಿ ಆರೋಪಿಗಳು ತೆರಳುತ್ತಿರುವ ಮಾಹಿತಿ ತಿಳಿದು ಸ್ಥಳೀಯ ಪೊಲೀಸರು ಹೆದ್ದಾರಿಯ ಅಡ್ಡಲಾಗಿ ಜೆಸಿಬಿಯನ್ನೇ ಅಡ್ಡಕ್ಕಿಟ್ಟು ವಾಹನ ಸಂಚಾರವನ್ನು ತಡೆದು ಬಿಟ್ಟಿದ್ದರು. ಪೊಲೀಸರು ಅಡ್ಡಹಾಕಿದ್ದು ತಿಳಿಯುತ್ತಲೇ ಕಾರನ್ನು ರಿವರ್ಸ್ ತೆಗೆದು ಪರಾರಿಯಾಗಲು ಯತ್ನ ನಡೆದಿತ್ತು. ಆದರೆ ಪಿಸ್ತೂಲ್ ಹಿಡಿದೇ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ಕಾರನ್ನು ಕೂಡಲೇ ಸುತ್ತುವರಿದರು. ಅದರಲ್ಲಿದ್ದ ಇಬ್ಬರನ್ನೂ ಕಾಲರ್ ಪಟ್ಟಿ ಹಿಡಿದು ಹೊರಕ್ಕೆಳೆದು ರಸ್ತೆಯಲ್ಲೇ ಎಳ್ಕೊಂಡು ಹೋಗಿ ಜೀಪಿಗೆ ಹತ್ತಿಸಿದ್ದಾರೆ.
ರಾಮದುರ್ಗ ಡಿವೈಎಸ್ಪಿ ರಾಮನಗೌಡ ಹಟ್ಟಿ, ಸಿಪಿಐ ಐ.ಆರ್.ಪಟ್ಟಣಶೆಟ್ಟಿ, ಪಿಎಸ್ಐ ಶಿವಾನಂದ ಕಾರಜೋಳ ನೇತೃತ್ವದಲ್ಲಿ 22ಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಲ್ಲದೆ, ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಜೆಸಿಬಿಯನ್ನಿಟ್ಟು ಅಡ್ಡಹಾಕಿದ್ದು ಕಾರ್ಯವೈಖರಿಗೆ ಸಾಕ್ಷಿಯಾಗಿತ್ತು. ಅಲ್ಲದೆ, ಇದರ ವಿಡಿಯೋ ಕೂಡ ವೈರಲ್ ಆಗಿದೆ.
ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಭೀಕರ ಹತ್ಯೆ, ಗ್ರಾಹಕರ ಸೋಗಿನಲ್ಲಿ ಬಂದು ಹೊಟೇಲಿನಲ್ಲೇ ಕೃತ್ಯ
Police use JCB to block Chandrashekhar Guruji murder accused near Belgaum highway as they were trying to flee towards Maharashtra. A Vastu exponent from Karnataka who goes by the name Chandrashekhar Guruji has been stabbed to death in full public view by two men at a private hotel in the Hubballi district. Special teams were formed to catch the killers and both have now been arrested.
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am