ಬ್ರೇಕಿಂಗ್ ನ್ಯೂಸ್
12-09-22 12:26 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.12: ಬೆಂಗಳೂರಿನಲ್ಲಿ ಮಳೆಯಿಂದಾಗಿ ರಾಡಿ ಎದ್ದ ಬೆನ್ನಲ್ಲೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿಯೊಬ್ಬಳು ಚರಂಡಿಗೆ ಬಿದ್ದು ಮೃತಪಟ್ಟ ಘಟನೆ ಬಾಣಸವಾಡಿ ಬಳಿ ನಡೆದಿದೆ. ಎಚ್ಬಿಆರ್ ಲೇಔಟ್ ನಿವಾಸಿಯಾಗಿದ್ದ ನೇಪಾಳ ಮೂಲದ ತಾರಾ ಬಡಾಯಿಕ್(23) ಮೃತ ಯುವತಿ.
ಘಟನೆ ಸಂದರ್ಭದಲ್ಲಿ ಹಿಂಬದಿ ಸವಾರನಾಗಿದ್ದ ದಿಲೀಪ್(38) ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಶನಿವಾರ ತಡರಾತ್ರಿ 12.30ರ ಸುಮಾರಿಗೆ ಸಾರಾಯಿಪಾಳ್ಯ ಕಡೆಯಿಂದ ಹೆಣ್ಣೂರು ಕಡೆಗೆ ತೆರಳುತ್ತಿದ್ದಾಗ ರಸ್ತೆ ಗುಂಡಿ ತಪ್ಪಿಸಲು ಹೋಗಿ ರಸ್ತೆ ಬದಿ ಇದ್ದ ಚರಂಡಿಗೆ ಬಿದ್ದಿದ್ದಾಳೆ. ಈ ವೇಳೆ, ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆ ಸೇರಿಸಲಾಗಿತ್ತು.
ನೇಪಾಳ ಮೂಲದ ತಾರಾ ಬಡಾಯಿಕ್ ಕೆಲವು ವರ್ಷಗಳಿಂದ ಬೆಂಗಳೂರಿನ ಎಚ್ಬಿಆರ್ ಲೇಔಟ್ ನಲ್ಲಿ ನೆಲೆಸಿದ್ದು, ಅಡುಗೆ ವೃತ್ತಿ ಮಾಡಿಕೊಂಡಿದ್ದಳು. ಶನಿವಾರ ರಾತ್ರಿ ತನ್ನ ಡಿಯೋ ಸ್ಕೂಟರಿನಲ್ಲಿ ಸ್ನೇಹಿತ ದಿಲೀಪ್ ನನ್ನು ಹಿಂಬದಿ ಕೂರಿಸಿಕೊಂಡು ಎಚ್ಬಿಆರ್ ಲೇಔಟ್ ಮುಖ್ಯರಸ್ತೆಯಲ್ಲಿ ಸಾರಾಯಿ ಪಾಳ್ಯ ಕಡೆಯಿಂದ ಹೆಣ್ಣೂರು ಕಡೆಗೆ ಹೊರಟ್ಟಿದ್ದಳು. ಮಾರ್ಗ ಮಧ್ಯೆ ಖಾಸಾ ಗ್ರ್ಯಾಂಡ್ ಬರಾಲಾ ಆಪಾರ್ಚ್ಮೆಂಟ್ ಬಳಿ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ಪಕ್ಕದ ಚರಂಡಿಗೆ ಬಿದ್ದಿದೆ. ಈ ವೇಳೆ ತಾರಾ ಬಡಾಯಿಕ್ ತಲೆ ಹಾಗೂ ತೊಡೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ತಾರಾ ಬಡಾಯಿಕ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ತನಿಖೆ ನಂತರ ಅಪಘಾತಕ್ಕೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
The incident occurred around 12:30 am when the victim and her friend were on the way to HBR Layout.
29-03-24 05:37 pm
HK News Desk
L hanumanthaiah kolar: ಕೋಲಾರದಲ್ಲಿ ಇಬ್ಬರ ಜಗಳದಲ...
29-03-24 03:43 pm
CT Ravi, Amit Shah, Yathindra Siddaramaiah: ಯ...
29-03-24 03:40 pm
ರಾಜ್ಯದಲ್ಲಿ ಬರದ ಬೇಗೆಯ ನಡುವೆ ಉಷ್ಣ ಮಾರುತ ; 5 ದಿನ...
29-03-24 03:03 pm
ಹಾಸನ ; ಐದು ವರ್ಷದಲ್ಲಿ ಪ್ರಜ್ವಲ್ ರೇವಣ್ಣ ಆಸ್ತಿ ನಾ...
28-03-24 11:00 pm
28-03-24 10:51 pm
HK News Desk
Arawind Kejriwal, Delhi HC: ಬಂಧಿತ ಕೇಜ್ರಿವಾಲ್...
28-03-24 04:36 pm
80 ವರ್ಷದ ಅಜ್ಜಿಗೆ ಮೊಮ್ಮಗ, ಪತ್ನಿಯಿಂದ ಮನಬಂದಂತೆ ಹ...
28-03-24 01:15 pm
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
29-03-24 01:49 pm
Mangalore Correspondent
ಏರ್ಪೋರ್ಟ್, ಎನ್.ಎಂ.ಪಿ.ಟಿ., ಕೆ.ಪಿ.ಟಿ.ಸಿ.ಎಲ್ ಕಾಂ...
28-03-24 10:56 pm
ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಕ...
28-03-24 07:12 pm
Manjunath Bhandary, KPCC working president: ಕ...
28-03-24 05:20 pm
Fire at seafood factory in Baikampady, Mangal...
28-03-24 04:52 pm
29-03-24 06:17 pm
Mangalore Correspondent
ಕೋವಿಡ್ ಸಮಯದಲ್ಲಿ ಉದ್ಯೋಗ ಕಳಕೊಂಡಿದ್ದ ಟೆಕ್ಕಿ ; ಲ...
29-03-24 05:09 pm
Gangster Politician Mukhtar Ansari; 68ಕ್ಕೂ ಅಧ...
29-03-24 09:32 am
Mangalore Valachil police raid: ವಳಚ್ಚಿಲ್ ; ಮನ...
28-03-24 10:30 pm
Udupi murder Nejar, Praveen Chowgule news: ಉಡ...
28-03-24 02:18 pm