ಬ್ರೇಕಿಂಗ್ ನ್ಯೂಸ್
12-10-22 04:44 pm HK News Desk ಕರ್ನಾಟಕ
ಕಾರವಾರ, ಅ.12 : ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಬೆಳೆಸಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ರಾತ್ರಿ ವೇಳೆ ಭಟ್ಕಳದಲ್ಲಿ ತಂಗಿ ಯಕ್ಷಗಾನ ವೀಕ್ಷಿಸಿದ್ದಲ್ಲದೇ, ಯಕ್ಷಗಾನ ಪೋಷಾಕು ಧರಿಸಿ ಮಿಂಚಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಸುಧಾಕರ್ ಗೆ ಯಕ್ಷಗಾನ ಹೊಸತು. ಹೀಗಾಗಿ ಕರಾವಳಿಯ ಗಂಡುಕಲೆಯ ಬಗ್ಗೆ ಮೆಚ್ಚುಗೆ ತೋರಿದ್ದಲ್ಲದೆ ತಾನೇ ವೇಷ ಧರಿಸಿ ವರಸೆ ನೋಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ವೀಕ್ಷಣೆಗಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಅಧಿಕಾರಿಗಳು ಕಾರವಾರ, ಕುಮಟಾ ಹಾಗೂ ಭಟ್ಕಳಕ್ಕೆ ಭೇಟಿ ನೀಡಿದ್ದರು. ಭಟ್ಕಳದಲ್ಲಿ ಸಮುದಾಯ ಆಸ್ಪತ್ರೆಯ ವೀಕ್ಷಣೆ ಬಳಿಕ ನೇರವಾಗಿ ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರ ಫಾರ್ಮ್ ಹೌಸ್ಗೆ ತೆರಳಿದ್ದರು. ಸಚಿವರಿಗೆ ಭರ್ಜರಿ ಸ್ವಾಗತ ನೀಡಿದ್ದ ಸುನಿಲ್ ನಾಯ್ಕ, ಸಚಿವರಿಗೆಂದೇ ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಆಯೋಜಿಸಿದ್ದರು.


ರಾತ್ರಿ ವೇಳೆ ಬಿರುಸಾದ ಮಳೆಯ ನಡುವೆಯೂ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನಿಲ್ ನಾಯ್ಕರ ಜೊತೆ ಬಡಗುತಿಟ್ಟು ಶೈಲಿಯಲ್ಲಿ "ಭೀಷ್ಮ ವಿಜಯ" ಯಕ್ಷಗಾನ ನೋಡಿದ ಸಚಿವರು ಸಂತೋಷಪಟ್ಟರು. ಯಕ್ಷಗಾನ ನೋಡಿದ ಬಳಿಕ ಕಲಾವಿದರ ಪೋಷಾಕು ಧರಿಸಿ ಸಚಿವರು ಖುಷಿಪಟ್ಟರು. ಕಲಾವಿದರ ಅನುಭವ ಪಡೆದುಕೊಂಡಿದ್ದಲ್ಲದೆ, ಯಕ್ಷಗಾನ ಧಿರಿಸಿನಲ್ಲೇ ಸಚಿವ ಡಾ. ಸುಧಾಕರ್ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ವೇದಿಕೆಯಲ್ಲಿ ಬಡಗುತಿಟ್ಟು ಶೈಲಿಯ ಪೋಷಾಕು ಧರಿಸಿ ಮಿಂಚಿದ ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನು ಕಂಡು ಪಕ್ಷದ ಕಾರ್ಯಕರ್ತರು ಕೊಂಡಾಡಿದರಲ್ಲದೇ, ಹಲವರು ಸಚಿವರ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು.
Karwar Minister Sudhakar in Yakshagana costume.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm