ಶಿವಮೊಗ್ಗ ಹರ್ಷ ಕುಟುಂಬಸ್ಥರಿಗೆ ಬೆದರಿಕೆ, ಒಬ್ಬನಿಗೆ ಹಲ್ಲೆ, ಕುಟುಂಬಕ್ಕೆ ಪೊಲೀಸ್ ಭದ್ರತೆ ನೀಡಲು ಒತ್ತಾಯ

25-10-22 06:56 pm       HK News Desk   ಕರ್ನಾಟಕ

ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಸ್ಥರಿಗೆ ಮತ್ತೆ ಬೆದರಿಕೆ ಹಾಕುವ ಪ್ರಯತ್ನ ನಡೆದಿದೆ. ಮನೆಯ ವಠಾರದಲ್ಲಿ ಠಳಾಯಿಸಿರುವ ಕಿರಾತಕರು ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ.

ಶಿವಮೊಗ್ಗ, ಅ.25: ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಸ್ಥರಿಗೆ ಮತ್ತೆ ಬೆದರಿಕೆ ಹಾಕುವ ಪ್ರಯತ್ನ ನಡೆದಿದೆ. ಮನೆಯ ವಠಾರದಲ್ಲಿ ಠಳಾಯಿಸಿರುವ ಕಿರಾತಕರು ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ. ಹೀಗಾಗಿ ಕೊಲೆಯಾದ ಹರ್ಷನ ಸೋದರಿ ಅಶ್ವಿನಿ, ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕೆಂದು ಪೊಲೀಸರಿಗೆ ಕೋರಿಕೆ ಸಲ್ಲಿಸಿದ್ದಾರೆ.

ಬೈಕಿನಲ್ಲಿ ಬಂದಿದ್ದ 9 ಮಂದಿಯಿದ್ದ ಯುವಕರು, ಹರ್ಷನ ಗೆಳೆಯರನ್ನು ಹಾಗೇ ಬಿಡುವುದಿಲ್ಲ. ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಹಿಂದು ಸಂಘಟನೆಯಲ್ಲಿ ಗುರುತಿಸಿರುವ ಒಬ್ಬ ಯುವಕನ ಸೋದರನ ಮೇಲೆ ಹಲ್ಲೆ ನಡೆಸಿದ್ದಾರೆ. ನಮ್ಮ ಕುಟುಂಬಕ್ಕೆ ಜಿಲ್ಲಾಡಳಿತ ಭದ್ರತೆ ಒದಗಿಸಬೇಕಾಗಿದೆ. ಎಂಟು ತಿಂಗಳ ಹಿಂದೆ ಸೋದರನನ್ನು ಕಳಕೊಂಡಿದ್ದೇವೆ. ಆ ಘಟನೆಯ ಬಳಿಕ ಹಲವು ಬಾರಿ ಹಲ್ಲೆ ಪ್ರಕರಣಗಳು ಮರುಕಳಿಸಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಶ್ವಿನಿ ಹೇಳಿದ್ದಾರೆ.

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯದ್ದೇ ಸರಕಾರ ಇದೆ. ಹಾಗಿದ್ದರೂ, ನಮಗೆ ಭದ್ರತೆ ಇಲ್ಲದಾಗಿದೆ. ನಮಗೆಲ್ಲಿ ರಕ್ಷಣೆ ಸಿಗುತ್ತದೆ. ಹಿಂದುತ್ವಕ್ಕಾಗಿ ಹೋರಾಡಿದ ಹರ್ಷನನ್ನು ಕೊಲೆ ಮಾಡಿದ್ದಾರೆ. ಹಿಂದುತ್ವಕ್ಕಾಗಿ ಕೆಲಸ ಮಾಡುವವರನ್ನು ಕೊಲೆಗೈಯುವ ಬೆದರಿಕೆ ಒಡ್ಡಿದ್ದಾರೆ. ಹಾಗಾದರೆ, ಇನ್ನೆಲ್ಲಿ ರಕ್ಷಣೆ ಸಿಗಲು ಸಾಧ್ಯ ಎಂದು ಅಶ್ವಿನಿ ಪ್ರಶ್ನಿಸಿದ್ದಾರೆ.

K S Eshwarappa sparks row with expletive against Congress leaders,  apologises later | Deccan Herald

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಈಶ್ವರಪ್ಪ, ಹರ್ಷನ ಕುಟುಂಬಸ್ಥರು ನನ್ನ ಕುಟುಂಬ ಸದಸ್ಯರಂತೆಯೇ. ಅವರಿಗೆ ರಕ್ಷಣೆ ನೀಡುವುದು ನನ್ನ ಮತ್ತು ಜಿಲ್ಲಾಡಳಿತದ ಜವಾಬ್ದಾರಿ. ಕೆಲವು ಮುಸ್ಲಿಮ್ ಗೂಂಡಾಗಳು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ಮುಸ್ಲಿಮರು ಅಂತ ಹೇಳುವುದಿಲ್ಲ. ಆದರೆ, ಇಂಥ ಕೃತ್ಯಗಳನ್ನು ಎಲ್ಲರೂ ಖಂಡಿಸಬೇಕಾಗಿದೆ. ಕಾಂಗ್ರೆಸಿಗರು ಯಾಕೆ ಇದನ್ನು ಖಂಡಿಸುವುದಿಲ್ಲ ಎಂದು ಪ್ರಶ್ನಿಸಿದರು. ಶಿವಮೊಗ್ಗ ನಗರ ಕ್ಷೇತ್ರವನ್ನು ಈಶ್ವರಪ್ಪ ಪ್ರತಿನಿಧಿಸುತ್ತಿದ್ದಾರೆ. ಇದೇ ವೇಳೆ, ಈ ಕ್ಷೇತ್ರದಲ್ಲಿ ಹರ್ಷ ಸೋದರಿಗೆ ಟಿಕೆಟ್ ಕೊಡಬೇಕೆಂದು ಹಿಂದು ಸಂಘಟನೆ ಕಾರ್ಯಕರ್ತರು ಅಭಿಯಾನ ನಡೆಸುತ್ತಿದ್ದಾರೆ .ಈ ಬಗ್ಗೆ ಕೇಳಿದ ಪ್ರಶ್ನೆಗೆ, ಪಕ್ಷ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧನಿದ್ದೇನೆ ಎಂದಿದ್ದಾರೆ.

A group of nine persons wielding weapons created ruckus and gave life threats to Harsha's family members late Monday evening. They also assaulted a person, whose brother was involved with the Hindu organisations."The authorities should protect our family. We had lost Harsha eight months ago. There have been many stabbing incidents reported in the region since then," she said.The BJP is ruling at the Centre and in the state. Shivamogga Assembly constituency is represented by the BJP, she added.