ಚೂಡಿದಾರ್ ಶಾಲು ಬೇಕರಿಯಲ್ಲಿ ಮೆಷಿನ್ ಗೆ ಸಿಲುಕಿ ಯುವತಿ ದುರಂತ ಸಾವು

11-02-23 10:54 pm       HK News Desk   ಕರ್ನಾಟಕ

ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಗೃಹಿಣಿಯೊಬ್ಬರು ಬೇಕರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮೆಷಿನ್ ಒಂದಕ್ಕೆ ಚೂಡಿದಾರ್ ಶಾಲು ಸಿಕ್ಕಿಕೊಂಡು ಉಸಿರುಕಟ್ಟಿ ದಾರುಣ ಸಾವಿಗೀಡಾದ ಘಟನೆ ಇಲ್ಲಿನ ತುಮ್ಮಿನಾಡಿನಲ್ಲಿ ನಡೆದಿದೆ.

ಮಂಜೇಶ್ವರ, ಫೆ.11: ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಗೃಹಿಣಿಯೊಬ್ಬರು ಬೇಕರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮೆಷಿನ್ ಒಂದಕ್ಕೆ ಚೂಡಿದಾರ್ ಶಾಲು ಸಿಕ್ಕಿಕೊಂಡು ಉಸಿರುಕಟ್ಟಿ ದಾರುಣ ಸಾವಿಗೀಡಾದ ಘಟನೆ ಇಲ್ಲಿನ ತುಮ್ಮಿನಾಡಿನಲ್ಲಿ ನಡೆದಿದೆ.

ಮೃತ ಯುವತಿಯನ್ನು ಜಯಶೀಲ(24) ಎಂದು ಗುರುತಿಸಲಾಗಿದೆ. ಶನಿವಾರ ಅವರ ಹುಟ್ಟುಹಬ್ಬವಾಗಿದ್ದು, ಬೇಕರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ದುರಂತ ನಡೆದಿದೆ. ಶನಿವಾರ ಮಧ್ಯಾಹ್ನ ಬೇಕರಿಯಲ್ಲಿ ಮೆಷಿನ್ ಒಂದಕ್ಕೆ ಕುತ್ತಿಗೆಯಲ್ಲಿದ್ದ ಚೂಡಿದಾರ್ ಶಾಲು ಸಿಕ್ಕಿಕೊಂಡು ಉಸಿರು ಕಟ್ಟಿದಂತಾಗಿ ಗಂಭೀರ ಸ್ಥಿತಿಗೆ ಒಳಗಾಗಿದ್ದಾರೆ. ಕೂಡಲೇ ಅವರನ್ನು ಸನಿಹದ ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಮೃತಪಟ್ಟಿದ್ದಾರೆ.

ಜಯಶೀಲ ಒಂದೂವರೆ ವರ್ಷದ ಹಿಂದಷ್ಟೇ ರಂಜನ್ ಎಂಬವರನ್ನು ಮದುವೆಯಾಗಿದ್ದರು. ಮೃತದೇಹವನ್ನು ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಇಡಲಾಗಿದೆ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

A woman labourer died on the day of her birthday itself as the veil of her chudidhar got stuck in the machine at Manjeshwar Thuminad. The deceased is identified as Jayasheela (22), wife of Ranjan. Jayasheela was working as a labourer in a bakery of Thuminad. When she was working as usual in the bakery, her shawl got stuck in the machine and she was seriously injured. Though she was rushed to the hospital, she could not be saved.