ಶಾಫಿ ಬೆಳ್ಳಾರೆ ಅಮಾಯಕ, ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ; ಎಸ್ಡಿಪಿಐ ರಾಜ್ಯಾಧ್ಯಕ್ಷ 

13-02-23 08:29 pm       HK News Desk   ಕರ್ನಾಟಕ

ಶಾಫಿ ಬೆಳ್ಳಾರೆ ಸ್ಪರ್ಧೆ ಮಾಡದಂತೆ ಅನರ್ಹ ಮಾಡಬೇಕೆಂದು ಹೇಳಲು ಪ್ರಮೋದ್ ಮುತಾಲಿಕ್ ಯಾರು ? ಶಾಫಿ ಬೆಳ್ಳಾರೆ ಒಬ್ಬ ಅಮಾಯಕ, ನಿರಪರಾಧಿ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿರುಗೇಟು ನೀಡಿದ್ದಾರೆ.

ಮೈಸೂರು, ಫೆ.13 : ಶಾಫಿ ಬೆಳ್ಳಾರೆ ಸ್ಪರ್ಧೆ ಮಾಡದಂತೆ ಅನರ್ಹ ಮಾಡಬೇಕೆಂದು ಹೇಳಲು ಪ್ರಮೋದ್ ಮುತಾಲಿಕ್ ಯಾರು ? ಶಾಫಿ ಬೆಳ್ಳಾರೆ ಒಬ್ಬ ಅಮಾಯಕ, ನಿರಪರಾಧಿ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿರುಗೇಟು ನೀಡಿದ್ದಾರೆ. ‌

ಆತನೇ SDPI ಪಕ್ಷದ ಪುತ್ತೂರು ಅಭ್ಯರ್ಥಿ. ಯಾವುದೇ ಕಾರಣಕ್ಕೂ ಅದನ್ನ ಬದಲಾಯಿಸುವುದಿಲ್ಲ.‌ ಚುನಾವಣಾ ಆಯೋಗಕ್ಕೆ ಯಾರು ಏನು ಬೇಕಾದರೂ ದೂರು ನೀಡಲಿ.‌ ಭಾರತೀಯ ಕಾನೂನು ಪ್ರಕಾರ ವಿಚಾರಣಾಧೀನ ಕೈದಿಗಳು ಸ್ಪರ್ಧಿಸುವುದಕ್ಕೆ ಅವಕಾಶ ಇದೆ. ಚುನಾವಣೆ ಆಯೋಗದಲ್ಲಿ ಅವಕಾಶ ಇರುವಾಗ ಅನರ್ಹ ಮಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. 

SDPI Ticket To Shafi Bellare-SDPI Ticket To Shafi Bellare In NIA Custody:  Ashok Akrosha – Jsnewstimes

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆತ ಭಾಗಿಯಾಗಿಲ್ಲ. ಶಾಫಿ ಬೆಳ್ಳಾರೆ ಒಂದು ಇರುವೆಯನ್ನೂ ಸಾಯಿಸದ ವ್ಯಕ್ತಿ.‌ ಕೊಲೆ ಪ್ರಕರಣದಲ್ಲಿ ಬಂಧಿಸಿದ ಮಾತ್ರಕ್ಕೆ ಎನ್ ಐಎ ಎಲ್ಲವೂ ಅಲ್ಲ. ಅದು ತೀರ್ಪನ್ನು ನೀಡುವ ಸಂಸ್ಥೆಯೂ ಅಲ್ಲ. ಪೀಪಲ್ ರೆಪ್ರೆಸೆಂಟೇಟಿವ್ಸ್ ಆಕ್ಟ್ ಪ್ರಕಾರ ಸ್ಪರ್ಧಿಸಬಹುದು. ಶಾಫಿ‌ ಬೆಳ್ಳಾರೆಗೆ ಆಗಿರುವ ಅನ್ಯಾಯ ಖಂಡಿಸಲು ಚುನಾವಣೆಗೆ ಸ್ಪರ್ಧೆಗೆ ಇಳಿಸಲಾಗುವುದು. ಮತದಾನದ ಮೂಲಕ ನಾವು ಆತನನ್ನ ಬಂಧಮುಕ್ತಗೊಳಿಸಲು ಚುನಾವಣೆಯಲ್ಲಿ ಸ್ಪರ್ಧೆ ನಡೆಸುವರು ಎಂದು ಹೇಳಿದ್ದಾರೆ. ‌

Puttur constituency ticket from SDPI to Shafi Bellare accused in murder, SDPI state president Abdul Majeed says hes innocent speaking to media persons in Mysuru. In a huge development, the Social Democratic Party of India (SDPI), a party considered to be a political wing of the banned organisation PFI (Popular Front of India), has announced to field Shafi Bellare, one of the accused in Bharatiya Janata Yuva Morcha (BJYM) leader Praveen Nettaru's murder case, for the upcoming Karnataka assembly elections which are scheduled to take place this year.