ಬ್ರೇಕಿಂಗ್ ನ್ಯೂಸ್
19-02-23 12:21 pm HK News Desk ಕರ್ನಾಟಕ
ಕಲಬುರಗಿ, ಫೆ.19: ಕಳೆದ ಬಾರಿ ಶಿವರಾತ್ರಿಯಂದೇ ಗಲಭೆಗೆ ಕಾರಣವಾಗಿದ್ದ ಅಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಈ ಸಲ ಶಾಂತಿಯುತ ಶಿವಲಿಂಗ ಪೂಜೆ ನಡೆಸಲಾಗಿದೆ. ಹಿಂದು - ಮುಸ್ಲಿಮರು ಒಂದೇ ದಿನ ಪೂಜೆ ಮತ್ತು ನಮಾಜ್ ನಡೆಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ.
ದರ್ಗಾದ ಒಳಗಿನ ವಿವಾದಿತ ಶಿವಲಿಂಗಕ್ಕೆ ಹಿಂದೂಗಳು ಪೂಜೆ ಸಲ್ಲಿಸಿದರೆ, ಮುಸ್ಲಿಂ ಸಮುದಾಯದವರು ನಮಾಜ್ ನಡೆಸಿದ್ದಾರೆ. ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಶಿವರಾತ್ರಿಯಂದು ಪೂಜೆ ಸಲ್ಲಿಸಬೇಕು ಎಂದು ಹಿಂದೂ ಮುಖಂಡರು ಅನುಮತಿ ಕೇಳಿದ್ದಕ್ಕೆ ಹೈಕೋರ್ಟ್ ಅವಕಾಶ ಕಲ್ಪಿಸಿತ್ತು. ಶಿವರಾತ್ರಿಯ ಒಂದು ದಿನ ದರ್ಗಾದ ಒಳಗೆ ಬಂದು ಹಿಂದುಗಳು ಸೀಮಿತ ಸಂಖ್ಯೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದರೂ ಜಿಲ್ಲಾಡಳಿತ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದರಿಂದ ಲಿಂಗಪೂಜೆ ಶಾಂತಿಯುತವಾಗಿ ಪೂರ್ಣಗೊಂಡಿದೆ.
ಕೋರ್ಟ್ ಆದೇಶದಂತೆ ದರ್ಗಾದಲ್ಲಿ ಬೆಳಗಿನ ವೇಳೆ 14 ಮುಸ್ಲಿಂ ಮುಖಂಡರು ತಮ್ಮ ರೀತಿಯಲ್ಲಿ ಆರಾಧನೆ, ಪ್ರಾರ್ಥನೆ ಮಾಡಿದರೆ, ಮಧ್ಯಾಹ್ನ 15 ಹಿಂದು ಮುಖಂಡರು ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಮಾಡಿದ್ದಾರೆ. ಬಿಗು ಬಂದೋಬಸ್ತ್ ನಡುವಲ್ಲೇ ಶಾಂತಿಯುತವಾಗಿ ಪೂಜೆ ನಡೆಸಿ ಹೊರಬಂದಿದ್ದಾರೆ. ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಶ್ರೀರಾಮ ಸೇನೆಯ ಸಿದ್ಧಲಿಂಗ ಸ್ವಾಮೀಜಿ, ಮುರಹರಿ ಮಹಾರಾಜ, ಶಾಸಕ ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮೂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹಿಂದುಗಳ ನಿಯೋಗದಲ್ಲಿದ್ದರು.
ಕಳೆದ ವರ್ಷ ಇದೇ ರೀತಿ ಹಿಂದುಗಳು ಪೂಜೆಗೈದು ಹೊರ ಬರುತ್ತಿದ್ದಂತೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಆಳಂದ ಪಟ್ಟಣದಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ 144 ಕಲಂ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಇದರಿಂದ ಪಟ್ಟಣದಲ್ಲಿ ಹೆಚ್ಚು ಜನ ಕೂಡಲು ಅವಕಾಶ ಇರಲಿಲ್ಲ. ಭದ್ರತೆಗಾಗಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
Aland town in Kalaburagi district of Karnataka was completely shut down on February 18 as representatives of both the Muslim and Hindu communities were allowed to perform Urus and Maha Shivaratri rituals at the historic Ladle Mashak dargah. The Karnataka Waqf Tribunal and later Kalaburagi bench of the Karnataka High Court issued orders allowing 15 members of the Muslim community to perform Urus rituals between 8 a.m. and 12 noon, and 15 members of the Hindu community, including Siddalinga swamy of Karuneshwara mutt in Jewargi, to offer pooja to the Raghava Chaitanya Shivalinga inside the dargah between 2 p.m. and 6 p.m.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 09:33 pm
HK News Desk
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
05-08-25 10:39 pm
Bangalore Correspondent
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm