ಒಬ್ಬಳು ಹಿಂದು ಹುಡುಗಿ ಹೋದರೆ, ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸ್ಕೊಂಡು ಬನ್ನಿ ; ನಾಲಿಗೆ ಹರಿಬಿಟ್ಟ ಮುತಾಲಿಕ್ 

20-02-23 03:32 pm       HK News Desk   ಕರ್ನಾಟಕ

ಒಬ್ಬ ಹಿಂದು ಹುಡುಗಿ ಲವ್ ಜಿಹಾದ್ ಮೂಲಕ ಮುಸ್ಲಿಂ ಆಗಿ ಮತಾಂತರಗೊಂಡರೆ, ಆ ಕಡೆಯಿಂದ ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊ‌ಂಡು ಬರಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

ಬಾಗಲಕೋಟೆ, ಫೆ.20 : ಒಬ್ಬ ಹಿಂದು ಹುಡುಗಿ ಲವ್ ಜಿಹಾದ್ ಮೂಲಕ ಮುಸ್ಲಿಂ ಆಗಿ ಮತಾಂತರಗೊಂಡರೆ, ಆ ಕಡೆಯಿಂದ ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊ‌ಂಡು ಬರಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

ಬಾಗಲಕೋಟೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಜನರಿಗೆ, ಹಿಂದೂಗಳ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಮುಸ್ಲಿಮರಿಗೆ ನಾವು ಎಚ್ಚರಿಕೆ ಕೊಡಬೇಕು. ಹಿಂದೂ ಯುವಕರಿಗೂ ಲೈನ್ ಹೊಡೆಯೋದು ಗೊತ್ತು. ತರುಣ ಶಕ್ತಿಗೆ ನಾನು ಆಹ್ವಾನ ಕೊಡುತ್ತೇನೆ, ಒಬ್ಬ ಹಿಂದೂ ಹುಡುಗಿ ಹೋದರೆ ಹತ್ತು ಮುಸ್ಲಿಂ ಹುಡುಗೀರನ್ನು ಹಾರಿಸ್ಬೇಕು ಎಂದು ನಾನು ಹೇಳುತ್ತೇನೆ. 

ನಿಮಗೆ ರಕ್ಷಣೆ, ಉದ್ಯೋಗ ಎಲ್ಲಾ ರೀತಿಯ ಜವಾಬ್ದಾರಿಯನ್ನು ಶ್ರೀರಾಮ ಸೇನೆ ಕೊಡುತ್ತದೆ ಎಂದು ಹೇಳಿದ್ದಾರೆ.

Pramod Muthalik, the controversial president of Sri Ram Sene in KarnatakaAddressing a public meeting in Bagalkot, Muthalik said, “We clearly know what is happening in Karnataka and I have a solution., on Sunday called upon Hindu men in the state to trap Muslim girls to counter 'love jihad', and assured them protection.