ಬ್ರೇಕಿಂಗ್ ನ್ಯೂಸ್
22-02-23 10:23 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.22: ಮಾಜಿ ಯೋಧನೊಬ್ಬನಿಗೆ ಸರಕಾರಿ ಜಾಗ ತೆಗೆಸಿಕೊಡುತ್ತೇನೆಂದು ಹೇಳಿ, 60-70 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಎಸಗಿರುವ ಮಂಗಳೂರಿನ ಅಬ್ದುಲ್ ರಜಾಕ್ ಎಂಬಾತನ ಬಗ್ಗೆ ಶಾಸಕ ಯುಟಿ ಖಾದರ್ ವಿಧಾನಸಭೆಯಲ್ಲಿ ಗಮನ ಸೆಳೆದಿದ್ದಾರೆ.
ಮಾಜಿ ಯೋಧ ವಿಕ್ರಂ ದತ್ತ ಎಂಬವರಿಗೆ ಸರಕಾರದ ಮಾನದಂಡದಡಿ ಕಡಿಮೆ ಬೆಲೆಗೆ ಸರಕಾರಿ ಜಾಗ ಸಿಗುತ್ತದೆ. ಅದೇ ನೀತಿಯಡಿ ಬಿಜೆಪಿ ನಾಯಕರ ದಲ್ಲಾಳಿಯಾಗಿ ಕೆಲಸ ಮಾಡುವ ಅಬ್ದುಲ್ ರಜಾಕ್ ಎಂಬಾತ ಯೋಧನ ಬಳಿಯಿಂದ 60-70 ಲಕ್ಷ ರೂ. ಹಣ ಪಡೆದು ವಂಚನೆ ನಡೆಸಿದ್ದಾನೆ. ಅಲ್ಲದೆ, ಯೋಧನಿಗೆ ಜಾಗದ ನಕಲಿ ಆದೇಶ ಪತ್ರಗಳನ್ನೂ ಕೊಡಿಸಿದ್ದಾನೆ. ಸರಕಾರದ ಜಂಟಿ ಕಾರ್ಯದರ್ಶಿ ಕೆ. ರವೀಂದ್ರನಾಥ ನಾಯ್ಕ ಸಹಿ ಮತ್ತು ಸೀಲ್ ಹಾಕಿ ನೀಡಿರುವ ಆದೇಶ ಪತ್ರಗಳನ್ನು ನೀಡಿದ್ದ. ಆದರೆ ವಿಕ್ರಮದತ್ತ ಅವರು ತನಗೆ ಸಿಕ್ಕ ಜಾಗದ ದಾಖಲೆ ಪಡೆದು ತೆರಳಿದಾಗ ಆ ಜಾಗವೇ ಇರಲಿಲ್ಲ ಎಂದು ಯುಟಿ ಖಾದರ್ ವಿಧಾನಸಭೆಯಲ್ಲಿ ಸ್ಪೀಕರ್ ಕಾಗೇರಿ ಅವರ ಗಮನಕ್ಕೆ ತಂದಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ ಹೇಗೆ ನಡೀತಿದೆ ಎನ್ನುವುದಕ್ಕಿದು ಉದಾಹರಣೆ. ಅಷ್ಟೇ ಅಲ್ಲದೆ, ಈ ಅಬ್ದುಲ್ ರಜಾಕ್ ಎನ್ನುವ ವ್ಯಕ್ತಿ ಪ್ರಧಾನಿ ಮೋದಿ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು, ಪ್ರಭಾವಿ ನಾಯಕರ ಆಪ್ತನಾಗಿ ಗುರುತಿಸಿಕೊಂಡಿದ್ದಾನೆ ಎಂದು ಸ್ಪೀಕರ್ ಗಮನ ಸೆಳೆದಾಗ, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆಯೇ ಎಂದು ಕೇಳಿದರು. ತನಗೆ ಹಣ ಮರಳಿ ಕೊಡು ಎಂದು ಯೋಧ ಕೇಳಿದ್ದಾರೆ. ಆದರೆ ಅಬ್ದುಲ್ ರಜಾಕ್ ತಾನೊಬ್ಬ ಪ್ರಭಾವಿ ವ್ಯಕ್ತಿಯೆಂದು ಹೇಳಿಕೊಂಡು ಹಣ ಕೊಡದೆ ವಂಚಿಸಿದ್ದಾನೆ. ಆತ ಪ್ರಭಾವಿ ಆಗಿರುವುದರಿಂದ ದೂರು ಕೊಟ್ಟರೂ ಏನೂ ಫಲಕಾರಿಯಾಗಲ್ಲ ಎಂದು ಯೋಧ ವಿಕ್ರಂ ದತ್ತ ನಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ಕಂದಾಯ ಸಚಿವ ಅಶೋಕ್ ಮತ್ತು ನಾನು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಅಬ್ದುಲ್ ರಜಾಕ್ ಎನ್ನುವಾತ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಪಿಎ ಎಂದು ಹೇಳಿಕೊಂಡು ಬಹಳಷ್ಟು ಅಕ್ರಮ ಎಸಗಿದ್ದಾನೆ ಅನ್ನುವ ಆರೋಪಗಳಿವೆ. ಅಲ್ಲದೆ, ಸಂಸದ ನಳಿನ್ ಕುಮಾರ್ ಅವರ ಖಾಸಾ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದಾನೆ. ಅಬ್ದುಲ್ ರಜಾಕ್ ವಿರುದ್ಧ ಚೆಕ್ ಬೌನ್ಸ್ ಸೇರಿದಂತೆ ಬಹಳಷ್ಟು ಅಕ್ರಮದ ಆರೋಪಗಳಿದ್ದು, ಪ್ರಕರಣ ದಾಖಲಾಗಿದೆ.
#Nalinkateel close aide cheats army personnel of getting govt land and cheats around 60 to 70 lakhs, MLA #UTkhader slams Kateel proving with documents in #cabinet today. Credit News First pic.twitter.com/QYTYpd6ehq
— Headline Karnataka (@hknewsonline) February 22, 2023
Nalin kateel close aide cheats army personnel of getting govt land and cheats around 60 to 70 lakhs, khader slams Kateel proving with documents in cabinet today.
06-11-25 03:06 pm
Bangalore Correspondent
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm